Darshan Case: ಅಂದು ಶೆಡ್ ನಲ್ಲಿ 50 ನಿಮಿಷಗಳ ಕಾಲ ಆಗಿದ್ದೇನು ಗೊತ್ತಾ…? ಸ್ಪೋಟಕ ಮಾಹಿತಿ.

ಅಂದು ಶೆಡ್ ನಲ್ಲಿ 50 ನಿಮಿಷಗಳ ಕಾಲ ಆಗಿದ್ದೇನು ಗೊತ್ತಾ...?

Darshan Case New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಸಿಗುತ್ತಿದೆ. ಪೊಲೀಸರು ಪ್ರಕರಣ ತನಿಖೆ ನಡೆಸಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ದರ್ಶನ್ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಪ್ರತಿ ವಿಷಯವನ್ನು ಕೂಡ ಕಲೆಹಾಕಲಾಗಿದೆ. ಈ ಸಮಯದಲ್ಲಿ ದರ್ಶನ್ ರೇಣುಕಾಸ್ವಾಮಿ ಮೇಲೆ ಯಾವ ರೀತಿ ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ.

ಸಿನಿಮಾದಲ್ಲಿ ಹೀರೊ ಪಾತ್ರದಲ್ಲಿ ನಟಿಸುತ್ತಿರುವ ದರ್ಶನ್, ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಮೇಲೆ ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ ಶೆಡ್ ನಲ್ಲಿ ದರ್ಶನ್ ಎಷ್ಟು ಸಮಯ ಇದ್ದರು…? ರೇಣುಕಾಸ್ವಾಮಿ ಮೇಲೆ ಎಷ್ಟು ಸಮಯದವರೆಗೆ ಹಲ್ಲೆ ಮಾಡಿದ್ದರು ಅನ್ನುವ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

Darshan Case Latest Update
Image Credit: Hindustantimes

ಅಂದು ಶೆಡ್ ನಲ್ಲಿ 50 ನಿಮಿಷಗಳ ಕಾಲ ಆಗಿದ್ದೇನು ಗೊತ್ತಾ…?
ಸದ್ಯ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ರಿವೀಲ್ ಆಗಿದೆ. ಹೌದು, ಶೆಡ್ ನಲ್ಲಿ ಬರೋಬ್ಬರಿ 50 ನಿಮಿಷಗಳ ಕಾಲ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ಕೊಲೆಯಾದ ದಿನ ದರ್ಶನ್ ಬೆಂಗಳೂರಿನ ಆರ್ ಆರ್ ನಗರದ ಪಟ್ಟಗೆರೆ ಶೆಡ್ ಗೆ ವಿನಯ್ ಜೊತೆ ಬಂದಿದ್ದರು. ಸಂಜೆ 4:30ಕ್ಕೆ ಬಂದು 5:20ಕ್ಕೆ ಶೆಡ್ ನಿಂದ ಹೊರಟು ಹೋಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇನ್ನು 4:30 ರಿಂದ 5:20 ರ ಮಧ್ಯ ರೇಣುಕಾ ಸ್ವಾಮಿ ಅವರ ಮೇಲೆ 30 ನಿಮಿಷಗಳ ಕಾಲ ದರ್ಶನ್ ಹಲ್ಲೆ ನಡೆಸಿದರು.

ರೇಣುಕಾ ಸ್ವಾಮಿ ಮೇಲೆ ಈ ರೀತಿ ಕ್ರೌರ್ಯ ತೋರಿದ್ರ ದರ್ಶನ್…!
ಹೌದು, ಸಿನಿಮಾ ಮಾದರಿಯಲ್ಲಿ ರೇಣುಕಾ ಸ್ವಾಮಿ ಮೇಲೆ ದರ್ಶನ್ ಕ್ರೌರ್ಯ ತೋರಿದ್ದಾರೆ. ವಾಹನಗಳ ಮೇಲೆ ರೇಣುಕಾ ಸ್ವಾಮಿಯನ್ನು ದರ್ಶನ್ ಎಸೆದಿದ್ದಾರೆ. ರೇಣುಕಾ ಸ್ವಾಮಿಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ ಸಂದೇಶವನ್ನು ಓದಲು ದರ್ಶನ್ ಪವನ್ ಹೇಳಿದ್ದರಂತೆ. ಪವನ್ ಒಂದೊಂದು ಮೆಸೇಜ್ ಓದುತ್ತಿದ್ದಂತೆ ಅದೇ ಕೋಪದಲ್ಲಿ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.

Join Nadunudi News WhatsApp Group

ಒಂದೊಂದು ಮೆಸೇಜ್ ನ ಕೋಪವನ್ನು ದರ್ಶನ್ ಸ್ವಾಮಿ ಮೇಲೆ ತೀರಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ. ದರ್ಶನ್ 50 ನಿಮಿಷಗಳ ಕಾಲ ಶೆಡ್ ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪೊಲೀಸರು ದರ್ಶನ್ ಬಳಿ ವಿಚಾರಣೆ ನಡೆಸಿದಾಗ ಹಲ್ಲೆ ಮಾಡಿರುವುದಾಗಿ ದರ್ಶನ್ ಹೇಳಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಪವಿತ್ರ ಗೌಡ ಕೂಡ ಹೇಳಿಕೆ ನೀಡಿದ್ದಾರೆ.

Actor Darshan And Renukaswamy
Image Credit: Indian Express

Join Nadunudi News WhatsApp Group