Kavyashree Gowda Out Of Bigg-Boss House: ಬಿಗ್ ಬಾಸ್ ಮನೆಯಿಂದ ಹೊರ ಬಂದು ಅಮ್ಮನಿಗೆ ಹೊಸ ಭರವಸೆಯ ಮಾತು ಕೊಟ್ಟ ಕಾವ್ಯಶ್ರೀ ಗೌಡ.
Kavyashree Gowda out of Bigg-Boss house: ಮಂಗಳ ಗೌರಿ ಸೀರಿಯಲ್ (Serial) ಮೂಲಕ ಪರಿಚಿತರಾದ ನಟಿ ಕಾವ್ಯಶ್ರೀ ಗೌಡ (Kavyashree Gowda). ಇವರು ಈ ಸೀರಿಯಲ್ ನಲ್ಲಿ ನಟಿಸಿ ಬಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಕಿರುತೆರೆ ನಟಿ ಕಾವ್ಯಶ್ರೀ ಗೌಡ ಕಾಲಿಟ್ಟಿದ್ದರು. ಇದೀಗ 10 ನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಾವ್ಯಶ್ರೀ
ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಯ 6 ನೇ ಕ್ಯಾಪ್ಟನ್ ಆಗಿದ್ದರು. ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ (Reality Show) ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಸೀಸನ್ 9 ರಿಂದ ಕಾವ್ಯಶ್ರೀ ಗೌಡ 10 ನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವವನ್ನು ಇಟ್ಟುಕೊಂಡು ನಗುತ್ತ ನಗಿಸುತ್ತಾ ಇದ್ದವರು ಕಾವ್ಯಶ್ರೀ ಗೌಡ. ಇದರ ಜೊತೆಗೆ ಆಗಾಗ ಬಿಗ್ ಬಾಸ್ ಮೇಲೆ ಮುನಿಸಿಕೊಂಡು ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದರು ಹಾಗು ಅರುಣ್ ಸಾಗರ್ (Arun Sagar) ಅವರನ್ನು ಅಪ್ಪ ಎಂದು ಕರೆಯುತ್ತಿದ್ದರು.
ಕಳೆದ ವಾರ ಬಿಗ್ ಬಾಸ್ ಶೋ ನಿಂದ ಮಜಾ ಭಾರತದ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ (Vinod Gobbaragala) ಮನೆಯಿಂದ ಔಟ್ ಆಗಿದ್ದರು. ಇದೀಗ ಕಾವ್ಯಶ್ರೀ ಗೌಡ 10 ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾವ್ಯಶ್ರೀ ಗೌಡ ಹೊರ ಬರುತ್ತಿದ್ದಂತೆ ಮನೆಯ ಎಲ್ಲ ಸ್ಪರ್ಧಿಗಳು ಭಾವುಕರಾಗಿ ಕಣ್ಣೀರು ಹಾಕಿದ್ದರು.
ಕಾವ್ಯಶ್ರೀ ಗೌಡ ಅವರ ಮಾತುಕತೆ
ನಟಿ ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದು ಕಿಚ್ಚ ಸುದೀಪ್ ಅವರ ಹತ್ತಿರ ನನ್ನ ತಂದೆ ತಾಯಿಗೂ ಬೇಸರ ಇದೆ ಎಂದಿದ್ದಾರೆ. ನಾವು ಹುಟ್ಟಿದ ಊರಲ್ಲೂ ನಮಗೊಂದು ಮನೆ ಇಲ್ಲ.
ಬೆಂಗಳೂರಿನಲ್ಲೂ ಮನೆ ಇಲ್ಲ. ಆದರೆ ನನಗೀಗ ಒಂದು ಕಾಂಫಿಡೆಂಟ್ ಬಂದಿದೆ. ಬಿಗ್ ಬಾಸ್ ಬಂದ ಮೇಲೆ ಆ ಒಂದು ವಿಶ್ವಾಸ ಬಂದಿದೆ ಎಂದು ವೇದಿಕೆ ಮೇಲೆ ಹೇಳಿಕೊಂಡರು.