Ads By Google

Aniruddha Jatkar: ಹೊಸ ಧಾರಾವಾಹಿಯಲ್ಲಿ ನಟಿಸತ್ತಿರುವ ಅನಿರುದ್ದ್ ಬಗ್ಗೆ ಆರೂರು ಜಗದೀಶ್ ಹೇಳಿದ್ದೇನು?.

aniruddha jatkar new serial 1
Ads By Google

Aniruddha Jatkar: ಕಿರುತೆರೆಯ ಜೊತೆ ಜೊತೆಯಲಿ ಸೀರಿಯಲ್ (Jothe Jotheyali Kannada Serial) ನಲ್ಲಿ ನಟಿಸುತ್ತಿದ್ದ ಹೀರೋ ಅನಿರುದ್ದ್ ಜತ್ಕರ್. ಈ ಸೀರಿಯಲ್ ಸೆಟ್ (Serial Set) ನಲ್ಲಿ ಇವರು ಕಿರಿಕ್ ಮಾಡಿಕೊಂಡು ಸೀರಿಯಲ್ ನಿಂದ ಹೊರ ಬಂದಿದ್ದರು. ಇದೀಗ ಅವರು ಹೊಸದೊಂದು ಸೀರಿಯಲ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ನಟ ಅನಿರುದ್ದ್ ಹೊಸ ಧಾರಾವಾಹಿಗೆ ಸೂರ್ಯವಂಶ ಎಂದು ಹೆಸರಿಟ್ಟಿದ್ದಾರೆ.

Image Credit: timesofindia.indiatimes

ನಟ ಅನಿರುದ್ದ್ ಪ್ರತಿಕ್ರಿಯೆ
ನಟ ಅನಿರುದ್ದ್ ಜತ್ಕರ್ ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದರು. ನಿರ್ಮಾಪಕ ಆರೂರು ಜಗದೀಶ್ (Aroor Jagadish) ಅವರ ದೂರಿನ ಮೇರೆಗೆ ನಿರ್ಮಾಪಕರ ಸಂಘ ಅನಿರುದ್ದ್ ಅವರನ್ನು ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋ (Reality Show) ನಿಂದ ಎರಡು ವರ್ಷ ದೂರು ಇಡಲು ತೀರ್ಮಾನಿಸಿತ್ತು.

ಅನಿರುದ್ದ್ ಜತ್ಕರ್ ಕೈ ಬಿಟ್ಟು ನಿರ್ಮಾಕ ಆರೂರು ಜಗದೀಶ್ ಜೊತೆ ಜೊತೆಯಲಿ ಧಾರಾವಾಹಿಯನ್ನು ಮುಂದುವರೆಸಿದ್ದಾರೆ. ಕಿರುತೆರೆ ನಿರ್ಮಾಪಕ ಸಂಘದ ತೀರ್ಮಾನದ ಮೇರೆಗೆ ಪ್ರತಿಕ್ರಿಯಿಸಿದ್ದ ನಟ ಅನಿರುದ್ದ್ ಫಿಲ್ಮಿಬೀಟ್ ಗೆ ಪ್ರತಿಕ್ರಿಯಿಸಿದ್ದರು.

Image Credit: timesofindia.indiatimes

“ನಾನು ಯಾವುದೇ ಕಾರ್ಯಕ್ರಮದಲ್ಲಿ ಕೆಲಸ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದು ಅವರ ಅಧಿಕೃತ ಹೇಳಿಕೆಯು ಅಲ್ಲ, ನನಗೆ ಯಾವುದೇ ರೀತಿಯ ಪತ್ರಗಳು ಬಂದಿಲ್ಲ. ಅವರು ಆ ರೀತಿ ಹೇಳುವುದಕ್ಕೆ ಸಾಧ್ಯವೂ ಇಲ್ಲ” ಎಂದಿದ್ದರು.

ಹೊಸ ಧಾರಾವಾಹಿಯಲ್ಲಿ ಅನಿರುದ್ದ್
ಅನಿರುದ್ದ್ ಹೇಳಿದಂತೆ ಈಗ ಸೂರ್ಯವಂಶಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳಿಗೂ ಈ ವಿಚಾರ ಖುಷಿ ತಂದಿದೆ. ಎಸ್ ನಾರಾಯಣ (S.Narayana) ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅನಿರುದ್ದ್ (Anirudha) ಹೊಸ ಧಾರಾವಾಹಿ ಮಾಡುತ್ತಿರುವ ಬಗ್ಗೆ ಆರೂರು ಜಗದೀಶ್ ಫಿಲ್ಮಿಬೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅನಿರುದ್ದ್ ಅವರನ್ನು ಕಿರುತೆರೆಯಿಂದ ಎರಡು ವರ್ಷ ಹೊರ ಇಡಬೇಕು ಎಂದು ನಾನು ತೀರ್ಮಾನ ಕೈಗೊಳ್ಳಲಿಲ್ಲ. ನಿರ್ಮಾಪಕರ ಸಂಘ ಕೈಗೊಂಡ ನಿರ್ಧಾರ. ಸದ್ಯ ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದೀನಿ. ಈ ಬಗ್ಗೆ ನಿರ್ಮಾಪಕರು ಮಾತನಾಡಬೇಕು ಎಂದು ಆರೂರು ಜಗದೀಶ್ ಹೇಳಿದ್ದಾರೆ.

ಸದ್ಯ ಆರೂರು ಜಗದೀಶ್ ಭೂಮಿಗೆ ಬಂದ ಭಗವಂತ ಎಂಬ ಸೀರಿಯಲ್ ನಿರ್ದೇಶನ ಮಾಡುತ್ತಿದ್ದಾರೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಕೆಲಸಗಳಲ್ಲಿ ಬ್ಯುಸಿ ಆಗಿ ಇದ್ದೀನಿ. ಆದ್ದರಿಂದ ನಾನು ಅವರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.

Image Credit: vijaykarnataka
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field