Darshan Case: ಸತ್ತುಹೋದ ರೇಣುಕಾ ಸ್ವಾಮಿ ಬಗ್ಗೆ ದರ್ಶನ್ ಹೇಳಿದ್ದೇನು…? ರೇಣುಕಾ ಸ್ವಾಮಿ ಮೇಲಿನ ದರ್ಶನ್ ಅಭಿಪ್ರಾಯ
ದರ್ಶನ್ ರೇಣುಕಾಸ್ವಾಮಿ ಬಗ್ಗೆ ಯಾವ ಅಭಿಪ್ರಾಯ ಇಟ್ಟುಕೊಂಡಿದ್ದಾರೆ...?
Darshan Case New Update: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಇನ್ನು ಜೈಲುವಾಸದಿಂದ ಮುಕ್ತಿ ಸಿಕ್ಕಿಲ್ಲ. ದರ್ಶನ್ ಅವರ ಕುಟುಂಬದವರು ಜಾಮೀನಿಗಾಗಿ ಎಷ್ಟೇ ಪ್ರಯತ್ನ ಪಡುತ್ತಿದ್ದರು, ಕೊಲೆಯ ಸಂಬಂಧಪಟ್ಟ ಸಾಕ್ಷ್ಯಗಳು ಹೆಚ್ಚಿರುವುದರಿಂದ ದರ್ಶನ್ ಹೊರಬರಲು ಸಾಧ್ಯವಾಗುತ್ತಿಲ್ಲ.
ಇನ್ನು ಕೋರ್ಟ್ ಜುಲೈ 18 ರ ತೀರ್ಪಿನಲ್ಲಿ ಮತ್ತೆ 14 ದಿನಗಳು ಅಂದರೆ ಆಗಸ್ಟ್ 1 ರವರೆಗೆ ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಜೈಲಿನಲ್ಲಿ ದರ್ಶನ್ ಒಂದೊಂದು ಕ್ಷಣ ಬದುಕಲು ಕೂಡ ಕಷ್ಟಪಡುತ್ತಿದ್ದಾರೇ. ಸದ್ಯ ದರ್ಶನ್ ರೇಣುಕಾಸ್ವಾಮಿ ಬಗ್ಗೆ ಯಾವ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ರೇಣುಕಾಸ್ವಾಮಿ ಬಗ್ಗೆ ದರ್ಶನ್ ಗೆ ಇರುವ ಅಭಿಪ್ರಾಯವೇನು…?
ಇನ್ನು ರೇಣುಕಾಸ್ವಾಮಿ ಬಗ್ಗೆ ದರ್ಶನ್ ಗೆ ಇರುವ ಅಭಿಪ್ರಾಯವೇನು…? ಮಗನನ್ನು ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ದರ್ಶನ್ ಹೇಳೋದೇನು…? ಅವರು ಪಶ್ಚತ್ತಾಪ ಪಡುತ್ತಿದ್ದರಾ…? ಎಲ್ಲರಿಗೂ ಈ ಕುತೂಹಲ ಇದ್ದೇ ಇರುತ್ತದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿ ಇದೀಗ ಜೈಲಿನಿಂದ ಬಿಡುಗಡೆಯಾಗಿರುವ ಸಿದ್ಧಾರೂಢ್ ಈ ಬಗ್ಗೆ ಮಾತನಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಸಿದ್ಧಾರೂಢ ಜೈಲು ಸೇರಿದ್ದರು. ಇಪ್ಪತ್ತೂವರೆ ವರ್ಷಗಳಿಂದ ಬಳ್ಳಾರಿ ಜೈಲು, ಚಿತ್ರದುರ್ಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇದೀಗ ಸನ್ನಡತೆಯ ಆದರದ ಮೇಲೆ ಬಿಡುಗಡೆಯಾಗಿದ್ದಾರೆ. ಈ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಸಿದ್ಧಾರೂಢ ದರ್ಶನ್ ಅವರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದರು.
ರೇಣುಕಾ ಸ್ವಾಮಿ ಕೊಲೆ ಬಗ್ಗೆ ದರ್ಶನ್ ಪಶ್ಚತಾಪಾ…!
ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿರುವುದರಿಂದ ಒಮ್ಮೆಯಾದರೂ ಭೇಟಿಯಾಗಬೇಕು ಎಂದು ಬೇಡಿಕೊಂಡರು. ಅವರ ಒತ್ತಾಯಕ್ಕೆ ಮಣಿದ ಜೈಲು ಅಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ಮಾಡಿಕೊಟ್ಟರು. ಒಟ್ಟು 12 ನಿಮಿಷಗಳ ಕಾಲ ದರ್ಶನ್ ಜೊತೆ ಸಿದ್ಧಾರೂಢ ಮಾತನಾಡಿದರು. ದರ್ಶನ್ ಕಣ್ಣಲ್ಲಿ ಪಶ್ಚಾತ್ತಾಪ ನೋಡಿದೆ ಅಂತ ಸಿದ್ಧಾರೂಢ ಹೇಳಿದ್ದಾರೆ. ನಾನು ದರ್ಶನ್ ಅವರ ಅಭಿಮಾನಿ ಅಂತ ಹೇಳ್ತಿಲ್ಲ ಅಂತಲೂ ಅವರು ಹೇಳಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ ಅಂತ ಸಿದ್ಧಾರೂಢ ವಿವರಿಸಿದ್ದಾರೆ.
ದರ್ಶನ್ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರ ಮುಖ ಮತ್ತು ಕಣ್ಣುಗಳಲ್ಲಿ ನೀವು ಅದನ್ನು ನೋಡಬಹುದು ಎಂದು ಸಿದ್ಧಾರೂಢರು ಹೇಳಿದರು. ದರ್ಶನ್ ಪ್ರತಿ ಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಕ್ಷಮೆ ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ದರ್ಶನ್ ಬದಲಾಗಿದ್ದಾರೆ ಎನ್ನುವ ಪ್ರಶ್ನೆಗೆ, ಅವ್ರು ತಪ್ಪು ಮಾಡಿದ್ದಾರೋ ಇಲ್ವೋ ನನಗೆ ಗೊತ್ತಿಲ್ಲ, ಅದನ್ನು ಕಾನೂನು ಡಿಸೈಡ್ ಮಾಡುತ್ತೆ. ಆದರೆ ಅವ್ರು ಜೈಲಿಗೆ ಯಾವಾಗ ಕಾಲಿಟ್ರೋ, ಆಗಲೇ ದರ್ಶನ್ ಬದಲಾಗಿದ್ದಾರೆ ಎಂದು ಸಿದ್ಧಾರೂಢ ಹೇಳಿದ್ದಾರೆ.