Aniruddha Jatkar And Aroor Jagadish: ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತ ಕ್ಷಮೆ ಕೇಳಿದ ಅನಿರುದ್, ಮತ್ತೆ ಒಂದಾದ ಆರೂರ್ ಜಗದೀಶ್ ಮತ್ತು ಅನಿರುದ್ ಜಟ್ಕರ್.
Aniruddha Jatkar And Aroor Jagadish: ಅನಿರುದ್ಧ ಜಟ್ಕರ್ (Aniruddha Jatkar) ಕನ್ನಡ ಚಿತ್ರರಂಗದ ಹೆಸರಾಂತ ನಟ. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟ ಅನಿರುದ್ಧ ಜಟ್ಕರ್ ಅವರು ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಚಿತ್ರರಂಗದಿಂದ ದೂರವಿರುವ ನಟ ಅನಿರುದ್ಧ ಜಟ್ಕರ್ ಅವರು ಧಾರಾವಾಹಿಯಲ್ಲಿ ನಟನೆಯನ್ನ ಮಾಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ (Jothe Jotheyali Kannada Serial) ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಅನಿರುದ್ಧ ಜಟ್ಕರ್ ಅವರು ಈಗ ಕನ್ನಡ ಕಿರುತೆರೆಯ ಟಾಪ್ ನಟ ನಟ ಅನ್ನುವ ಪಟ್ಟವನ್ನ ಕೂಡ ಪಡೆದುಕೊಂಡಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಪಾತ್ರವನ್ನ ಮಾಡುವುದರ ಮೂಲಕ ಬಹಳ ಫೇಮಸ್ ಆಗಿದ್ದ ನಟ ಅನಿರುದ್ಧ ಜಟ್ಕರ್ ಅವರು ಈಗ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ನಟ ಅನಿರುದ್ಧ ಜಟ್ಕರ್
ಹೌದು ನಟ ಅನಿರುದ್ಧ ಜಟ್ಕರ್ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಮೂರೂ ತಿಂಗಳುಗಳ ಹಿಂದೆ ಸಂಭಾವನೆ ಮತ್ತು ಇತರೆ ಕಲಾಪಗಳ ಕಾರಣ ನಟ ಅನಿರುದ್ಧ ಜಟ್ಕರ್ ಅವರು ನಿರ್ಮಾಪಕರ ನಡುವೆ ಜಗಳವಾಗಿ ನಟ ಅನಿರುದ್ಧ ಜಟ್ಕರ್ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಗೆ ಬಂದರು.
ಇದಾದ ನಂತರ ಕನ್ನಡ ಕಿರುತೆರೆ ಮತ್ತು ಕನ್ನಡ ಕಿರುತೆರೆಯ ಎಲ್ಲಾ ರಿಯಾಲಿಟಿ ಶೋ ಗಳಿಂದ ನಟ ಅನಿರುದ್ಧ ಜಟ್ಕರ್ ಅವರನ್ನ ಬ್ಯಾನ್ ಕೂಡ ಕೂಡ ಮಾಡಲಾಗಿತ್ತು.
ಮತ್ತೆ ಕಿರುತೆರೆಗೆ ಮರಳಿದ ನಟ ಅನಿರುದ್ಧ ಜಟ್ಕರ್
ಹೌದು ನಟ ಅನಿರುದ್ಧ ಜಟ್ಕರ್ ಅವರು ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ನಿನ್ನೆ ನಡೆದ ಫಿಲಂ ಚೆಂಬರ್ ಸಭೆಯಲ್ಲಿ ನಟ ಅನಿರುದ್ಧ ಜಟ್ಕರ್ ಮತ್ತು ನಿರ್ಮಾಪಕ ಆರೂರ್ ಜಗದೀಶ್ (Aroor Jagadish) ಅವರು ಮತ್ತೆ ಒಂದಾಗಿದ್ದಾರೆ.
ಇಬ್ಬರ ನಡುವಿನ ಸಮಾರಾ ಈಗ ಸುಕಾಂತ್ಯವಾಗಿದೆ ಎಂದು ಹೇಳಬಹುದು. ಸದ್ಯ ಇಬ್ಬರು ಮಾಧ್ಯಮಗಳ ಮುಂದೆ ಮಾತನಾಡಿದ್ದು ನಮ್ಮ ನಡುವೆ ಇದ್ದ ವೈಮನಸ್ಸು ಈಗ ಈಗ ಹೋಗಿದೆ ಎಂದು ಹೇಳಿದ್ದಾರೆ.
ಕಣ್ಣೀರು ಹಾಕಿ ಕ್ಷಮೆ ಕೇಳಿದ ನಟ ಅನಿರುದ್ಧ ಜಟ್ಕರ್
ಹೌದು ಮಾಧ್ಯಮಗಳ ಮುಂದೆ ಆರೂರ್ ಜಗಧೀಶ್ ಅವರ ಹೊಗಳ ಮೇಲೆ ಕೈಹಾಕಿದ ನಟ ಅನಿರುದ್ಧ ಜಟ್ಕರ್ ಅವರು ಕಣ್ಣೀರು ಹಾಕಿದ್ದಾರೆ. ನಮ್ಮ ನಡುವೆ ಆದ ವೈಮನಸ್ಸಿನ ಕಾರಣ ಅಭಿಮಾನಿಗಳಿಗೆ ರಸಭಂಗವಾಗಿದೆ ಮತ್ತು ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು, ಆದರೆ ನಡೆದು ಹೋಗಿದೆ ನನ್ನನು ಕ್ಷಮಿಸಿ ಎಂದು ಹೇಳಿದ್ದಾರೆ.
ಅಭಿಮಾನಿಗಳಿಗೆ ಕ್ಷಮೆ ಹೇಳಿದ ಆರೂರ್ ಜಗದೀಶ್
ಜೊತೆ ಜೊತೆಯಲಿ ಧಾರಾವಾಹಿಗೆ ಹೀಗೆ ಆಗಬಾರದಿತ್ತು. ಮೂರೂ ವರ್ಷಗಳ ಕಾಲ ನಾನು ಅವರ ಜೊತೆ ಕೆಲಸವನ್ನ ಮಾಡಿದೆನೇ. ನಾನು ಧಾರಾವಾಹಿಯ ಅಭಿಮಾನಿಗಳಲ್ಲಿ ಕ್ಷಮೆಯನ್ನ ಕೇಳುತ್ತೇನೆ ಎಂದು ಹೇಳಿದ್ದಾರೆ ಮತ್ತು ಅನಿರುದ್ಧ ಜಟ್ಕರ್ ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹೇಳಿದ್ದಾರೆ.