Druva Sarja: ತಿಂಗಳ ಬಳಿಕ ಕೊನೆಗೂ ದರ್ಶನ್ ಬಗ್ಗೆ ಹೇಳಿಕೆ ನೀಡಿದ ಧ್ರುವ, ಅಷ್ಟಕ್ಕೂ ಧ್ರುವ ಹೇಳಿದ್ದೇನು ನೋಡಿ.

ತಿಂಗಳ ಬಳಿಕ ಕೊನೆಗೂ ದರ್ಶನ್ ಬಗ್ಗೆ ಹೇಳಿಕೆ ನೀಡಿದ ಧ್ರುವ

Druva Sarja About Darshan: ಸದ್ಯ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಿನಲ್ಲಿದ್ದರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳಿಗೆ ನ್ಯಾಯಾಲಯ ಆಗಸ್ಟ್ 1 ರ ವರೆಗೆ ನ್ಯಾಯಾಂಗ ಬಂದನವನ್ನು ವಿಧಿಸಿದೆ. ಆರೋಪಿಗಳು ಆಗಸ್ಟ್ 1 ರವರೆಗೆ ಜೈಲು ಕಂಬಿ ಎಣಿಸಬೇಕಾಗಿದೆ.

ಇನ್ನು ಸ್ಯಾಂಡಲ್ ವುಡ್ ನ ಖ್ಯಾತ ನಟ ಹೀಗೆ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಬಗ್ಗೆ ಮಾಧ್ಯಮದವರು ಹಲವಾರು ಸೆಲೆಬ್ರೆಟಿಗಳ ಬಳಿ ಪ್ರಶ್ನೆ ಕೇಳಿದ್ದಾರೆ. ಕೆಲ ನಟ ನಟಿಯರು ಪ್ರತ್ರಿಕ್ರಿಸಿದ್ದಾರೆ ಕೂಡ. ಸದ್ಯ ಪ್ರಕರಣ ನಡೆದ ಹಲವು ದಿನಗಳ ಬಳಿಕ ನಟ ದ್ರುವ ಸರ್ಜಾ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದ್ರುವ ಸರ್ಜಾ ದರ್ಶನ್ ಅವರ ಬಗ್ಗೆ ಏನು ಹೇಳಿದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Dhruva Sarja About Darshan
Image Credit: India Today

ತಿಂಗಳ ಬಳಿಕ ಕೊನೆಗೂ ದರ್ಶನ್ ಬಗ್ಗೆ ಹೇಳಿಕೆ ನೀಡಿದ ಧ್ರುವ
ನಟ ದರ್ಶನ್ ಹಾಗೂ ದ್ರುವ ಸರ್ಜಾ ನಡುವೆ ವೈಮನಸ್ಸು ಇರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇದೆ ಕಾರಣಕ್ಕೆ ದರ್ಶನ್ ಹಾಗೂ ದ್ರುವ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಕೂಡ ನಡೆದಿತ್ತು. ಇದಾದ ನಂತರ ದರ್ಶನ್ ಬಂಧನದ ಬಳಿಕ ಮಾಧ್ಯಮದವರು ಧ್ರುವ ಅವರನ್ನು ಪ್ರಕರಣದ ಬಗ್ಗೆ ಮಾತನಾಡಲು ಕೇಳಿದರು. ಈ ವೇಳೆ ದ್ರುವ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ವರ್ತಿಸಿ ಹಾಗೆ ಹೋಗಿದ್ದರು. ಆದರೆ ಇದೀಗ ಸಂದರ್ಶನದಲ್ಲಿ ದ್ರುವ ಅವರಿಗೆ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಲು ಕೇಳಲಾಗಿದೆ. ಈ ವೇಳೆ ದ್ರುವ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಧ್ರುವ ಹೇಳಿದ್ದೇನು ನೋಡಿ
ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಯಾರೋ ಲೋ ಆಗಿದ್ದಾರೆ, ಕುಗ್ಗಿದ್ದಾರೆ ಎಂದು ಏನೇನೋ ಮಾತನಾಡಬಾರದು. ನೋವಿನಲ್ಲಿದ್ದಾರೆ, ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಕಾನೂನು ಎಲ್ಲಕ್ಕಿಂತ ದೊಡ್ಡದು. ಸುಮ್ಮನೇ ನಾವು ಏನೇನೋ ಮಾತನಾಡಬಾರದು ಎಂದಿದ್ದಾರೆ.

Dhruva Sarja And Darshan
Image Credit: Varthabharati

Join Nadunudi News WhatsApp Group

Join Nadunudi News WhatsApp Group