Bigg Boss Kannada Finalist: ಬಿಗ್ ಬಾಸ್ ನಲ್ಲಿ ತಮ್ಮ ಆಸೆಗಳನ್ನು ಹೇಳಿಕೊಂಡ ಫೈನಲಿಸ್ಟ್, ಆಸೆ ಈಡೇರಿಸಬೇಕಿದೆ ಬಿಗ್ ಬಾಸ್.

Bigg Boss Kannada Finalist Dreams: ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ (Bigg  Boss) ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಸತತ 14 ವಾರಗಳನ್ನು ಬಿಗ್ ಬಾಸ್ ಪೂರ್ಣಗೊಳಿಸಿ, 15 ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಹಿಂದಿನ ವಾರದಲ್ಲಿ ಅಮೂಲ್ಯ ಹಾಗೂ ಅರುಣ್ ಸಾಗರ್ ಎಲಿಮಿನೇಟ್ ಆಗಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ದಿಗಳಲ್ಲಿ ನಡುರಾತ್ರಿ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ 5 ಮಂದಿ ಸ್ಪರ್ದಿಗಳಿದ್ದಾರೆ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ ನೀಡಿದ್ದಾರೆ.

The finalists who have expressed their wishes in the Bigg Boss house, the wish has to be fulfilled by Bigg Boss.
Image Credit: voot

ಬಿಗ್ ಬಾಸ್ ಸೀಸನ್ 9 (Bigg Boss Season 9)  ನ ಫೈನಲ್ ಗೆ ಹೋಗುವ ಮೊದಲ ಸ್ಪರ್ಧಿಯಾಗಿ ರೂಪೇಶ್ ಹೊರಹೊಮ್ಮಿದ್ದಾರೆ. ರಾಕೇಶ್ ಅಡಿಗ ಎರಡನೇ ಸ್ಪರ್ದಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೆ ದೀಪಿಕಾ ದಾಸ್, ದಿವ್ಯ ಉರುಡುಗ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಫೈನಲ್ಗೆ ಸಜ್ಜಾಗಿದ್ದಾರೆ.

ಸ್ಪರ್ಧಿಗಳಿಗೆ ವಿಶೇಷ ಅಧಿಕಾರ ನೀಡಿದ ಬಿಗ್ ಬಾಸ್
ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಮನೆಯ ಒಳಗೆ ಇಷ್ಟು ದಿನ ನಿಮ್ಮ ನೆರವೇರದ ಆಸೆ ಇದ್ರೆ ಅದರನ್ನು ಹೇಳಿ ಆಸೆ ಬಾವಿಯೊಳಗೆ ನಾಣ್ಯ ಹಾಕಬೇಕು ಎಂದು ಬಿಗ್ ಬಾಸ್ ಹೇಳುತ್ತಾರೆ.

Bigg Boss offered to tell about the wishes
Image Credit: voot

ರೂಪೇಶ್ ಶೆಟ್ಟಿ (Roopesh Shetty) ಹೇಳಿಕೊಂಡ ಆಸೆ
ಸುದೀಪ್ (Kiccha Sudeep) ಸರ್ ಬಳಕೆ ಮಾಡಿದ ಸನ್ ಗ್ಲಾಸ್ ಕಳುಹಿಸಿಕೊಟ್ಟರೆ, ಅದನ್ನ ಹಾಕಿಕೊಂಡು ಈ ಮನೆಯಲ್ಲಿ ಹುಲಿ ಡಾನ್ಸ್ ಮಾಡಬೇಕ್ಕೆನ್ನುವುದು ನನ್ನ ಆಸೆ ಎಂದು ಎಂದು ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group

ರೂಪೇಶ್ ರಾಜಣ್ಣ (Roopesh Rajanna) ಹೇಳಿಕೊಂಡ ಆಸೆ
ನನಗೆ ಹೇರ್ ಕಟ್ ಆಗಬೇಕು. ನನ್ನ ಮನೆಯವರಿಂದ ಕರೆ ಬಂದರೆ ಚನ್ನಾಗಿರುತ್ತದೆ. ಸುದೀಪ್ ಸರ್ ಜೊತೆ ಮನೆಯೊಳಗೇ ಕೂತು ಮಾತನಾಡಬೇಕು ಎಂದು ರೂಪೇಶ್ ರಾಜಣ್ಣ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.

The contestants told Bigg Boss about their wishes
Image Credit: voot

ದೀಪಿಕಾ ದಾಸ್ (Deepika Das) ಹೇಳಿಕೊಂಡ ಆಸೆ
ವಾಸುಕಿ ವೈಭವ್, ಶೈನ್ ಶೆಟ್ಟಿ, ಪ್ರಿಯಾಂಕಾ, ಕಿಶನ್, ಭೂಮಿ ಯಾರಾದರೂ ಒಬ್ಬರ ಕಡೆಯಿಂದ ಕಾಲ್ ಮಾಡಿ ನನ್ನ ಜೊತೆ ಮಾತನಾಡಬೇಕು. ಯಾರಾದರೂ ಒಬ್ಬರು ಮನೆಯೊಳಗೇ ಬರಬೇಕು ಎಂದು ದೀಪಿಕಾ ದಾಸ್ ತಮ್ಮ್ ಆಸೆಯನ್ನು ಹೇಳಿಕೊಂಡಿದ್ದಾರೆ.

ದಿವ್ಯ ಉರುಡುಗ (Divya Uruduga)ಹೇಳಿಕೊಂಡ ಆಸೆ
ಕಾಡು, ಹಬ್ಬ ಎಲ್ಲವನ್ನು ನೋಡಿದ್ದೇವೆ ಈ ಮನೆಯಲ್ಲಿ ಒಂದು ಜಾತ್ರೆ ನೋಡಬೇಕು. ಸುದೀಪ್ ಸರ್ ಬರಬೇಕು. ಅರವಿಂದ್ ಮನೆಯೊಳಗೇ ಬರಬೇಕು ಎಂದು ದಿವ್ಯ ಉರುಡುಗ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.

Bigg Boss contestants who wrote their wishes on a note and put it in the well
Image Credit: voot

ರಾಕೇಶ್ ಅಡಿಗ (Rakesh Adiga) ಹೇಳಿಕೊಂಡ ಆಸೆ
ಕಾವ್ಯ, ಅನುಪಮಾ, ಅಮೂಲ್ಯ ಗೌಡ ಜೊತೆ ಒಟ್ಟಿಗೆ ಕುಳಿತು ಊಟ ಮಾಡಬೇಕು. ಇನ್ನೊಂದು ನನ್ನ ಹಾಡನ್ನು ಸಾಧ್ಯವಾದರೆ ಹಾಕಿ ಎಂದು ರಾಕೇಶ್ ಅಡಿಗ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.

ಆರ್ಯವರ್ಧನ್ ಗುರೂಜಿ (Aryavardhan Guruji) ಹೇಳಿಕೊಂಡ ಆಸೆ
ಸುದೀಪ್ ಸರ್ ಮತ್ತು ಪತ್ನಿ, ಪುನೀತ್ ರಾಜಕುಮಾರ್ ಅವರ ಪತ್ನಿ ಮನೆಗೆ ಬರಬೇಕು ಹಾಗೂ ನಾನು ಬಿಗ್ ಬಾಸ್ ಗೆಲ್ಲಬೇಕು ಎಂದು ಆರ್ಯವರ್ಧನ್ ಗುರೂಜಿ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.

Join Nadunudi News WhatsApp Group