Darshan Imprisonment: ಜಿಮ್ ಇಲ್ಲ, ಸ್ನಾನ ಇಲ್ಲ ಮತ್ತು ಸರಿಯಾದ ಊಟ ಇಲ್ಲ…! ಜೈಲಿನಲ್ಲಿ ಹೇಗಿದೆ ದಾಸನ ಸ್ಥಿತಿ.
ಜೈಲಿನಲ್ಲಿ ದರ್ಶನ್ ಸ್ಥಿತಿ ಹೇಗಿದೆ...? ಜೈಲಿನಲ್ಲಿ ಕಷ್ಟಪಡುತ್ತಿದ್ದಾರೆ ನಟ ದರ್ಶನ್
Darshan Imprisonment: ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ದರ್ಶನ್ ಹಾಗೂ 17 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಜೂನ್ 20 ರಂದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದು ಇದೀಗ ಮತ್ತೆ ನಾಲ್ಕು ಜನ ಆರೋಪಿಗಳನ್ನು ಎರಡು ದಿನ ಕಸ್ಟಡಿಗೆ ನೀಡಲು ಆದೇಶ ಹೊರಡಿಸಲಾಗಿದೆ.
ಪೊಲೀಸ್ ವಕೀಲರ ಕೋರಿಕೆಯ ಮೇರೆಗೆ ಎ2 ಆರೋಪಿ ದರ್ಶನ್ ಜೊತೆಗೆ ಎ9 ಧನರಾಜ್, ಎ10 ವಿನಯ್ ಮತ್ತು ಎ14 ಪ್ರದೋಶ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ಯಲು ನ್ಯಾಯಾಲಯ ಆದೇಶಿಸಿದೆ. ಸ್ಟಾರ್ ಸೆಲೆಬ್ರೆಟಿ ಆಗಿರುವ ದರ್ಶನ್ ಜೈಲಿನಿಂದಲೇ ವಿಚಾರಣೆಗೆ ಬರುತ್ತಿದ್ದರೆ. ಜೈಲಿನಲ್ಲಿ ದಾಸನ ಸ್ಥಿತಿ ಕಂಡು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಅಷ್ಟಕು ಜೈಲಿನಲ್ಲಿ ದರ್ಶನ್ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ನಾವೀಗ ಒಂದಿಷ್ಟು ಅಪ್ಡೇಟ್ ನೀಡಲಿದ್ದೇವೆ.
ಜೈಲಿನಲ್ಲಿ ಹೇಗಿದೆ ದಾಸನ ಸ್ಥಿತಿ
ಇನ್ನು ದರ್ಶನ್ ರೇಣುಕಾಸ್ವಾಮಿ ಕೊಲೆ ವಿಚ್ಛ್ರಾವಾಗಿ ಜೈಲು ಪಾಲಾಗಿರುವ ಸುದ್ದಿ ಈಗಲೂ ನಂಬಲಸಾದ್ಯವಾಗಿದೆ. ಖ್ಯಾತ ನಟ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ದರ್ಶನ್ ಈ ನಡೆಗೆ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ದರ್ಶನ್ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಮತ್ತೆ ಎರಡು ದಿನ ಕಸ್ಟಡಿಗೆ ತರಲಾಗಿದೆ. ಇನ್ನು ಪವಿತ್ರ ಗೌಡ ಸೇರಿದಂತೆ 10 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸದ್ಯ ಕಸ್ಟಡಿಯಲ್ಲಿರುವ ದರ್ಶನ್ ಸ್ಥಿತಿ ನೋಡಿದ ಜನರು ಶಾಕ್ ಆಗುತ್ತಿದ್ದಾರೆ. ಸೆಲೆಬ್ರೆಟಿ ಜೀವನ ನೆಡೆಸುತ್ತಿರುವ ದರ್ಶನ್ ಜೈಲಿನಲ್ಲಿ ಈ ರೀತಿ ಇರುವುದು ನೋಡಿ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಜಿಮ್ ಇಲ್ಲ, ಸ್ನಾನ ಇಲ್ಲ ಮತ್ತು ಸರಿಯಾದ ಊಟ ಇಲ್ಲ…!
ದರ್ಶನ್ ಕೆಲವು ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ತನಗೆ ಬೇಕಾದಾಗ ಮಲಗುತ್ತಿದ್ದರು, ಬೇಕೆಂದಾಗ ಎದ್ದೇಳುತ್ತಿದ್ದರು. ಸಿನಿಮಾಗಾಗಿ ಜಿಮ್ ಗೆ ಹೋಗುತ್ತಿದ್ದರು. ಇದಲ್ಲದೆ, ಸ್ನಾನಕ್ಕಾಗಿ ಐಷಾರಾಮಿ ಟಬ್ ಅನ್ನು ಬಳಸಲಾಗುತ್ತದೆ. ರುಚಿಕರ ತಿಂಡಿಯನ್ನು ಸವಿಯುತ್ತಿದ್ದರು. ಇದರೊಂದಿಗೆ ಸ್ನೇಹಿತರು, ಅಭಿಮಾನಿಗಳು ದರ್ಶನ್ ಗಾಗಿ ಕಾಯುತ್ತಿದ್ದರು.
ಮಧ್ಯಾಹ್ನ ಶುರುವಾದ ಪಾರ್ಟಿ, ತಡರಾತ್ರಿಯವರೆಗೂ ಬಿಂದಾಸ್ ಜೀವನ, ಮಲಗಲು ಕಿಂಗ್ ಸೈಜ್ ಬೆಡ್ ಬಳಸುತ್ತಿದ್ದ ದರ್ಶನ್ ಈಗ ಪೊಲೀಸ್ ಸ್ಟೇಷನ್ ನಲ್ಲಿ ದಿನ ಕಳೆಯುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಏಳಬೇಕು. ಜೈಲಿನಲ್ಲಿ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಜಿಮ್ ಇಲ್ಲ. ಸ್ನಾನ ಕೂಡ ಪ್ರತಿದಿನ ಅಲ್ಲ. ಇಡ್ಲಿ ವಡೆ ತಿನ್ನಬೇಕು. ನೆಲದ ಮೇಲೆ ಕುಳಿತುಕೊಳ್ಳಬೇಕು. ಮಧ್ಯಾಹ್ನ ಸಾಂಬಾರಿನೊಂದಿಗೆ ಅನ್ನ ಸವಿಯಬೇಕು. ರಾತ್ರಿಯು ಅನ್ನ ಸಾಂಬಾರ್ ತಿನ್ನಬೇಕು. ದರ್ಶನ್ ದಿಂಬು ಇಲ್ಲದೆ ಹಾಸಿಗೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ ಎನ್ನಬಹುದು.