Paramahans Acharya: ಶಾರುಖ್ ಖಾನ್ ಅನ್ನು ಜೀವಂತ ಸುಟ್ಟು ಹಾಕುತ್ತೇನೆ ಎಂದು ಹೇಳಿದ ಅಯ್ಯೋದ್ಯಶ್ರೀ, ವಿವಾದಕ್ಕೆ ಕಾರಣವಾಗುತ್ತಾ ಹೇಳಿಕೆ.
Paramahans Acharya: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan) ಚಿತ್ರದ ಹಾಡೊಂದು ಬಾರಿ ವಿವಾದಕ್ಕೆ ಗುರಿಯಾಗಿತ್ತು.
ದೀಪಿಕಾ ಪಡುಕೋಣೆ ಭೇಷ್ ರಂ ರಂಗ್ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟಿದ್ದು, ಆ ಹಾಡಿನಲ್ಲಿನ ಸಾಹಿತ್ಯವು ಕೇಸರಿ ಬಣ್ಣಕ್ಕೆ ಅವಮಾನವಾಗುವ ರೀತಿ ಇದೆ ಎಂದು ಹಿಂದೂ ಪರ ಹೋರಾಟಗಾರರು ಕಿಡಿಕಾರಿದ್ದರು. ಪಠಾಣ್ ಚಿತ್ರವನ್ನು ಬಾಯ್ಕಟ್ ಮಾಡಿ ಎನ್ನುವ ಹೋರಾಟ ಹೆಚ್ಚಾಗುತ್ತಲೇ ಇದೆ.
ಇದರ ನಡುವೆಯೇ ಅಯೋದ್ಯೆಯ ಸ್ವಾಮೀಜಿ ಮಹಾಂತ ಪರಮಹಂಸ ಆಚಾರ್ಯ ಅವರು ಶಾರುಖ್ ಖಾನ್ ಅವಾರ್ ಪಠಾಣ್ ಸಿನಿಮಾದ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಮಹಾಂತ ಪರಮಹಂಸ ಆಚಾರ್ಯ (Mahanta Paramahamsa Acharya) ಅವರು ನೀಡಿದ ಹೇಳಿಕೆ
“ಬೇಷ ರಂ ರಂಗ್ ಹಾಡಿನಲ್ಲಿ ಕೆಸರಿನ ಬಣ್ಣವನ್ನು ಅವಮಾನಿಸಲಾಗಿದೆ. ಈ ಬಗ್ಗೆ ಸನಾತನ ಧರ್ಮದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸಿನಿಮಾದ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನಾನು ಶಾರುಖ್ ಖಾನ್ ನನ್ನ ಭೇಟಿಯಾದರೆ ಅವನನ್ನು ಜೀವಂತ ಸುಟ್ಟು ಹಾಕುತ್ತೇನೆ” ಎಂದು ಹೇಳಿದ್ದಾರೆ.
ಮಾತನ್ನು ಮುಂದುವರೆಸಿದ ಮಹಾಂತ ಪರಮಹಂಸ ಆಚಾರ್ಯ ಅವರು ಪಠಾಣ್ ಥಿಯೇಟರ್ ನಲ್ಲಿ ಬಿಡುಗಡೆಯಾದರೆ ಸುಟ್ಟು ಹಾಕುತ್ತೇನೆ. ಪಠಾಣ್ ಸಿನಿಮಾವನ್ನು ಬಾಯ್ಕಟ್ ಮಾಡಿ ಎಂದು ಅವರು ಹೇಳಿದ್ದಾರೆ.
ಪಠಾಣ್ ಸಿನಿಮಾದ ಎರಡನೇ ಹಾಡು ಬಿಡುಗಡೆ
ಮದ್ಯ ಪ್ರದೇಶ ಹದೂ ಮುಂಬೈ ನಲ್ಲಿ ಸಿನಿಮಾದ ವಿರುದ್ಧ ಹೆಚ್ಚು ಪ್ರತಿಭಟನೆ ನಡೆಯುತ್ತಿದೆ. ಇತ್ತೀಚಿಗೆ ಮುಂಬೈ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ಸಿನಿಮಾದ ಬೇಷ ರಂ ರಂಗ್ ನಲ್ಲಿ ಕೇಸರಿ ಬಣ್ಣವನ್ನು ಅವಮಾನಕಾರಿ ರೀತಿಯಲ್ಲಿ ತೋರಿಸಲಾಗಿದೆ ಎಂದು ದೂರು ಧಾಖಲಾಗಿದೆ.
ಇದೆಲ್ಲದರ ನಡುವೆ ಪಠಾಣ್ ಸಿನಿಮಾದ ಎರಡನೇ ಹಾಡು “ಜೂಮ್ ಜೋ ಜೂಮ್ ಪಠಾಣ್” (Zoom Zoo Zoom Pathan) ಡಿಸೆಂಬರ್ 22 ರಂದು ರಿಲೀಸ್ ಆಗಲಿದೆ.
ಅಪರೂಪದ ಸಾಧನೆ ಮಾಡಿದ ಶಾರುಖ್ ಖಾನ್
ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ (Empire Magazine), ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ಇನ್ನು ಶಾರುಖ್ ಖಾನ್ ಅವರ ಈ ವಿಶೇಷ ಸಾಧನೆ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆದರು ಕೂಡ ಸೋಶಿಯಲ್ ಮಿಡಿಯಾದಲ್ಲಿ ಪಠಾಣ್ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.