Image Credit: Original Source
Sumalatha Ambareesh Posted About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಆರೋಪದಡಿ ಜೈಲು ಪಾಲಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ದರ್ಶನ್ ಬಗ್ಗೆ ಪೋಸ್ಟ್ ಹಂಚಿಕೊಳ್ಳುವ ಮೂಲಕ ದರ್ಶನ್ ವಿರುದ್ಧ ನಿಂತಿದ್ದರು. ಇನ್ನು ಕೆಲ ಚಿತ್ರರಂಗದ ನಟ ನಟಿಯರು ದರ್ಶನ್ ಬಗ್ಗೆ ಪರೋಕ್ಷವಾಗಿ ಕೂಡ ಹೇಳಿಕೆ ನೀಡಿದ್ದಾರೆ.
ಆದರೆ ದರ್ಶನ್ ಪ್ರಕರಣದಲ್ಲಿ ಸಿಲುಕಿಕೊಂಡಾಗಿನಿಂದ ಚಿತ್ರರಂಗದಲ್ಲಿನ ದರ್ಶನ್ ಆಪ್ತರು ದರ್ಶನ್ ಪರ ನಿಂತಿಲ್ಲ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಹೈಲೈಟ್ ಆಗಿತ್ತು. ಆದರಲ್ಲೂ ತನ್ನ ದೊಡ್ಡ ಮಗ ಎನ್ನುತ್ತಿದ್ದ ಸುಮಲತಾ ಅಂಬರೀಷ್ ದರ್ಶನ್ ಬಗ್ಗೆ ಈವರೆಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದೀಗ ಹಲವು ಸಮಯದ ಬಳಿಕ ನಟಿ ಸುಮಲತಾ ದರ್ಶನ ಬಗ್ಗೆ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ.
ದರ್ಶನ್ ವಿಚಾರವಾಗಿ ಕೊನೆಗೂ ಮೌನಮುರಿದ ಸುಮಲತಾ
ನಟ ದರ್ಶನ್ ಅವರನ್ನು ಹಿರಿಯ ಮಗ ಎಂದು ಕರೆಯುವ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್, ದರ್ಶನ್ ಪ್ರಕರಣದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗಳು ಬಂದಿದ್ದವು. ಇದೀಗ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಪರೋಕ್ಷವಾಗಿ ಮೌನ ಮುರಿದಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ನಟಿ ಸುಮಲತಾ ಇಷ್ಟು ದಿನಗಳ ಬಳಿಕ ದರ್ಶನ್ ಅವರ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನುವ ಬಳಿಕ ಇಲ್ಲಿದೆ ಮಾಹಿತಿ.
ಮಗನ ಬಗ್ಗೆ ಸುಮಲತಾ ಹೇಳಿದ್ದೇನು ನೋಡಿ
ನಟಿ ಸುಮಲತಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೋರಿಯಲ್ಲಿ ಭಗವದ್ಗೀತೆ ಶ್ಲೋಕವನ್ನು ಪೋಸ್ಟ್ ಮಾಡಿದ್ದಾರೆ. ಭಗವದ್ಗೀತೆ ಶ್ಲೋಕವು ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವರಿಸುತ್ತದೆ. ಒಳ್ಳೆಯದು ಸಂಭವಿಸುವ ಮೊದಲು, ಕೆಟ್ಟದು ಸಂಭವಿಸುತ್ತದೆ. ಒಳ್ಳೆಯ ದಿನಗಳು ಬರುತ್ತವೆ, ಭರವಸೆ ಇಟ್ಟುಕೊಳ್ಳಬೇಕು ಎಂದು ಬರೆದಿದ್ದಾರೆ.
ದರ್ಶನ್ ಬಗ್ಗೆ ನಟಿ ಸುಮಲತಾ ಈ ಮಾತು ಬರೆದಿದ್ದಾರಾ…? ಎಂಬ ಪ್ರಶ್ನೆ ಎದ್ದಿದೆ. ದರ್ಶನ್ ವಿಚಾರದಲ್ಲಿ ಸುಮಲತಾ ಅಂಬರೀಶ್ ಮೌನ ಮುರಿದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದರೆ ದರ್ಶನ್ ಕೇಸ್ ಬಗ್ಗೆ ನಟಿ ಟ್ಯಾಗ್ ಮಾಡಿಲ್ಲ. ಈವರೆಗೆ ದರ್ಶನ್ ಕೇಸ್ ಬಗ್ಗೆ ಪ್ರತಿಕ್ರಿಸಿದ ನಟ ನಟಿಯರು #JucticeforRenykaswamy ಹ್ಯಾಶ್ ಟ್ಯಾಗ್ ಸೇರಿಸಿದ್ದರು. ಆದರೆ ನಟಿ ಸುಮಲತಾ ನಟ ದರ್ಶನ್ ಬಗ್ಗೆ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ನಟಿ ಸುಮಲತಾ ಸ್ಟೋರಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Tata Safari And Tata Harrier Discount Details: ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವು ಟಾಪ್ ಬೆಸ್ಟ್ ಬ್ರಾಂಡ್ ನ…
Yuva Nidhi Latest Update: ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ವೇಳೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವ ಬಗ್ಗೆ…
Good Loan v/s Bad Loan: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಎದುರಾದಾಗ ಪ್ರತಿಯೊಬ್ಬರೂ ಕೂಡ ಸಾಲದ ಮೊರೆ ಹೋಗುತ್ತಾರೆ. ದೇಶದ…
Atal Pension Yojana Investment Details: ನಿವೃತ್ತಿಯ ನಂತರ ಜೀವನ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುವುದು ಸಹಜ. ನಿವೃತ್ತಿಯ ನಂತರ…
Ather Rizta Electric Scooter Price And Feature: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ. ಸದ್ಯ…
Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು…