Ramya Amrithadhare Movie: ಅಂದು ರಮ್ಯಾ ಪ್ರಾಣಕ್ಕೆ ಬಂದಿತ್ತು ಕಂಟಕ, ಸಹಾಯ ಮಾಡಿದ ಸೈನಿಕರನ್ನ ನೆನಪಿಸಿದ ರಮ್ಯಾ.
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೋಹಕ ತಾರೆ ರಮ್ಯಾ ನಿನ್ನೆಯ ಸಂಚಿಕೆಯಲ್ಲಿ ತಮ್ಮ ಸಿನಿ ಜರ್ನಿಯ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ರಮ್ಯಾ ಅವರ ಬಗ್ಗೆ ಇನ್ನು ತಿಳಿದಿರದ ಅದೆಷ್ಟು ವಿಷಯಗಳು ನಿನ್ನೆಯ ಸಂಚಿಕೆಯಲ್ಲಿ ರಿವೀಲ್ ಆಗಿದೆ. ಇನ್ನು ನಟಿ ರಮ್ಯಾ ಅವರಿಗೂ ಕೂಡ ಪ್ರಾಣ ಕಂಟಕ ಎದುರಾಗಿತ್ತಂತೆ. ಈ ಬಗ್ಗೆ ಶೋನಲ್ಲಿ ಮಾಹಿತಿ ನೀಡಿದ್ದಾರೆ.
Ramya Amrithadhare Movie: ಮೋಹಕತಾರೆ ರಮ್ಯಾ (Ramya) ಅವರು ವೀಕೆಂಡ್ ವಿಥ್ ರಮೇಶ್ (Weekend With Ramesh) ಶೋನಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೋಹಕ ತಾರೆ ರಮ್ಯಾ ನಿನ್ನೆಯ ಸಂಚಿಕೆಯಲ್ಲಿ ತಮ್ಮ ಸಿನಿ ಜರ್ನಿಯ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ರಮ್ಯಾ ಅವರ ಬಗ್ಗೆ ಇನ್ನು ತಿಳಿದಿರದ ಅದೆಷ್ಟು ವಿಷಯಗಳು ನಿನ್ನೆಯ ಸಂಚಿಕೆಯಲ್ಲಿ ರಿವೀಲ್ ಆಗಿದೆ. ಇನ್ನು ನಟಿ ರಮ್ಯಾ ಅವರಿಗೂ ಕೂಡ ಪ್ರಾಣ ಕಂಟಕ ಎದುರಾಗಿತ್ತಂತೆ. ಈ ಬಗ್ಗೆ ಶೋನಲ್ಲಿ ಮಾಹಿತಿ ನೀಡಿದ್ದಾರೆ.
ಸ್ಯಾಂಡಲ್ ವುಡ್ ಸ್ಟಾರ್ ನಟಿ ರಮ್ಯಾ
ನಟಿ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಮ್ಯಾ ಅಭಿನಯಿಸಿದ ಪ್ರತಿಯೊಂದು ಸಿನಿಮಾ ಕೂಡ ಯಶಸ್ವಿ ಆಗಿದೆ. ಆದರೆ ನಟಿ ಇತ್ತೀಚಿಗೆ ಚಿತ್ರರಂಗದಿಂದ ದೂರ ಉಳಿದಿದ್ದರು.
ಸಾಕಷ್ಟು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನಟಿ ರಮ್ಯಾ ಅವರು ಮೊದಲು ನಟಿಸಿದ ಸಿನಿಮಾಗಳ ಬಗ್ಗೆ ಕೂಡ ಮನದಾಳದ ಮಾತುಗಳನ್ನಾಡಿದ್ದಾರೆ. ಈ ವೇಳೆ ನಟಿಗೆ ಪ್ರಾಣ ಹೋಗುವ ಸಂದರ್ಭ ಬಂದ ವಿಷಯು ಕೂಡ ರಿವೀಲ್ ಆಗಿದೆ.
ಧ್ಯಾನ್ ಹಾಗೂ ರಮ್ಯಾ ಅಭಿನಯದ ಅಮೃತಧಾರೆ ಚಿತ್ರ
ನಾಗತಿಹಳ್ಳಿ ಚಂದಶೇಕರ್ ನಿರ್ದೇಶನದ ಸೌತ್ ನಟ ಧ್ಯಾನ್ ಹಾಗೂ ರಮ್ಯಾ ಅಭಿನಯದ ಅಮೃತಧಾರೆ ಸಿನಿಮಾ ಕನ್ನಡಿಗರನ್ನು ಮೋಡಿ ಮಾಡಿತ್ತು. ಈ ಸಿನಿಮಾದ ಶೂಟಿಂಗ್ ನಡೆಯುವ ಸಮಯದಲ್ಲಿ ರಮ್ಯಾ ಅವರ ಪ್ರಾಣಕ್ಕೆ ಅಪಾಯ ಉಂಟಾಗಿದೆ.
ಈ ಘಟನೆಯ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿಕೊಟ್ಟಿದ್ದಾರೆ. ಅಮೃತಧಾರೆ ಚಿತ್ರದ ಶೂಟಿಂಗ್ ಲಡಾಖ್ ನಲ್ಲಿ ನಡೆಯುತ್ತಿತ್ತು. ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಇರುವ ಲಡಾಖ್ ನ ಎತ್ತರದ ಜಾಗಗಳಲ್ಲಿ ಆಕ್ಸಿಜನ್ ಕೊರತೆ ಬಹಳ ಇರುತ್ತದೆ. ಇತ್ತೀಚಿಗೆ ಕನ್ನಡದ ಒಬ್ಬ ನಟ ಲಡಾಖ್ ನಲ್ಲಿ ಸಾವನ್ನಪ್ಪಿದ್ದಾರೆ.
ಇಂತಹದ್ದೇ ಸಂಕಷ್ಟಕ್ಕೆ ರಮ್ಯಾ ಸಿಲುಕಿದ್ದರು. ಲಡಾಖ್ ಶೂಟಿಂಗ್ ನ ವೇಳೆ ರಮ್ಯಾಗೆ ಆಕ್ಸಿಜನ್ ಕೊರತೆಯಿಂದ ಅಸ್ವಸ್ಥತೆ ಉಂಟಾಗಿತ್ತು. ಅದ್ರಷ್ಟವಷಾತ್ ಕೂಡಲೇ ಆರ್ಮಿಯವರು ಇವರ ಸಹಾಯಕ್ಕೆ ಧಾವಿಸಿ ಬಂದರು. ಕೂಡಲೇ ಆಕ್ಸಿಜನ್ ಕೊಟ್ಟು ರಮ್ಯಾ ಅವರನ್ನು ಉಳಿಸಿಕೊಂಡರು ಎಂದು ಹೇಳಿದ್ದಾರೆ. ಇನ್ನು ರಮ್ಯಾ ಈ ವೇದಿಕೆಯ ಮೇಲೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.