Aryavardhan Guruji Book: ಪುಸ್ತಕ ಬರೆಯಲು ರೆಡಿಯಾದ ಆರ್ಯವರ್ಧನ್ ಗುರೂಜಿ, ಮಹಾತ್ಮಾ ಗಾಂಧಿ ಪುಸ್ತದಂತೆ ಇರುತ್ತದೆ.
Bigg Boss Aryavardhan Guruji: ಕನ್ನಡ ಜನಪ್ರಿಯ ಶೋ ಬಿಗ್ ಬಾಸ್ ಇನ್ನೇನು ಫಿನಾಲೆ ಹಂತಕ್ಕೆ ತಲುಪಿದೆ. ಇನ್ನು ಒಂದೇ ದಿನದಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎನ್ನುದನ್ನು ತಿಳಿಯಬಹುದು.
ಬಿಗ್ ಬಾಸ್ ಮನೆಯಲ್ಲಿ ಕೊನೆಯ ವಾರದಲ್ಲಿ 6 ಮಂದಿ ಸ್ಪರ್ಧಿಗಳಿದ್ದರು. ವಾರದ ಎರಡನೆಯ ದಿನವೇ ಆರ್ಯವರ್ಧನ್ ಗುರೂಜಿ ಮಿಡ್ ನೈಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಬಿಗ್ ಬಾಸ್ ಫಿನಾಲೆಗೆ ಐವರು ಎಂಟ್ರಿ ಆಗಿದ್ದು, ನಿನ್ನೆ ಗ್ರಾಂಡ್ ಫಿನಾಲೆಯಲ್ಲಿ ದಿವ್ಯ ಉರುಡುಗ ಹೊರ ಬಂದಿದ್ದಾರೆ.
ಪುಸ್ತಕ ಬರೆಯಲು ಹೊರಟ ಗುರೂಜಿ
ಆರ್ಯವರ್ಧನ್ ಗುರೂಜಿ ಪುಸ್ತಕ ಬರೆಯುವ ಮುನ್ಸೂಚನೆಯನ್ನು ನೀಡಿದ್ದಾರೆ. ನಾನು ಪುಸ್ತಕ ಬರೆದರೆ ಅದು ಮಹಾತ್ಮಗಾಂದಿಜಿ (Mahatma Gandhiji) ಪುಸ್ತಕದಂತೆ ಇರುತ್ತದೆ. ಸಾಂಸಾರಿಕ ಜೀವನಕ್ಕೂ ನಂಬರ್ ಗಳಿಗೂ ಏನು ಸಂಬಂಧ ಎನ್ನುದನ್ನು ಅದರಲ್ಲಿ ವಿವರಿಸುತ್ತೇನೆ. ಯಾವ ಸಿನಿಮಾ, ಯಾವ ಮಹಾಭಾರತದಲ್ಲೂ ಇದರ ಬಗ್ಗೆ ಉಲ್ಲೇಖವಿಲ್ಲ. ಮೊದಲು ನನ್ನ ಬಗ್ಗೆಯೇ ಬರೆಯುತ್ತೇನೆ ಎಂದು ಗುರೂಜಿ ಹೇಳಿದ್ದಾರೆ.
ಸಂಖ್ಯಾಶಾಸ್ತ್ರದ ಬಗ್ಗೆ ಮಾತನಾಡಿದ ಆರ್ಯವರ್ಧನ್ ಗುರೂಜಿ
ದಿವ್ಯ ಉರುಡುಗ (Divya Uruduga)ಹಾಗೂ ಅರವಿಂದ್ (Aravind) ಮದುವೆಯಾದರೆ ಡೈವರ್ಸ್ ಆಗುತ್ತದೆ ಎಂದು ಗುರೂಜಿ ಹೇಳಿದ್ದರು. ಯಾವಾಗಲು ವಿರುದ್ದದ ದಿನಾಂಕದವರು ಬೆಸ್ಟ್ ಫ್ರೆಂಡ್ ಆಗಿರುತ್ತಾರೆ ಹೊರತು ಜೀವನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದು ಗುರೂಜಿ ಹೇಳಿದ್ದರು.
ರೂಪೇಶ್ ಪರ ಮಾತನಾಡಿದ ಆರ್ಯವರ್ಧನ್ ಗುರೂಜಿ
ರೂಪೇಶ್ ಶೆಟ್ಟಿ (Roopesh Sheety) ಹಾಗೂ ದಿವ್ಯ ಉರುಡುಗ ಬಗ್ಗೆ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ. ನನಗೆ ದಿವ್ಯ ಉರುಡಾಗಗಿಂತ ರೂಪೇಶ್ ಶೆಟ್ಟಿಯೇ ಹೆಚ್ಚು.
ನಾನು ಎಲಿಮಿನೇಷನ್ ಆದಾಗ ರೂಪೇಶ್ ಶೆಟ್ಟಿ ಅತ್ತನೇ ಹೊರತು ದಿವ್ಯ ಅಳಲಿಲ್ಲ. ಬಿಗ್ ಬಾಸ್ ನಲ್ಲಿ ಟಾಸ್ಕ್ ನೀಡಿದಾಗ ನಾನು ಮಗನಿಗಾಗಿ ಸೋತಿದ್ದೇನೆ. ರೂಪೇಶ್ ಶೆಟ್ಟಿ ಮೊದಲ ಸ್ಥಾನದಲ್ಲಿ ಇರಬೇಕು ಎಂಬ ಆಸೆ ನನ್ನದು ಎಂದು ಗುರೂಜಿ ಹೇಳಿಕೊಂಡಿದ್ದಾರೆ.
ಇನ್ನು ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಬಹಳ ಉತ್ತಮವಾಗಿ ಆಟವಾಡಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಗುರೂಜಿಯ ಮಿಡ್ ನೈಟ್ ಎಲಿಮಿನೇಷನ್ ನಿಂದ ಸಾಕಷ್ಟು ಜನರು ಬೇಸರಗೊಂಡಿದ್ದಾರೆ. ಮನೆಯಿಂದ ಹೊರ ಬಂದ ಗುರೂಜಿ ಇದೀಗ ಸಂದರ್ಶನದಲ್ಲಿ ಮಾತನಾಡುತ್ತ ಇರುತ್ತಾರೆ.