Shivrajkumar And Upendra: ಉಪೇಂದ್ರ ಜೊತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಶಿವಣ್ಣ, ಮತ್ತೆ ಒಂದಾದ ಸ್ಟಾರ್ ಜೋಡಿ.
Shivrajkumar And Upendra: ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಶಿವಣ್ಣ ಮತ್ತು ಉಪೇಂದ್ರ (Shivanna And Upendra) ಜೊತೆಯಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಅಪರೂಪದ ಜೋಡಿ ಸಿನಿಮಾವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೊಮ್ಮೆ ಈ ಜೋಡಿ ಒಟ್ಟಾಗಿ ನಟಿಸಲು ರೆಡಿಯಾಗಿದ್ದರಂತೆ.
![Shivanna shared the good news with Upendra, the reunited star couple.](https://nadunudi.in/wp-content/uploads/2022/12/shivarajkumar-anda-upnedra.jpg)
ಮತ್ತೊಮ್ಮೆ ಜೋಡಿಯಾಗಿ ಮಿಂಚಲಿರುವ ಕನ್ನಡದ ಸ್ಟಾರ್ ನಟರು
ಸ್ಯಾಂಡಲ್ ವುಡ್ (Sandalwood) ನಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರೋದೇ ಕಮ್ಮಿ. ಆದರೆ ಈಗ ಸ್ಯಾಂಡಲ್ ವುಡ್ ಸ್ಟಾರ್ ನಂತರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ.
ಒಬ್ಬರು ಕರುನಾಡಿಗೆ ಚಕ್ರವರ್ತಿ ಆದರೆ, ಇನ್ನಿಬ್ಬರು ಅಭಿಮಾನಿಗಳಿಗೆ ಚಕ್ರವರ್ತಿ. ಈ ಚಕ್ರವರ್ತಿಗಳ ಜೊತೆಗೆ ಈಗ ಗರುಡ ಗಮನ ವನ್ನೇರಿ ಅಬ್ಬರಿಸಿರೋ ಮೊಟ್ಟೆ ಸ್ಟಾರ್ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈ ಜೋಡಿಯ ಮೊದಲ ಚಿತ್ರ ಓಂ (OM Movie) ದಾಖಲೆಯನ್ನ ಟಚ್ ಮಾಡೋಕೆ ಆಗಿಲ್ಲ.
![Shiva Rajkumar to act in a new film with Upendra](https://nadunudi.in/wp-content/uploads/2022/12/upendra-and-shivarajkumar-scaled.jpg)
ಶಿವಣ್ಣ, ಉಪ್ಪಿ ಒಟ್ಟಿಗೆ ಬರುತ್ತಾರೆ ಅಂದರೆ ಅಲ್ಲಿ ದಾಖಲೆ ಫಿಕ್ಸ್ ಅನ್ನೋ ಟ್ರೆಂಡ್ ಸೆಟ್ ಮಾಡಿದೆ ಈ ಮಾಸ್ ಮಹಾರಾಜಾ ಕಾಂಬೋ. ಆದರೆ ಈ ಜೋಡಿ ಕೆಲವು ವರ್ಷಗಳಿಂದ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.
ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಉಪ್ಪಿ ಜೋಡಿ
ಲವ ಕುಶ ಬಂದ ನಂತರ ಈ ಜೋಡಿಯನ್ನು ಬೆಳ್ಳಿ ತೆರೆ ಮೇಲೆ ಒಟ್ಟಿಗೆ ಕಾಣಬೇಕು ಅನ್ನೋ ಲಕ್ಷಾಂತರ ಅಭಿಮಾನಿಗಳ ಕನಸು ಕನಸಾಗಿಯೇ ಉಳಿದಿದೆ. ಆದರೆ ಈಗ ಅಭಿಮಾನಿಗಳ ಬಹುದಿನದ ಕನಸು ನನಸಾಗೊ ಅಮೃತಘಳಿಗೆ ಬಂದಿದೆ.
ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಶಿವಣ್ಣ ಮತ್ತು ಉಪ್ಪಿ ಈಗ ಮತ್ತೆ ಒಟ್ಟಿಗೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಈ ಹಿಟ್ ಜೋಡಿಯ ಜೊತೆಗೆ ಒಂದು ಮೊಟ್ಟೆಯ ಕತೆ ಹೇಳಿ, ಗರುಡ ಗಮನನಾಗಿ ಮಾದೇವ ಮಾದೇವ ಅಂತ ಮೈ ಮರೆತು ಕುಣಿದು ಅಬ್ಬರಿಸಿದ ಉದಯೋನ್ಮುಖ ಪ್ರತಿಭೆ ರಾಜ್ ಬಿ ಶೆಟ್ಟಿ ಕೂಡ ಜಾಯಿನ್ ಆಗಿದ್ದಾರೆ.
![Siva Rajkumar and Upendra have decided to team up with Raj B Shetty to make a new film](https://nadunudi.in/wp-content/uploads/2022/12/upendra-and-shiva-rajkumar-news.jpg)
ಶಿವಣ್ಣ ಮತ್ತು ಉಪೇಂದ್ರ ಅವರನ್ನು ಒಟ್ಟಿಗೆ ನೋಡುವುದೇ ಸಿಹಿ ತಿಂದ ಹಾಗೆ ಇನ್ನು ಇವರ ಜೊತೆ ರಾಜ್ ಬಿ ಶೆಟ್ಟಿ (Raj B. Shetty) ಸೇರಿಕೊಂಡಿದ್ದಾರೆ ಅಂದರೆ ಭರ್ಜರಿ ಬಾಡೂಟ ಅಂತಿದ್ದಾರೆ ಸಿನಿರಸಿಕರು. ಆದರೆ ಈ ಮೂರು ಜನ ಸಕಲಕಲಾವಲ್ಲಭರನ್ನು ಒಟ್ಟಿಗೆ ಸೇರಿಸುವ ಸಾಹಸ ಮಾಡಿದವರು ಅರ್ಜುನ್ ಜನ್ಯ. ಶಿವಣ್ಣ ಮತ್ತು ಉಪ್ಪಿ ಅವರ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ.