Yuva Rajkumar Update: ಸುಳ್ಳು ಹೇಳಿ ಮದುವೆಯಾದ ಯುವ ರಾಜಕುಮಾರ್, ಕೊನೆಗೂ ಅಸಲಿ ಸತ್ಯ ಹೊರಕ್ಕೆ

ಮಗಳ ವಿಚ್ಛೇದನದ ಬಗ್ಗೆ ಭೈರಪ್ಪ ಮಾತು

Sridevi Father Paduvarahalli Byrappa: ಜೂನ್ 6 ರಂದು ಯುವ ರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶ್ರೀದೇವಿಗೂ ವಿಚ್ಛೇದನ ನೋಟಿಸ್ ಕಳುಹಿಸಲಾಗಿದೆ.

ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿರುದ್ಧ ಆರೋಪಗಳನ್ನು ಮಾಡಿದ್ದು, ಯುವ ಮಾಡುತ್ತಿರುವ ಆರೋಪಗಳಿಗೆ ಶ್ರೀದೇವಿ ಕೂಡ ಉತ್ತರ ನೀಡಿದ್ದಾರೆ. ಇದೆಲ್ಲದರ ನಡುವೆ ಶ್ರೀದೇವಿ ಅವರ ತಂದೆ ಭೈರಪ್ಪ ಅವರು ವಿಚ್ಛೇದನದ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ತನ್ನ ಮಗಳಿಗೆ ಎದುರಾದ ಸಮಸ್ಯೆಗಳ ಬಗ್ಗೆ ಭೈರಪ್ಪ ಅವರು ಎಲ್ಲವರು ಹೇಳಿಕೊಂಡಿದ್ದಾರೆ.

Sridevi Byrappa Father
Image Credit: Hosa Kannada

ಮಗಳ ವಿಚ್ಛೇದನದ ಬಗ್ಗೆ ಭೈರಪ್ಪ ಮಾತು
ಶ್ರೀದೇವಿ ಅವರ ತಂದೆ ಅಳಿಯ ಯುವ ಮತ್ತು ಆತನ ಪೋಷಕರಾದ ರಾಘವೇಂದ್ರ ರಾಜ್‌ ಕುಮಾರ್ ಮತ್ತು ಮಂಗಳಾ ವಿರುದ್ಧ ಆರೋಪ ಮಾಡಿದ್ದಾರೆ. ಯುವ-ಶ್ರೀದೇವಿ ದಾಂಪತ್ಯ ಕಲಹದ ವಿಚಾರದಲ್ಲಿ ಅಳಿಯನ ತಪ್ಪೇನೂ ಇಲ್ಲ. ಇದಕ್ಕೆಲ್ಲಾ ತಂದೆ-ತಾಯಿಯೇ ಕಾರಣ ಎಂದು ಬೈರಪ್ಪ ಹೇಳಿದರು. ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಎಲ್ಲವೂ ಚೆನ್ನಾಗಿತ್ತು. ಆಗಾಗ ನಮ್ಮ ಮನೆಗೆ ತಂದೆ-ತಾಯಿ ಜೊತೆ ಬರುತ್ತಿದ್ದ. ಈ ರೀತಿ ಮನೆಯಲ್ಲಿ ನಡೆದ ಘರ್ಷಣೆಯ ಬಗ್ಗೆ ನನ್ನ ಮಗಳು ಯಾವತ್ತೂ ನನಗೆ ಹೇಳಿಲ್ಲ ಎಂದರು. ಮದುವೆಯಾಗಿ 5 ವರ್ಷಗಳಾಗಿವೆ. ಇಬ್ಬರ ನಡುವೆ ಹೊಂದಾಣಿಕೆ ಇತ್ತು. ಆದರೆ ಮನೆಯವರ ಕಿರುಕುಳದ ಬಗ್ಗೆ ಮಗಳು ಹೇಳಿರಲಿಲ್ಲ. ನನ್ನ ಮಗಳು US ನಲ್ಲಿದ್ದಾಳೆ.

ಅಲ್ಲಿಗೆ ಹೋಗಿ ಒಂದು ವರ್ಷವಾಯಿತು, ಶಿಕ್ಷಣ ಮುಗಿಯಿತು. ಇನ್ನೇನು ಬರಬಹುದು. ನವೆಂಬರ್‌ ನಲ್ಲಿ ಮಗಳು ಬಂದಿದ್ದಳು. ಆಗ ಅವರ ಮನೆಯಲ್ಲಿ ಗಲಾಟೆ ನಡೆದಿತ್ತು. ನಂತರ ಅಳಿಯ ಬಂದು ಏನು ಮಾತನಾಡಲಿಲ್ಲ. ನನ್ನ ಮಗಳಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವಳ ಬಗ್ಗೆ ಸಿಲ್ಲಿ ಸಿಲ್ಲಿ ಮಾತನಾಡುವುದು, ಬೇಡದ ಮಾತುಗಳನ್ನು ಹೇಳುತ್ತಿದ್ದರು. ಇತ್ತೀಚೆಗೆ ನನ್ನ ಮಗಳು ಅಳುತ್ತಾ ಫೋನ್ ಮಾಡಿದಾಗ ಹೇಳಿದ್ದಳು. ಗಂಡ, ಅತ್ತೆ, ಮಾವ ಎಲ್ಲರಿತಂದಳು ಸಮಸ್ಯೆ ಇದೆ ಎಂದಿದ್ದಳು. ರಾಘವೇಂದ್ರ ರಾಜ್‌ ಕುಮಾರ್ ಮತ್ತು ಯುವ ತನ್ನ ಮಗಳನ್ನು ಬಲವಂತವಾಗಿ ವಿದೇಶಕ್ಕೆ ಓದಿಸಲು ಕಳುಹಿಸಿದ್ದಾರೆ. ಆ ನಂತರ ವಿಚ್ಛೇದನದ ವಿಚಾರ ಶುರುವಾಗಿದೆ ಎಂದಿದ್ದಾರೆ.

Sridevi Father Paduvarahalli Byrappa
Image Credit: Oneindia

ಬಿಇ ಓದಿದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾಗಿದ್ದರು
ವಿಚ್ಛೇದನದ ಅರ್ಜಿಗೆ ನನ್ನ ಮಗಳು ಪ್ರತಿಕ್ರಿಯಿಸಲಿ, ಕಾನೂನು ಹೋರಾಟ ಮಾಡೋಣ ಎಂದರು. ನನ್ನ ಮಗಳು ಈಗಲೂ ಒಟ್ಟಿಗೆ ಬಾಳುವ ಮನಸ್ಸು ಮಾಡಿದ್ದಾಳೆ. ನಮಗೂ ಅದು ಬೇಕು. ಆದರೆ ಮಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ಮದುವೆಯಾದ ಮರುದಿನದಿಂದಲೇ ಕಿರುಕುಳ ಶುರುವಾಗಿದೆ ಎಂದು ಹೇಳಿದ್ದಾರೇ. ಇಬ್ಬರೂ ಪ್ರೀತಿಸಿ ಮದುವೆಯಾದರು.

Join Nadunudi News WhatsApp Group

ರಾಘಣ್ಣನ ಮನೆಯವರು ಬಂದು ಮದುವೆ ಮಾಡುವಂತೆ ಒತ್ತಾಯಿಸಿದರು. ಯುವ ರಾಜ್‌ ಕುಮಾರ್‌ ಗೆ ಸಿನಿಮಾ ಅವಕಾಶಗಳು ಬರಲು ನನ್ನ ಮಗಳೇ ಕಾರಣ. ನನ್ನ ಮಗಳೇ ಅವನನ್ನು ಬಾಂಬೆಯಲ್ಲಿ ಇಟ್ಟುಕೊಂಡು ತರಬೇತಿ ಕೊಡಿಸಿದ್ದಳು. ತಾನು ಬಿಇ ಓದಿದ್ದೇನೆ ಎಂದು ಹೇಳಿದ್ದರು. ಇವರು ಎಸ್ ಎಸ್ ಎಲ್ ಸಿ ಓದಿದ್ದಾರೆ. ಆದರೂ ನನ್ನ ಮಗಳನ್ನು ಮದುವೆ ಮಾಡಿಕೊಟ್ಟೆ. ಯುವ ನನ್ನೊಂದಿಗೆ ಚೆನ್ನಾಗಿದ್ದರು. ಗೌರವ ನೀಡುತ್ತಿದ್ದರು. ಅವರ ತಂದೆ ತಾಯಿಯರದ್ದು ಸಂಬಂಧದ ವಿಚಾರದಲ್ಲಿ ಎಲ್ಲ ನಾಟಕ ಎಂದಿದ್ದಾರೆ.

Yuva Rajkumar And Sridevi Divorce New Update
Image Credit: Times Now News

Join Nadunudi News WhatsApp Group