Chandan Shetty: ಬಹಳ ಸಮಯದ ಬಳಿಕ ಸಿಹಿಸುದ್ದಿ ಹಂಚಿಕೊಂಡ ನಟ ಚಂದನ್ ಶೆಟ್ಟಿ

Chandan Shetty:  ದೊಡ್ಡ ಯಶಸ್ಸನ್ನು ಕಂಡಿರುವ ಗಾಯಕ ಮತ್ತು ಸಂಗೀತ ಮಾಂತ್ರಿಕ ಎಂದರೆ ಚಂದನ್ ಶೆಟ್ಟಿ ಯವರು. ಹಾಳಾಗೋದೆ 3 ಪೆಗ್ ಟಕೀಲಾ ಫೈಯರ್ ಹೀಗೆ ಸಾಲು ಸಾಲು ರಾಪ್ ಹಾಡುಗಳನ್ನು ಮಾಡುತ್ತಾ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿರುವ ಈ ಗಾಯಕನ ಹಾಡುಗಳು ವಿದೇಶದ ಪಬ್ ಗಳಲ್ಲಿಯೂ ಸಹ ಪ್ರಸಾರವಾಗುತ್ತದೆ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಮೂಲತಃ ಹಾಸನದವರಾದ ಚಂದನ್ ಶೆಟ್ಟಿ ರವರು ಅನೇಕ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬರುತ್ತಾರೆ. ಆರಂಭದ ದಿನಗಳಲ್ಲಿ ಅನೇಕ ಏಳು ಬೀಳು ಮತ್ತು ಅವಮಾನಗಳನ್ನು ಅನುಭವಿಸಿದ ಈ ಗಾಯಕ ನಂತರ ಕನ್ನಡ ಚಿತ್ರರಂಗದ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ರವರ ಜೊತೆಗೆ ಅಲೆಮಾರಿ ಎಂಬ ಸಿನಿಮಾದಲ್ಲಿ ಗೀತರಚನಕಾರರಾಗಿ ಕೆಲಸ ಪ್ರಾರಂಭಿಸುತ್ತಾರೆ.

ಹೌದು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಗೀತರಚನೆ ಮತ್ತು ಹಿನ್ನೆಲೆ ಗಾಯಕರಾಗಿಯೂ ಅರ್ಜುನ್ ಜನ್ಯ ಅವರ ಗರಡಿಯಲ್ಲಿ ಬೆಳೆದ ಚಂದನ್ ಶೆಟ್ಟಿ ಬದುಕು ನಿಜಕ್ಕೂ ಸಹ ಹಲವಾರು ಯುವ ಮ್ಯೂಸಿಕ್ ಮಾಂತ್ರಿಕ ಹಾಗೂ ಗಾಯಕರು ಮಾದರಿ ಎಂದೇ ಹೇಳಬಹುದು.

ನಂತರ ಇದೇ ಖ್ಯಾತಿಯನ್ನಿಟ್ಟುಕೊಂಡೇ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೂಡ ಪಾದಾರ್ಪಣೆ ಮಾಡಿದ ಚಂದನ್ ಶೆಟ್ಟಿ ಯವರು ಈ ಕಾರ್ಯಕ್ರಮದಲ್ಲಿ ತನ್ನ ವಿಶೇಷ ಗಾಯನದ ಮೂಲಕ ಬಿಗ್ ಬಾಸ್ ಪ್ರಿಯರು ಮತ್ತು ಕಿರುತೆರೆ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡು ಇದೀಗ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ಗಾಯಕ ಹಾಗೂ ಸಂಗೀತ ಮಾಂತ್ರಿಕನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯೊಳಗೆ ಚಂದನ್ ಶೆಟ್ಟಿಯವರ ಗಾಯನ ಮತ್ತು ಪ್ರತಿಯೊಬ್ಬ ಸದಸ್ಯರ ಮೇಲೆ ಕಟ್ಟುತ್ತಿದ್ದ ಹಾಡುಗಳು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಗಾಯನದ ಜೊತೆಗೆ ಬಿಗ್ ಬಾಸ್ ಟಾಸ್ಕ್ ನಲ್ಲಿಯೂ ಕೂಡ ಅದ್ಭುತವಾಗಿ ಆಟವಾಡಿದ ಚಂದನ್ ಶೆಟ್ಟಿರವರು ಈ ಕಾರ್ಯಕ್ರಮದಲ್ಲಿ ಮೊದಲನೇ ಸ್ಥಾನ ಪಡೆದು ವಿಜಯಲಕ್ಷ್ಮಿಯನ್ನು ತನ್ನದಾಗಿಸಿಕೊಳ್ಳುತ್ತಾರೆ.

Join Nadunudi News WhatsApp Group

ಸದ್ಯ ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಯವಾದ ನಿವೇದಿತಾ ಗೌಡ ಅವರನ್ನು ವಿವಾಹವಾಗಿರುವ ಚಂದನ್ ಶೆಟ್ಟಿ ಸಂಸಾರದಲ್ಲಿ ನೆಮ್ಮದಿಯಾಗಿದ್ದು ಇದರ ಬೆನ್ನಲ್ಲೇ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಗೆ ಸಂಗೀತ ಹಾಗೂ ಗಾಯನ ಮಾಡುವ ಮುಖಾಂತರ ಇಡೀ ಭಾರತ ಚಿತ್ರರಂಗದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಂದನ್ ಶೆಟ್ಟಿ ಇದೀಗ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

Image Credit: IBtimes India

ಹೌದು ಕನ್ನಡ ಚಿತ್ರರಂಗ ಯಾವಾಗ ತಾನೆ ಹೊಸಬರನ್ನು ಕೈಬಿಟ್ಟಿದೆ ಹೇಳಿ? ಹಾಗಂತ ನಾನು ಹೊಸಬನಲ್ಲ ನಾಯಕನಾಗಿ ಹೊಸಬ ಎಂದು ತಾನು ನಾಯಕನಾಗಿ ಅಭಿನಯಿಸಲಿರುವ ಚೊಚ್ಚಲ ಚಿತ್ರವಾದ ಎಲ್ರ ಕಾಲೆಳೆಯುತ್ತೆ ಕಾಲದ ಪೋಸ್ಟರ್ ಹಂಚಿಕೊಂಡಿದ್ದ ಚಂದನ್ ಶೆಟ್ಟಿಯವರು ಇದೀಗ ಚಂದನವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವತ್ತ ಕಾಲಿಟ್ಟಿದ್ದರು.

 

ತಾನು ಅಭಿನಯಿಸಿರುವ ಈ ಮೊದಲನೇ ಚಿತ್ರ ಬಿಡುಗಡೆಯಾಗುವ ಮುನ್ನವೇ ಸದ್ಯ ಇದೀಗ ಚಂದನ್ ಶೆಟ್ಟಿ ತಮ್ಮ ಮತ್ತೊಂದು ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.ಹೌದು ಎಲ್ರ ಕಾಲೆಳಿಯುತ್ತೆ ಕಾಲ ಸಿನಿಮಾ ಬಳಿಕ ಹಲವಾರು ಹಾಡುಗಳು ಹಾಗೂ ಇತರೆ ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ ಚಂದನ್ ಶೆಟ್ಟಿಯವರು ಸದ್ಯ ಇದೀಗ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಹೌದು ಈ ವಿಷಯವನ್ನು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದು ಈ ಸೂತ್ರಧಾರಿ ಚಿತ್ರಕ್ಕೆ ಕಿರಣ್ ಕುಮಾರ್ ಆರ್ ನಿರ್ದೇಶನವಿದ್ದು ಈಗಲ್ ಐ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನವರಸನ್ ಬಂಡವಾಳ ಹೂಡುತ್ತಿದ್ದಾರೆ.

ಸ್ವತಃ ಚಂದನ್ ಶೆಟ್ಟಿ ಅವರೇ ಸಂಗೀತ ನಿರ್ದೇಶನ ಮಾಡಲಿರುವುದು ವಿಶೇಷವಾಗಿದ್ದು ಈ ಪೋಸ್ಟರ್ ನಲ್ಲಿ ಚಂದನ್ ಶೆಟ್ಟಿ ಖಾಕಿ ಧರಿಸಿ ಕುಳಿತಿದ್ದು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ.

Join Nadunudi News WhatsApp Group