PM- SYM: ಈ ಜನರ ಖಾತೆಗೆ ನೇರವಾಗಿ 36,000 ರೂ ವರ್ಗಾವಣೆ ಮಾಡಲು ಮುಂದಾದ ಸರ್ಕಾರ, ನಿಮಗೂ ಸಿಗಲಿದೆ ಹಣ.

ಅಸಂಘಟಿತ ವಲಯದ ಕಾರ್ಯಕರ್ತರಿಗೆ ಹೊಸ ಪಿಂಚಣಿ ಯೋಜನೆ, ಇಂದೇ ಅರ್ಜಿ ಸಲ್ಲಿಸಿ

Pradhan Mantri Shram Yogi Mandhan Yojana: ಕೇಂದ್ರ ಸರ್ಕಾರ ದೇಶದ ಜನತೆಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಮೋದಿ ನೇತೃತ್ವದಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ದೇಶದಲ್ಲಿ ತಲೆಯೆತ್ತಿಕೊಂಡಿವೆ.

ಇದೀಗ ಕೇಂದ್ರದ ಮೋದಿ ಸರಕಾರ ಅಸಂಘಟಿತ ವಲಯದ ಕಾರ್ಯಕರ್ತರಿಗೆ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಮಾಸಿಕ ಪಿಂಚಣಿ ಪಡೆಯಬಹುದು. ಮೋದಿ ಸರ್ಕಾರ ಈ ಪಿಂಚಣಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Shram Yogi Mandhan Yojana Latest News
Image Credit: NDTV

Pradhan Mantri Shram Yogi Mandhan Yojana
ಸದ್ಯ ಕೇಂದ್ರ ಸರ್ಕಾರ Pradhan Mantri Shramayogi Mandhan ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಿಶೇಷವಾಗಿ ಅಸಂಘಟಿತ ವಲಯವನ್ನು ಸುರಕ್ಷಿತವಾಗಿಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಪಿಂಚಣಿಯ ಲಾಭವನ್ನು ಪಡೆಯಬಹುದು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಈ ಯೋಜನೆ ಉತ್ತಮ ಆಯ್ಕೆ ಎನ್ನಬಹುದು.

ಮೋದಿ ಸರ್ಕಾರ ಹೊಸ ಪಿಂಚಣಿಯ ಯೋಜನೆ ಅಡಿಯಲ್ಲಿ 15,000 ರೂ ಹಾಗೂ ಅದಕ್ಕಿಂತ ಕಡಿಮೆ ಆದಾಯ ಹೊಂದಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ ಅಸಂಘಟಿತ ವಲಯ ಕಾರ್ಮಿಕ ಮಾಸಿಕ ಪಿಂಚಣಿಯನ್ನು ಪಡೆಯುವ ಮೂಲಕ ನಿವೃತ್ತಿಯ ನಂತರದ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಕಳೆಯಬಹುದಾಗಿದೆ.

Pradhan Mantri Shram Yogi Mandhan Yojana
Image Credit: Indiafilings

ಈ ಜನರ ಖಾತೆಗೆ ನೇರವಾಗಿ 36000 ರೂ ವರ್ಗಾವಣೆ ಮಾಡಲು ಮುಂದಾದ ಸರ್ಕಾರ
ಇನ್ನು 18 ರಿಂದ 40 ವರ್ಷ ವಯಸ್ಸಿನ ಜನರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ಮಾತ್ರ Pradhan Mantri Shramayogi Mandhan ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೀವು ಪ್ರತಿದಿನ 1.83 ರೂ. ಗಳನ್ನು ಉಳಿಸಬಹುದು. ನೀವು ಪ್ರತಿ ತಿಂಗಳು 55 ರೂ. ನಿಂದ 200 ರೂ. ಹೂಡಿಕೆ ಮಾಡಿದರೆ ಮಾಸಿಕ 3,000 ರೂಪಾಯಿ ಪಿಂಚಣಿ ಸಿಗುತ್ತದೆ.

Join Nadunudi News WhatsApp Group

60 ವರ್ಷ ಅವಯಸ್ಸಿನ ನಂತರ ವಾರ್ಷಿಕವಾಗಿ 36000 ರೂ. ಪಿಂಚಣಿಯನ್ನು ಪಡೆಯಬಹುದು.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ ರೂ. 3 ಸಾವಿರ ಪಿಂಚಣಿ ಪಡೆಯಬಹುದು. ಇನ್ನು https://maandhan.in/ ನಲ್ಲಿ ಶ್ರಮ ಯೋಗಿ Mandhan ಯೋಜನೆಯ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಬಹುದು. ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವ್ಯಾಪಾರ ವಿಳಾಸ, ಆದಾಯ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group