Kodi Mutt: ಕೊಡಿ ಶ್ರೀಗಳ ಒಂದು ಭವಿಷ್ಯ ನಿಜವಾಯಿತು, ಇನ್ನೊಂದು ಭವಿಷ್ಯ ನಿಜವಾಗುತ್ತಾ…?

ಕೊಡಿ ಶ್ರೀಗಳ ಇನ್ನೊಂದು ಭವಿಷ್ಯ ನಿಜವಾದರೆ ಅನುಕೂಲಕ್ಕೆ ಕಂಟಕ ಖಂಡಿತ

Kodi Mutt Prediction: ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರು 2024 ರ ಆರಂಭದಲ್ಲಿ ಈ ವರ್ಷದಲ್ಲಿ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಭವಿಷ್ಯವಾಣಿ ನುಡಿದು ಜನರನ್ನು ಎಚ್ಚರಿಸಿದ್ದಾರೆ. ಕೊಡಿ ಮಠದ ಶ್ರೀಗಳ ಭವಿಷ್ಯವಾಣಿ ಈವರೆಗೆ ಸಾಕಷ್ಟು ನಿಜವಾಗಿದೆ. ಹೀಗಾಗಿ ಜನರು ಶ್ರೀಗಳ ಭವಿಷ್ಯವಾಣಿಯನ್ನು ನಂಬುತ್ತಾರೆ.

ಶ್ರೀಗಳು ಮುಂದೆ ಆಗುವಂತಹ ಅನಾಹುತದ ಬಗ್ಗೆ ಮುನ್ನೆಚೆರಿಕೆ ವಹಿಸುವಂತೆ ಹೇಳುತ್ತಾರೆ. ಇನ್ನು ಕಳೆದ ತಿಂಗಳಿನಲ್ಲಿ ಶ್ರೀಗಳು ಮುಂದೆ ಆಗುವ ಕೆಟ್ಟ ಘಟನೆಗಳ ಬಗ್ಗೆ ಭವಿಷ್ಯ ನುಡಿದ್ದರು. ಅವರು ನುಡಿದ ಭವಿಷ್ಯದಲ್ಲಿ ಇದೀಗ ಒಂದು ನಿಜವಾಗಿದೆ. ಅವರ ಈ ಒಂದು ಮಾತು ನಿಜವಾಗಿರುವುದನ್ನು ನೋಡಿದರೆ ಶ್ರೀಗಳ ಭವಿಷ್ಯವಾಣಿ ಸದ್ಯದಲ್ಲೇ ನಿಜವಾಗುತ್ತ ಎನ್ನುವ ಆತಂಕ ಇದೀಗ ಜನರಲ್ಲಿ ಹುಟ್ಟಿದೆ.

Kodi Mutt Prediction
Image Credit: Karnataka Times

ಕೊಡಿ ಶ್ರೀಗಳ ಒಂದು ಭವಿಷ್ಯ ನಿಜವಾಯಿತು
ಕಳೆದ ತಿಂಗಳಿನಲ್ಲಿ ಶ್ರೀಗಳು ಒಂದು ತಿಂಗಳ ನಂತರ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಗೊತ್ತಾಗಲಿದೆ ಎಂದಿದ್ದರು. ಜಾಗತಿಕ ಮಟ್ಟದಲ್ಲಿ ಸಮಸ್ಯೆ ಇದೆ. ಅಗ್ನಿ ಅನಾಹುತ, ಜಲ ವಿಪತ್ತು, ಯುದ್ಧ ಇರುತ್ತದೆ. ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಮತಾಂದತೆ ಹೆಚ್ಚುತ್ತದೆ. ಧಾರ್ಮಿಕ ಮುಖಂಡನ ಸಾವು ಕೂಡ ಸಂಭವಿಸುತ್ತದೆ, ಹಾಗೆಯೆ ಬಾಂಬ್ ಸ್ಫೋಟಗಳು ಮತ್ತು ಭೂಕಂಪಗಳು ಸಂಭವಿಸುತ್ತವೆ ಎಂದು ಕೊಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯವಾಣಿಯಂತೆ ಇತ್ತೀಚೆಗಷ್ಟೇ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟಗೊಂಡಿದೆ. ಈ ಪ್ರಕರಣ ನಡೆದ ಬಳಿಕ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ.

ಶ್ರೀಗಳ ಇನ್ನೊಂದು ಭವಿಷ್ಯ ನಿಜವಾಗುತ್ತಾ…?
2024 ರ ವರ್ಷವು ಭಯಾನಕ ಅನುಭವವನ್ನು ನೀಡುತ್ತದೆ. ಈ ವರ್ಷ ವಿಶ್ವದಾದ್ಯಂತ ಒಂದೆರಡು ಪ್ರಧಾನಿಗಳ ಮರಣವನ್ನು ಹೊಂದುವ ಸಾಧ್ಯತೆ ಇದೆ. ಮತೀಯ ಸಮಸ್ಯೆಗಳಿಂದ ಜನರು ದುಃಖಿತರಾಗುತ್ತಾರೆ. ಪ್ರಪಂಚದ ಮಹಾನ್ ಸಂತರು ಕೊಲ್ಲಲ್ಪಡುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧದ ಭೀತಿ, ಅಣುಬಾಂಬ್ ಸ್ಫೋಟದ ಸಾಧ್ಯತೆ ಇದೆ. ಮತ್ತೆ ಜಗತ್ತಿಗೆ ರೋಗ ಹರಡುವ ಸಾಧ್ಯತೆಯ ಜೊತೆಗೆ ದೊಡ್ಡ ಸುನಾಮಿ ಎದ್ದಿದೆ ಮತ್ತು ಜಗತ್ತೇ ಅಪಾಯದಲ್ಲಿದೆ ಎಂದು ಭವಿಷ್ಯವಾಣಿ ನುಡಿದಿದ್ದರು.

Shivayogi Shivananda Rajendra Swamiji
Image Credit: tv9kannada

Join Nadunudi News WhatsApp Group

Join Nadunudi News WhatsApp Group