Vijay Devarakonda About Samantha: ಟಾಲಿವುಡ್ ನ(Tollywood) ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾಲಿವುಡ್ ನ ವೆಬ್ ಸಿರೀಸ್ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅಭಿನಯದ ಶಾಕುಂತಲಂ ಚಿತ್ರ (Shaakuntalam Movie) ಫೆಬ್ರವರಿ 17 ರಂದು ತೆರೆಯ ಮೇಲೆ ಬರಲಿದೆ.
ಈ ನಡುವೆ ಸಮಂತಾ ವಿಜಯ್ ದೇವರಕೊಂಡ (Vijay Devarakonda) ಅಭಿಮಾನಿಗಳಲ್ಲಿ ಕ್ಷಮೆ ಕೇಳಿರುವುದು ವೈರಲ್ ಆಗಿದೆ. ಈ ವೇಳೆ ನಟ ವಿಜಯ್ ದೇವರಕೊಂಡ ನಟಿ ಸಮಂತಾ ಅವರ ಕ್ಷಮೆಗೆ ಪ್ರತಿಕ್ರಿಯಿಸಿದ್ದಾರೆ.
ವಿಜಯ್ ದೇವರಕೊಂಡ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ ನಟಿ ಸಮಂತಾ
ಖುಷಿ (Kushi) ಸಿನಿಮಾದ ಕಥೆ ಏನು? ಸಿನಿಮಾ ನಿಂತು ಹೋಯಿತಾ? ಎಂದು ಅಭಿಮಾನಿಯೊಬ್ಬರು ಸಮಂತಾ ಅವರಿಗೆ ಟ್ವಿಟರ್ ಖಾತೆಯಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಸಮಂತಾ ಉತ್ತರಿಸಿದ್ದಾರೆ.
“ನಾನು ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ಸದ್ಯದಲ್ಲೇ ಖುಷಿ ಸಿನಿಮಾ ಮತ್ತೆ ಶುರುವಾಗಲಿದೆ” ಎಂದು ಹೇಳಿದ್ದಾರೆ. ಇದೀಗ ನಟ ವಿಜಯ್ ಸಮಂತಾ ಅವರ ಕ್ಷಮೆಗೆ ಪ್ರತಿಕ್ರಿಯಿಸಿದ್ದಾರೆ.
ನಟಿ ಸಮಂತಾ ಕ್ಷಮೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ
ವಿಜಯ್ ದೇವರಕೊಂಡ ಅಭಿಮಾನಿಗಳು ಖುಷಿ ಚಿತ್ರದ ನಿರೀಕ್ಷೆಯೆಲ್ಲಿದ್ದರು. ಆದರೆ ಖುಷಿ ಚಿತ್ರದ ಬಗ್ಗೆ ಇತ್ತೀಚಿಗೆ ಯಾವುದೇ ಅಪ್ಡೇಟ್ ಕೇಳಿಬಂದಿಲ್ಲ. ಹಾಗಾಗಿ ವಿಜಯ್ ಅಭಿಮಾನಿಗಳು ಬೇಸರಗೊಂಡು ಸಮಂತಾ ಅವರಿಗೆ ಪ್ರಶ್ನೆ ಕೇಳಿದ್ದರು.
ನಟಿ ಸಮಂತಾ ವಿಜಯ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದು, ಇದೀಗ ವಿಜಯ್ ಸಮಂತಾ ಅವರ ಕ್ಷಮೆಗೆ ಪ್ರತಿಕ್ರಿಯಿಸಿದ್ದಾರೆ.”ನಾವೇಲ್ಲಾರು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಪೂರ್ಣ ಆರೋಗ್ಯದಿಂದ ನಗುತ್ತ ಹಿಂದಿರುಗುತ್ತಿದ್ದಾರೆಎಂದು ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ.
ಸಮಂತಾ ಹಾಗೂ ವಿಜಯ್ ನಟನೆಯ ಖುಷಿ ಸಿನಿಮಾ
ನಟಿ ಸಮಂತಾ ರುಥ್ ಪ್ರಭು ವಿಜಯ್ ದೇವರಕೊಂಡ ಈ ಹಿಂದೆ ಮಹನಟಿ ಸಿನಿಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಖುಷಿ ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ. ಇನ್ನು ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.