Aryavardhan And Roopesh Shetty: ರೂಪೇಶ್ ಶೆಟ್ಟಿಗಾಗಿ ಕಣ್ಣೀರು ಹಾಕಿದ ಆರ್ಯವರ್ಧನ್ ಗುರೂಜಿ, ವಿಡಿಯೋ ವೈರಲ್.
Aryavardhan And Roopesh Shetty: ಕನ್ನಡದ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 (Bigg Boss Season 9) ಕೊನೆಯ ಹಂತಕ್ಕೆ ತಲುಪಿದೆ. ನಾಳೆಯೇ ಬಿಗ್ ಬಾಸ್ ಫಿನಾಲೆ ನಡೆಯಲಿದೆ.
ಈ ವಾರ 6 ಮಂದಿ ಸ್ಪರ್ದಿಗಳಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ನಡುರಾತ್ರಿಯಲ್ಲಿ ಎಲಿಮಿನೇಟ್ ಆಗಿದ್ದರು. ಇನ್ನು ಉಳಿದ ಐವರಲ್ಲಿ ವಿನ್ನರ್ ಪಟ್ಟ ಯಾರಿಗೆ ಲಭಿಸುತ್ತದೆ ಎಂದು ಕಾದು ನೋಡಬೇಕಿದೆ.
ನಡುರಾತ್ರಿ ಎಲಿಮಿನೇಟ್ ಆದ ಆರ್ಯವರ್ಧನ್ ಗುರೂಜಿ
ಇನ್ನು ಮಂಗಳವಾರದಂದು ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ವಿನ್ನರ್ ಆಗಬೇಕ್ಕೆನ್ನುವ ಅವರ ಆಸೆ ಈಡೇರಲಿಲ್ಲ. ಹೀಗಾಗಿ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಡುತ್ತ ಹೊರಬಂದಿದ್ದಾರೆ.
ಕಣ್ಣೀರಿಟ್ಟ ರೂಪೇಶ್ ಶೆಟ್ಟಿ (Roopesh Shetty)
ಇನ್ನು ಆರ್ಯಾವರ್ಧನ್ ಅವರು ಬಿಗ್ ಬಾಸ್ ಗೆಲ್ಲಬೇಕು ಎಂದು ಹೇಳಿಕೊಂಡಿದ್ದರು ಆದರೆ ಇದೀಗ ಬಿಗ್ ಬಾಸ್ ನಿನ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಗುರೂಜಿಯ ಎಲಿಮಿನೇಷನ್ ನಿಂದ ಸ್ಪರ್ಧಿಗಳು ಕೂಡ ಬೇಸರ ಗೊಂಡಿದ್ದಾರೆ. ಇನ್ನು ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಅವರ ಎಲಿಮಿನೇಷನ್ ನಿಂದಾಗಿ ಕಣ್ಣೀರಿಟ್ಟಿದ್ದಾರೆ.
ರೂಪೇಶ್ ಶೆಟ್ಟಿ ಗೆಲ್ಲಬೇಕು
ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅದಲ್ಲದೆ ರೂಪೇಶ್ ಶೆಟ್ಟಿ ಗೆಲ್ಲಬೇಕು ಅವನು ನನ್ನ ಮಗನ ರೀತಿ ಎಂದು ಭಾವುಕರಾಗಿದ್ದಾರೆ.
ರೂಪೇಶ್ ಶೆಟ್ಟಿ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್ ಗುರೂಜಿ
ಇನ್ನು ಮಿಡ್ ನೈಟ್ ನಲ್ಲಿ ನನ್ನ ಎಲಿಮಿನೇಟ್ ಆಗುತ್ತೇನೆ ಎಂದು ನಾನು ಗೆಸ್ಸ್ ಮಾಡಿದ್ದೆ. ಅದರಂತೆ ನಾನು ಹೊರಬಂದಿದ್ದೇನೆ. ಆದರೆ ನಾನು ಒಂದು ಮಾತು ಹೇಳುತ್ತೇನೆ ರೂಪೇಶ್ ಶೆಟ್ಟಿ ಗೆಲ್ಲಬೇಕು. ಗೆಲ್ಲು ಮಗನೆ ನಾನು ನಿನ್ನ ಬೆನ್ನ ಹಿಂದೆ ಇರ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ.
ಕಷ್ಟ ಪಟ್ಟು ಅಡಿ ಕುಚ್ಚ ಸುದೀಪ್ (KIccha sudeep) ಅವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದೆ. ನಾನು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ದೇನೆ, ತಪ್ಪಾಗಿ ಮಾತನಾಡಿದ್ದೇನೆ. ಇಲ್ಲಿಂದಲೇ 16 ಜನರಿಗೂ ಕ್ಷಮಿಸಿ ಅಂತ ಕೇಳಿಕೊಳ್ಳುತ್ತೇನೆ.
ಬಿಗ್ ಬಾಸ್ ಮನೆಯಲ್ಲಿ ಇದ್ದವರನ್ನು ನನ್ನ ಮನೆಯವರು ಅಂತ ತಿಳಿದುಕೊಂಡಿದ್ದೇನೆ. ದೀಪಿಕಾ ದಾಸ್ ಹೊರಗೆ ಹೋಗಿ ಬಂದಿದ್ರು. ಆಗ ನಾನು 5 ಜನರಲ್ಲಿ ಒಬ್ಬ ಅಂದುಕೊಂಡಿದ್ದೆ. ಪರವಾಗಿಲ್ಲ, ಕರ್ನಾಟಕ ಜನರು ನನ್ನನು ನೋಡಿ ಖುಷಿ ಪಟ್ಟಿದ್ದಾರೆ. ಅಷ್ಟು ಸಾಕು ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.