Ads By Google

Yuva Wife Sridevi: ವಿಚ್ಛೇದನದ ಬಗ್ಗೆ ಕೊನೆಗೂ ಮೌನಮುರಿದ ಶ್ರೀದೇವಿ…? ಮಾಧ್ಯಮದ ಮುಂದೆ ಖಡಕ್ ಹೇಳಿಕೆ.

Ads By Google

Yuva Rajkumar And Sridevi Divorce:  ಸದ್ಯ ಸ್ಯಾಂಡಲ್ ವುಡ್ ನಟ ಯುವ ರಾಜಕುಮಾರ್ ಅವರು ತನ್ನ ಪತ್ನಿಯ ವಿರುದ್ಧ ಆರೋಪಗಳನ್ನು ಮಾಡಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್ ಕುಮಾರ್ ಜೂ.6 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಯುವ ರಾಜ್‌ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ.

ಯುವ ತಮ್ಮ ಪತ್ನಿಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದು, ಸದ್ಯ ಯುವ ಪತ್ನಿ ಶ್ರೀದೇವಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದ ಮುಂದೆ ತಮ್ಮ ಹಾಗು ಯುವ ರಾಜಕುಮಾರ್ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

Image Credit: Filmibeat

ವಿಚ್ಛೇದನದ ಬಗ್ಗೆ ಕೊನೆಗೂ ಮೌನಮುರಿದ ಶ್ರೀದೇವಿ…?
ಜೂನ್ 6 ರಂದು ಯುವ ರಾಜಕುಮಾರ್ ತಮ್ಮ ಪತ್ನಿಗೆ ವಿಚ್ಛೇದನದ ನೋಟಿಸ್ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ ಶ್ರೀದೇವಿ ಅವರು ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಷಯ ಏನೆಂದು ಚಿತ್ರರಂಗ ಮತ್ತು ಮಾಧ್ಯಮದ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್‌ ಗೆ ಉತ್ತರಿಸಿದ್ದೇನೆ.

ವಿಚ್ಛೇದನ ಅರ್ಜಿ ನನಗೆ ಇನ್ನೂ ಬಂದಿಲ್ಲ. ಸಿಕ್ಕ ಬಳಿಕ ನ್ಯಾಯಾಲಯಕ್ಕೆ ಉತ್ತರ ನೀಡುತ್ತೇನೆ. ಸದ್ಯಕ್ಕೆ ಬೇರೇನೂ ಮಾತನಾಡುವ ಮಾನಸಿಕ ಸ್ಥಿತಿಯಲ್ಲಿ ನಾನಿಲ್ಲ. ಈ ಸಮಯದಲ್ಲಿ ನೀವು ನನ್ನ ಮತ್ತು ನನ್ನ ಕುಟುಂಬದ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Image Credit: Filmibeat

ವಿಚ್ಛೇದನ ನೀಡಲು ಶ್ರೀದೇವಿ ಅವರಿಗೆ ಒಪ್ಪಿಗೆ ಇದೆಯಾ..?
ಇನ್ನು ಶ್ರೀದೇವಿ ವಿದ್ಯಾಭ್ಯಾಸಕ್ಕಾಗಿ ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದ್ದು, ಇದೇ ತಿಂಗಳು ವಿದೇಶದಿಂದ ವಾಪಸಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮತ್ತೊಂದೆಡೆ ಈ ವಿಚ್ಛೇದನವು ಪರಸ್ಪರ ಇಬ್ಬರ ಒಪ್ಪಿಗೆಯಿಂದ ಅಲ್ಲ ಎಂದು ಹೇಳಲಾಗುತ್ತಿದೆ. ಯುವ ಮತ್ತು ಶ್ರೀದೇವಿ ವಿಚ್ಛೇದನ ಪಡೆಯುತ್ತಿರುವುದು ದೊಡ್ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

ಇದಕ್ಕೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ಮಂಗಳಮ್ಮ ಮಾತ್ರ ಒಪ್ಪಿಗೆ ಸೂಚಿಸಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಗೀತಾ ಮತ್ತಿತರರು ಒಪ್ಪಲಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದೇನೇ ಇರಲಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಒಂದರ ಮೇಲೆ ಮತ್ತೊಂದು ವಿಚ್ಛೇದನದ ಸುದ್ದಿ ವೈರಲ್ ಆಗಿದ್ದು ಅಭಿಮಾನಿಗಳು ಈ ಬಗ್ಗೆ ಬೇಸರ ಹೊರಹಾಕುತ್ತಲೇ ಇದ್ದಾರೆ. ಸದ್ಯ ಯುವ ಮತ್ತು ಶ್ರೀದೇವಿ ಅವರ ವಿಚ್ಛೇದನದ ಪ್ರಕರಣ ಎಲ್ಲಿಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Image Credit: Times Now News
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: sridevi byrappa sridevi byrappa about yuva sridevi byrappa age sridevi byrappa and yuva sridevi byrappa instagram sridevi byrappa kannada sridevi byrappa latest news yuva rajkumar and sridevi divorce Yuva Wife Sridevi

Recent Stories

  • Headline
  • Information
  • Main News
  • Press
  • Regional

Darshan Case: ದರ್ಶನ್ ಗೆ ಮರಣದಂಡನೆ ಆಗುತ್ತಾ…? ಇನ್ನಷ್ಟು ಬಿಗಿಯಾದ ಪ್ರಕರಣ.

Darshan Case Latest Update: ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಜುಲೈ…

2024-07-02
  • Headline
  • Information
  • Main News
  • Press
  • Regional

Rain Alert: ಸಾರ್ವಜನಿಕರೇ ಎಚ್ಚರ, ಮುಂದಿನ 48 ಘಂಟೆ ಈ ಭಾಗಗಳಲ್ಲಿ ಭರ್ಜರಿ ಮಳೆ.

Karnataka Rain Alert: ಸದ್ಯ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.…

2024-07-02
  • Entertainment
  • Headline
  • Information
  • Interview
  • Main News
  • Press
  • Social media

Sumalatha Ambareesh: ದರ್ಶನ್ ವಿಚಾರವಾಗಿ ಕೊನೆಗೂ ಮೌನಮುರಿದ ಸುಮಲತಾ, ಮಗನ ಸುಮಲತಾ ಹೇಳಿದ್ದೇನು ನೋಡಿ

Sumalatha Ambareesh Posted About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಆರೋಪದಡಿ ಜೈಲು…

2024-07-02
  • Entertainment
  • Headline
  • Information
  • Main News
  • Press

Pavithra Gowda Case: ಸಂಕಷ್ಟದಲ್ಲಿ ಪವಿತ್ರ ಗೌಡ, ವಕೀಲರಿಂದ ಶಾಕಿಂಗ್ ಹೇಳಿಕೆ.

Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಾಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.…

2024-07-02
  • Business
  • Information
  • Main News
  • money
  • Press
  • Regional

7th Pay Update: 7 ನೇ ವೇತನ ಯಾವಾಗ ಹೆಚ್ಚಳ ಮತ್ತು ಯಾರಿಗೆ ವೇತನ ಸಿಗಲಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Govt Employees 7th Pay Latest Update: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು…

2024-07-02
  • Headline
  • Information
  • Main News
  • Politics
  • Press

CM Change: ಕರ್ನಾಟಕದ ಮುಖ್ಯಮಂತ್ರಿ ಚೇಂಜ್, ಶೀಘ್ರದಲ್ಲೇ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ.

Karnataka CM Change: ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ…

2024-07-02