Chandan Shetty: ನಟ ದರ್ಶನ್ ಬಗ್ಗೆ ಮೌನಮುರಿದ ಚಂದನ್, ಅಷ್ಟಕ್ಕೂ ಚಂದನ್ ಹೇಳಿದ್ದೇನು

ನಟ ದರ್ಶನ್ ಬಗ್ಗೆ ಮೌನಮುರಿದ ಚಂದನ್

Chandan Shetty About Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ Darshan ಜೈಲು ಸೇರಿಕೊಂಡಿದ್ದಾರೆ. ದರ್ಶನ್ ಜೈಲು ಸೇರಿದಾಗಿಂದ ಸ್ಯಾಂಡಲ್ ವುಡ್ ನಲ್ಲಿ ಈ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ಎಲ್ಲ ಸೆಲೆಬ್ರೆಟಿ ಸ್ಟಾರ್ ಗಳ ಬಳಿ ರೇಣುಕೆಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಅಭಿಪ್ರಾಯ ಕೇಳಲಾಗುತ್ತಿದೆ. ಅನೇಕ ನಟ ನಟಿಯರು ನಟ ದರ್ಶನ್ ಕೇಸ್ ಬಗ್ಗೆ ಮೌನ ಮುರಿದಿದ್ದಾರೆ. ಇದೀಗ ಗಾಯಕ ಚಂದನ್ ಶೆಟ್ಟಿ ಕೂಡ ನಟ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.

Chandan Shetty About Darshan
Image Credit: Oneindia

ನಟ ದರ್ಶನ್ ಬಗ್ಗೆ ಮೌನಮುರಿದ ಚಂದನ್
ಇನ್ನು ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಈ ಹಿಂದೆ ತಮ್ಮ ವಿಚ್ಛೇದನದ ವಿಚ್ಛ್ರಾವಾಗಿ ಬಹಳ ಸುದ್ದಿಯಲ್ಲಿದ್ದರು. ಚಂದನ್ ಹಾಗೂ ನಿವೇದಿತಾ ವಿಚ್ಛೇದನದ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ದರ್ಶನ್ ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿಕೊಂಡಿದ್ದರು. ಇಷ್ಟು ದಿನ ತಮ್ಮ ವಿಚ್ಛೇದನದ ಜಂಜಾಟದಲ್ಲಿ ಚಂದನ್ ಸದ್ಯ ವಿಚ್ಛೇದನದ ಬಳಿಕ ಹೊಸ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ ಆಗಿರುವ ಚಂದನ್ ಇದೀಗ ನಟ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು ನೋಡಿ
ಇಂತಹ ಕೆಟ್ಟ ಕಾಮೆಂಟ್‌ ಗಳಿಂದ ಅನೇಕ ಹೆಣ್ಣು ಮಕ್ಕಳು ನೊಂದಿದ್ದಾರೆ. ಹೈ ಪ್ರೊಫೈಲ್ ವ್ಯಕ್ತಿ ಮಾತ್ರ ಅಲ್ಲ. ಸಾಮಾನ್ಯ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಕಲಿ ಖಾತೆ ಮಾಡಿ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಟಿಕ್‌ ಟಾಕ್‌ ನಿಷೇಧಿಸಿದಂತೆ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಕೆಟ್ಟ ಚಟುವಟಿಕೆಗಳು ನಿಲ್ಲಲಿ ಎಂದು ಚಂದನ್ ಖಡಕ್ ಆಗಿ ಮಾತನಾಡಿದರು. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಏನಾಗುತ್ತದೆ ಎಂದು ನಾವು ಕಾಯುತ್ತಿದ್ದೇವೆ. ದರ್ಶನ್ ಯಾವುದೇ ಕಳಂಕವಿಲ್ಲದೆ ನಿರ್ದೋಷಿಯಾಗಿ ಹೊರಬರಲಿ ಎಂಬುದು ನನ್ನ ಆಶಯ. ಈ ಘಟನೆ ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group

Chandan Shetty And Darshan
Image Credit: Filmibeat

Join Nadunudi News WhatsApp Group