Aryavardhan Guruji: ಆರ್ಯವಧನ್ ಗುರೂಜಿಯ 300 ಕೋಟಿ ಚಿತ್ರದಲ್ಲಿ ನಟ ಸುದೀಪ್, ಆರ್ಯವರ್ಧನ್ ಜೊತೆ ಸಿನಿಮಾ ಮಾಡುತ್ತಾರೆ ಕಿಚ್ಚ.
Aryavardhan Guruji: ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ (kiccha Sudeep) ಅವರನ್ನು ನೋಡಲು ಕಿಚ್ಚನ ಅಭಿಮಾನಿಗಳು ವಾರಂತ್ಯದವರೆಗೂ ಕಾಯುತ್ತಲೇ ಇರುತ್ತಾರೆ. ವಾರದ ಕತೆ ಕಿಚ್ಚನ ಜೊತೆ ಎನ್ನುವ ಟೈಟಲ್ ನೊಂದಿಗೆ ಕಿಚ್ಚ ಸುದೀಪ್ ವೀಕ್ ಎಂಡ್ ನಲ್ಲಿ ಮನೆ ಮನೆಗೆ ಎಂಟ್ರಿ ಕೊಡುತ್ತಾರೆ.
ಬಿಗ್ ಬಾಸ್ ಸೀಸನ್ (Bigg-Boss) ಇದೀಗ ಕೊನೆಯ ಹಂತದಲ್ಲಿದೆ. ಕನ್ನಡಿಗರ ಜನಪ್ರಿಯ ಶೋ ಆದ ಬಿಗ್ ಬಾಸ್ ಇನ್ನೇನು ಕೆಲವೇ ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಇನ್ನು ವೀಕ್ ಎಂಡ್ ಬಂದ ಕೂಡಲೇ ಎಲಿಮಿನೇಷನ್ ಪ್ರಕ್ರಿಯೆ ನಡೆದೇ ನಡೆಯುತ್ತದೆ. ಸಾಕಷ್ಟು ಜನ ಎಲಿಮಿನೇಟ್(Eliminate) ಆಗಿ ಕೂಡ ಹೋಗಿದ್ದಾರೆ. ಇನ್ನು ಕೇವಲ 8 ಜನ ಬಿಗ್ ಬಾಸ್ ನಲ್ಲಿ ಉಳಿದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಎಂಟು ಜನ ಸ್ಪರ್ದಿಗಳಿದ್ದಾರೆ
ಇನ್ನು ಅನುಪಮಾ ಗೌಡ ಮನೆಯಿಂದ ಹೊರಗೆ ಬಿದ್ದಿದ್ದು ಬಿಗ್ ಬಾಸ್ ಮನೆಯಲ್ಲಿ ಕೇವಲ 8 ಜನ ಸ್ಪರ್ಧಿಗಳು ಉಳಿದಿದ್ದಾರೆ. ರಾಕೇಶ್ ಅಡಿಗ, ಅಮೂಲ್ಯ ಗೌಡ, ದಿವ್ಯ ಉರುಡುಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್ ಹಾಗೂ ಆರ್ಯವರ್ಧನ್ ಗೂರೂಜಿ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.
ಸುದೀಪ್ ಗೆ ಆಕ್ಷನ್ ಕಟ್ ಹೇಳಬೇಂಕತೆ ಆರ್ಯವರ್ಧನ್ ಗುರೂಜಿ (Aryavardhan Gurooji)
ವಾರದ ಕತೆ ಕಿಚ್ಚನ ಜೊತೆ ಎನ್ನುವ ಟೈಟಲ್ ನೊಂದಿಗೆ ಕಿಚ್ಚ ಸುದೀಪ್ ವೀಕ್ ಎಂಡ್ ನಲ್ಲಿ ಮನೆ ಮನೆಗೆ ಬರುತ್ತಾರೆ. ಇನ್ನು ಮನೆಯವರ ಜೊತೆ ಕಿಚ್ಚ ಮಾತನಾಡುತ್ತಿದ್ದಾರೆ. ಹೀಗಿರುವಾಗ ಒಂದು ವಿಶೇಷ ಸುದ್ದಿ ಹೊರಬಿದ್ದಿದೆ. ಹೌದು ಬಿಗ್ ಬಾಸ್ ನ ಆರ್ಯವರ್ಧನ್ ಗೂರೂಜಿ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳರು ಹೊರಟಿದ್ದಾರೆ.
ಕಿಚ್ಚನಿಗಾಗಿ ಬಿಗ್ಗ್ ಬಾಸ್ ಮನೆಯಲ್ಲಿ ಕಥೆ ಬರೆದ ಗುರೂಜಿ
ಆರ್ಯವರ್ಧನ್ ಗುರೂಜಿ ಕಿಚ್ಚನಿಗಾಗಿ ಬಿಗ್ ಬಾಸ್ ಮನೆಯಲ್ಲಿ ಒಂದು ಕಥೆ ಬರೆದಿದ್ದಾರಂತೆ. ನೀವು ನಟಿಸಬೇಕು ಎಂದು ಗುರೂಜಿ ಕೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆ ನಿಮ್ಮನ್ನ ಭೇಟಿ ಮಾಡುತ್ತೇನೆ. ಕಥೆ ಹೇಳುತ್ತೇನೆ ಎಂದು ಸುದೀಪ್ ಗೆ ಹೇಳಿದ್ದಾರೆ.
300 ಕೋಟಿ ಬಜೆಟ್ ನಲ್ಲಿ ಸಿನಿಮಾ ಮಾಡುತ್ತೇನೆ ಎಂದ ಗುರೂಜಿ
ನನ್ನ ಕಥೆಯಲ್ಲಿ ನೀವು ನಟಿಸಬೇಕು ಎಂದು ಮನವಿ ಮಾಡಿದ್ದಾರೆ. 300 ಕೋಟಿ ಬಜೆಟ್ ನಲ್ಲಿ ಸಿನಿಮಾ ಮಾಡುತ್ತೇನೆ. ಇದೊಂದು ದೆವ್ವದ ಕಥೆಯಾಗಿದ್ದು, ಹೀರೋನೂ ನೀವೇ, ದೆವ್ವನು ನೀವೇ ಎಂದು ಗುರೂಜಿ ಹೇಳಿದ್ದಾರೆ.
ಗುರೂಜಿ ಒನ್ ಲೈನ್ ಸ್ಟ್ರೋರಿಗೆ ಸುದೀಪ್ ಕಿರುನಗೆ ಬೀರಿದ್ದಾರೆ. ಇವರಿಬ್ಬರ ಮಾತುಕತೆ ಮನೆಮಂದಿಗೆ ಖುಷಿ ಕೊಟ್ಟಿದೆ. ಒಟ್ಟಿನಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾರಾ, ಶೋ ನಲ್ಲಿ ಇದು ಮಾತುಕತೆ ಅಷ್ಟೇನಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.