Sridevi Byrappa Father: ಯುವ ರಾಜಕುಮಾರ್ ಮಗಳಿಗೆ ವಿಚ್ಛೇದನ ನೀಡಲು ಅಸಲಿ ಕಾರಣ ತಿಳಿಸಿದ ಶ್ರೀದೇವಿ ಭೈರಪ್ಪ ತಂದೆ
ಯುವ-ಶ್ರೀದೇವಿ ವಿಚ್ಛೇದನದ ಬಗ್ಗೆ ಶ್ರೀದೇವಿ ತಂದೆ ಶಾಕಿಂಗ್ ಹೇಳಿಕೆ
Sridevi Byrappa Father About Divorce: ರಾಜ್ ಕುಮಾರ್ ಕುಡಿ ಇದೀಗ ದಿಢೀರ್ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಯುವ ತಮ್ಮ ಪತ್ನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಎನ್ನಬಹುದು. ಜೂನ್ 6 ರಂದು ಯುವ ರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಶ್ರೀದೇವಿಗೂ ವಿಚ್ಛೇದನ ನೋಟಿಸ್ ಕಳುಹಿಸಲಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿರುದ್ಧ ಆರೋಪಗಳನ್ನು ಮಾಡಿದ್ದು, ಯುವ ಮಾಡುತ್ತಿರುವ ಆರೋಪಗಳಿಗೆ ಶ್ರೀದೇವಿ ಕೂಡ ಉತ್ತರ ನೀಡಿದ್ದಾರೆ. ಇದೆಲ್ಲದರ ನಡುವೆ ಶ್ರೀದೇವಿ ಅವರ ತಂದೆ ಭೈರಪ್ಪ ಅವರು ವಿಚ್ಛೇದನದ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
![Sridevi Byrappa Father](https://nadunudi.in/wp-content/uploads/2024/06/Sridevi-Byrappa-Father.png)
ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ
ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಮೈಸೂರಿನವರು. ಸಾಂಸ್ಕೃತಿಕ ನಗರಿಯಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಪೂರೈಸಿದವರು. ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಮದುವೆಗೆ ಮುನ್ನ ಏಳು ವರ್ಷಗಳ ಕಾಲ ಸ್ನೇಹಿತರಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ, ಗೆಳೆತನ ಪ್ರೇಮಕ್ಕೆ ತಿರುಗಿ, ಮೈಸೂರಿನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಇದೀಗ ತಮ್ಮ ನಾಲ್ಕು ವರ್ಷದ ವೈವಾಹಿಕ ಜೀವನವನ್ನು ಕೊನೆಗಾಣಿಸಲು ಹೊರಟಿದ್ದಾರೆ.
ವಿನಯ್ ರಾಜ್ ಕುಮಾರ್ ಅಭಿನಯದ ‘ರನ್ ಆಂಟೋನಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಶ್ರೀದೇವಿ ಭೈರಪ್ಪ ಪರೋಕ್ಷವಾಗಿ ಭಾಗಿಯಾಗಿದ್ದರು. ಇದಾದ ನಂತರ ಶ್ರೀದೇವಿ ಭೈರಪ್ಪ ಡಾ.ರಾಜಕುಮಾರ್ ಅವರ ಕುಟುಂಬದವರು ನಡೆಸುತ್ತಿರುವ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಣ್ಣಾವ್ರ ಕುಟುಂಬದಲ್ಲಿ ಇಷ್ಟು ಅನ್ಯೋನ್ಯವಾಗಿದ್ದ ಶ್ರೀದೇವಿ ನಿಜಕ್ಕೂ ಕಿರುಕುಳ ಅನುಭವಿಸಿದ್ರ…? ಎನ್ನುವುದು ಸದ್ಯದ ಪ್ರಶೆಯಾಗಿದೆ. ಈ ಬಗ್ಗೆ ಶ್ರೀದೇವಿ ತಂದೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
![Sridevi Byrappa Father About Divorce](https://nadunudi.in/wp-content/uploads/2024/06/Sridevi-Byrappa-Father-About-Divorce.png)
ಯುವ-ಶ್ರೀದೇವಿ ವಿಚ್ಛೇದನದ ಬಗ್ಗೆ ಶ್ರೀದೇವಿ ತಂದೆ ಶಾಕಿಂಗ್ ಹೇಳಿಕೆ
ಇನ್ನು ಬೈರಪ್ಪ ತಮ್ಮ ಮಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಯುವ ನನ್ನೊಂದಿಗೆ ಈ ಬಗ್ಗೆ ಮಾತನಾಡಲಿಲ್ಲ. ಇದುವರೆಗೂ ನನ್ನ ಬಳಿ ಬಂದಿಲ್ಲ ಎಂದಿದ್ದಾರೆ. ನನ್ನ ಮಗಳು ಕಿರುಕುಳಕ್ಕೊಳಗಾಗಿದ್ದರು ನಾನು ನೊಂದುಕೊಳ್ಳುತ್ತೇನೆ ಎಂದು ಹೇಳಿರಲಿಲ್ಲ ಎಂದು ಶ್ರೀದೇವಿ ತಂದೆ ಬೈರಪ್ಪ ಹೇಳಿದ್ದಾರೆ. ಶ್ರೀದೇವಿಗೆ ನಿಜಕ್ಕೂ ದೊಡ್ಮನೆ ಕಿರುಕುಳ ಆಗಿದ್ಯಾ….? ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ. ದೊಡ್ಮನೆ ಕುಟುಂಬದಿಂದ ಬಹಳಷ್ಟು ಕುಟುಂಬಗಳು ಒಂದಾಗಿವೆ. ಹೀಗಿರುವಾಗ ಇಂತಹ ಮನೆಯಲ್ಲಿ ಹೀಗೆ ಆಯ್ತಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
![Yuva Rajkumar's Father-in-Law](https://nadunudi.in/wp-content/uploads/2024/06/Yuva-Rajkumars-Father-in-Law.png)