Tirupati Tmeple Golds: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗುವವರಿಗೆ ಇದೀಗ ಹೊಸ ಸುದ್ದಿ ಹೊರ ಬಿದ್ದಿದೆ. ತಿರುಪತಿ ದೇವಸ್ಥಾನದ (Tirupati Temple) ಗರ್ಭಗುಡಿ ಇನ್ನು ಸ್ವಲ್ಪ ದಿನಗಳಲ್ಲಿ ಮುಚ್ಚಲಿದೆ.
ಭಾರತದ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣನ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇನ್ನು ಬರುವ ಮುಂಡನ ವರ್ಷಕ್ಕೆ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ಇಲ್ಲ.
ಈಗಾಗಲೇ ಈ ವಿಚಾರದ ಬಗ್ಗೆ ಸುದ್ದಿ ಹೊರ ಬಿದ್ದಿದೆ. ದೇವರ ದರ್ಶನ ಪಡೆಯಲು ಬಯಸುವ ಭಕ್ತಾದಿಗಳು ಈಗಲೇ ಹೋಗಿ ದರ್ಶನ ಪಡೆಯುವುದು ಸೂಕ್ತ.
7-8 ತಿಂಗಳು ಮುಚ್ಚಲಿರುವ ತಿರುಪತಿ ತಿಮ್ಮಪ್ಪನ ಗರ್ಭಗುಡಿ
ಇನ್ನು ಮುಂದಿನ ವರ್ಷ 7-8 ತಿಂಗಳು ದೇವಾಲಯದ ಗರ್ಭಗುಡಿಯನ್ನು ಮುಚ್ಚುತ್ತಾರೆ. ತಿರುಪತಿ ದೇವಸ್ಥಾನದ ಲೇಪನವನ್ನು ಚಿನ್ನದಿಂದ ನಿರ್ಮಾಣ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಅದೆಷ್ಟೋ ವರ್ಷಗಳ ನಂತರ ದೇವಸ್ಥಾನದಲ್ಲಿ ಮತ್ತೆ ಚಿನ್ನದ ಲೇಪನ ತಯಾರಾಗುತ್ತಿದೆ. ಈ ದೇವರ ಕಾರ್ಯಕ್ಕಾಗಿ ಅನೇಕ ದಾನಿಗಳು ಹಣ ಸಹಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
140 ಕೆಜಿಯ ಚಿನ್ನವನ್ನು ಬಳಸಿ ದೇವಸ್ಥಾನ ಲೇಪನ ಮಾಡುತ್ತಾರೆ
ತಿರುಪತಿ ಗರ್ಭಗುಡಿಯನ್ನುಮುಚ್ಚಲು ಟಿಟಿಡಿ ಆಡಳಿತ ಮಂಡಳಿಯಿಂದ ಆದೇಶ ಬಂದಿದೆ. ಗರ್ಭಗುಡಿಯ ಲೇಪನವನ್ನು 140 ಕೆಜಿಯ ಚಿನ್ನವನ್ನು ಬಳಸಿ ಮಾಡಲಾಗುತ್ತಿದೆ ಅಂತೇ.
ಭಕ್ತರಿಗೆ ದೇವರ ದರ್ಶನಕ್ಕೆ ಹೋಗಲು ಅವಕಾಶ ಇದೆ. ತಾತ್ಕಾಲಿಕವಾಗಿ ದೇವರ ದರ್ಶನಕ್ಕಾಗಿ ಸಣ್ಣ ಗರ್ಭಗುಡಿಯನ್ನು ಸ್ಥಾಪಿಸಿ ದೇವರಿಗೆ ಪೂಜೆ ಹಾಗು ಭಕ್ತಾದಿಗಳಿಗೆ ದರ್ಶನದ ಅವಕಾಶ ನೀಡಲಾಗುತ್ತದೆ. 1958 ರಲ್ಲಿ ಚಿನ್ನದ ಲೇಪನ ಮಾಡಿಸಲಾಯಿತು ಅದಾದ ನಂತರ ಈಗ ಚಿನ್ನದ ಲೇಪನವನ್ನು ಮಾಡಲು ಕಾರ್ಯ ಕೈಗೊಂಡಿದ್ದಾರೆ.
ಭಕ್ತರಿಗೆ ದೇವರ ದರ್ಶನಕ್ಕಾಗಿ ಹೊಸ ನಿಯಮ
ತಿರುಪತಿ ದೇವಾಲಯದಲ್ಲಿ ಮೂರೂ ಅಂತಸ್ತಿನ ಲೇಪನವನ್ನು ಚಿನ್ನದಲ್ಲಿ ನಿರ್ಮಾಣ ಮಾಡುವ ಸಲುವಾಗಿ 7-8 ತಿಂಗಳು ಗರ್ಭಗುಡಿಯನ್ನು ಮುಚ್ಚಲಾಗುತ್ತದೆ. ದಾನಿಗಳು ಮಾಡುವ ಧನ ಸಹಾಯದಿಂದ ಈ ಚಿನ್ನದ ಲೇಪನವನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ವಿಚಾರದ ಬಗ್ಗೆ ದೇವಸ್ಥಾನದ ಸಂಸ್ಥಾಪಕರು ಹಲವಾರು ಬಾರಿ ಚರ್ಚೆ ನಡೆಸಿದರು.
ಇನ್ನು ಮುಂದಿನ ದಿನಗಳಲ್ಲಿ ಲೇಪನವನ್ನು ಚಿನ್ನದಲ್ಲಿ ನಿರ್ಮಾಣ ಮಾಡುವವರೆಗೂ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಪಾರು ಮಾಹಿತಿ ನೀಡಿದ್ದಾರೆ. ಭಕ್ತರಿಗೆ ದೇವರ ದರ್ಶನಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಹೊಸ ನಿಯಮವನ್ನು ಮಾಡಿದ್ದಾರೆ. ದೇವರ ದರ್ಶನಕ್ಕಾಗಿ ಸಣ್ಣ ದೇವಾಲಯವನ್ನು ನಿರ್ಮಿಸಿ ದೇವರಿಗೆ ಪೂಜೆ ಹಾಗು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…
New Rule For Pensioners: ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಸರ್ಕಾರೀ ನೌಕರರಿಗೆ ಹಾಗೆಯೆ ಪಿಂಚಣಿದಾರರಿಗೆ ಹೊಸ ಹೊಸ…