Tirupati Temple New Facility: ಪ್ರತಿನಿತ್ಯ ತಿರುಪತಿ ತಿರುಮಲನ (Venkateshwara Temple Tirumala) ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿದೇಶದಿಂದಲೂ ಕೂಡ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ. ಇನ್ನು ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಮಂಡಳಿಯು ವಿವಿಧ ಸೌಲಭ್ಯವನ್ನು ನೀಡುತ್ತದೆ. ಸದ್ಯ ತಿರುಪತಿಗೆ ಹೋಗುವವರಿಗೆ ಇನ್ನೊಂದು ವಿಶೇಷ ಸೌಲಭ್ಯವನ್ನು ಪರಿಚಯಿಸಲಾಗಿದೆ. ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಗುಡ್ ನ್ಯೂಸ್
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿಎಂ ಚಂದ್ರಬಾಬು ನಾಯ್ಡು ತಿರುಪತಿಯಲ್ಲಿ ಮೊದಲ ಸುಧಾರಣೆ ಮಾಡಿದ್ದಾರೆ. ಈ ಮೂಲಕ ಹಿರಿಯ ನಾಗರಿಕರಿಗೆ ಸಂತಸದ ಸುದ್ದಿ ನೀಡಿದ್ದಾರೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಿರುಪತಿ ವೆಂಕಟೇಶ್ವರನ ದರ್ಶನವನ್ನು ಉಚಿತವಾಗಿ ಪಡೆಯಬಹುದು.
ಹೌದು, ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಉಚಿತ ದರ್ಶನ ಮತ್ತು ಹಲವು ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಹಿರಿಯ ನಾಗರಿಕರಿಗಾಗಿ ತಿರುಮಲದಲ್ಲಿ ಎರಡು ಸ್ಲಾಟ್ ಗಳನ್ನು ನಿಗದಿಪಡಿಸಲಾಗಿದೆ. ಒಂದು ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ. ಹಿರಿಯ ನಾಗರಿಕರು ಫೋಟೋ ID ಜೊತೆಗೆ ವಯಸ್ಸಿನ ಪುರಾವೆಗಳನ್ನು ಸಲ್ಲಿಸಬೇಕು ಮತ್ತು S1 ಕೌಂಟರ್ ಗೆ ವರದಿ ಮಾಡಬೇಕು.
ಹಿರಿಯ ನಾಗರೀಕರಿಗಾಗಿ ಹೊಸ ಸೇವೆ
ಸೇತುವೆಯ ಕೆಳಗಿನ ಗ್ಯಾಲರಿಯಿಂದ ದೇವಸ್ಥಾನದ ಬಲ ಗೋಡೆಗೆ ರಸ್ತೆ ದಾಟಿದರೆ ಸಾಕು, ಮೆಟ್ಟಿಲು ಹತ್ತುವ ಅಗತ್ಯ ಇಲ್ಲ. ಅತ್ಯುತ್ತಮ ಆಸನ ವ್ಯವಸ್ಥೆಯೊಂದಿಗೆ ಅಡುಗೆಯನ್ನು ಒದಗಿಸಲಾಗಿದೆ. ಉಚಿತ ಬಿಸಿ ಅನ್ನ, ಸಾಂಬಾರ್, ಮೊಸರು, ಬಿಸಿ ಹಾಲು ಲಭ್ಯವಿದೆ. ದೇವಸ್ಥಾನದ ನಿರ್ಗಮನ ದ್ವಾರದ ಕಾರ್ ಪಾರ್ಕಿಂಗ್ ಪ್ರದೇಶದಿಂದ ಕೌಂಟರ್ ನಲ್ಲಿ ಹಿರಿಯ ನಾಗರಿಕರನ್ನು ಡ್ರಾಪ್ ಮಾಡಲು ಬ್ಯಾಟರಿ ಕಾರ್ ಲಭ್ಯವಿದೆ. ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಹಿರಿಯ ನಾಗರಿಕರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ದರ್ಶನ ಸರದಿಯ ನಂತರ ನೀವು 30 ನಿಮಿಷಗಳಲ್ಲಿ ದರ್ಶನದಿಂದ ನಿರ್ಗಮಿಸಬಹುದು.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…