Kodi Mutt: ಇನ್ನೊಂದು ಸ್ಪೋಟಕ ಭವಿಷ್ಯ ನುಡಿದ ಕೊಡಿ ಶ್ರೀಗಳು, ಮತ್ತೆ ಆತಂಕದಲ್ಲಿ ಜನರು.

ಇನ್ನೊಂದು ಸ್ಪೋಟಕ ಭವಿಷ್ಯ ನುಡಿದ ಕೊಡಿ ಶ್ರೀಗಳು

Kodi Mutt Sri Prediction: ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ರಾಜ್ಯ ಮತ್ತು ದೇಶದ ಭವಿಷ್ಯದ ಕುರಿತು ಆಗಾಗ ಭವಿಷ್ಯವಾಣಿ ನುಡಿಯುತ್ತಿರುತ್ತಾರೆ. ಅದರಂತೆ ಈ ಬಾರಿ ಕೂಡ ಎದುರಾಗಲಿರುವ ಸ್ಫೋಟಕ ಭವಿಷ್ಯವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದಾರೆ.

ಈಗಾಗಲೇ ಶ್ರೀಗಳು ಹೇಳಿದ ಕೆಲ ಭವಿಷ್ಯವಾಣಿ ನಿಜವಾಗಿದ್ದರಿಂದ ಜನರು ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲೂ ರಾಜ್ಯ ಮತ್ತು ದೇಶದಲ್ಲಿ ಈ ಬಾರಿ ಪಂಚಘಾತಕಗಳು ನಡೆಯಲಿವೆ. ಇವುಗಳನ್ನು ಗೆಲ್ಲುವುದು ತುಂಬಾ ಕಷ್ಟ ಎಂದು ಕೋಡಿಮಠದ ಶ್ರೀಗಳ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. 

Kodi Mutt Sri Prediction
Image Credit: Vistaranews

ಇನ್ನೊಂದು ಸ್ಪೋಟಕ ಭವಿಷ್ಯ ನುಡಿದ ಕೊಡಿ ಶ್ರೀಗಳು
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೋಡಿಮಠದ ಶಿವಾನಂದ ಸ್ವಾಮೀಜಿ, ಕ್ರೋಧಿನಾಮ ಸಂವತ್ಸರದಲ್ಲಿ ಕೋಪ, ದ್ವೇಷ, ಅಸೂಯೆ, ಮತ್ಸರ ಹೆಚ್ಚುತ್ತದೆ. ಈ ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭವೇ ಹೆಚ್ಚು. ಈ ವರ್ಷ ಜಲಾವೃಷ್ಟಿ ಆಗಲಿದೆ. ಭೂಮಿ ಘಟಕ, ಜಲ ಕಂಟಕ, ಅಗ್ನಿ, ವಾಯು ಕಂಟಕಗಳೂ ಇವೆ. ಈ ಐದು ಕಂಟಕಗಳನ್ನು ಜನರು ಗೆಲ್ಲಬೇಕು. ಶಿಷ್ಯನು ಗುರುವಾಗುತ್ತಾನೆ ಮತ್ತು ಗುರು ಶಿಷ್ಯನಾಗಲಿದ್ದಾನೆ.

ಮತ್ತೆ ಆತಂಕದಲ್ಲಿ ಜನರು
ಹೆಣ್ಣು ಮಕ್ಕಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದು ಆಗಬಹುದು ಎಂದು ಕೊಡಿ ಮಠದ ಶ್ರೀಗಳು ಹೇಳಿದ್ದಾರೆ. ಮನಸ್ಸು, ಕಣ್ಣು ಮತ್ತು ಕೋಪವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅಂತಹ ವ್ಯಕ್ತಿಗಳಿಗೆ ಕಂಟಕಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಮನುಷ್ಯ ಬದುಕಿರುವಾಗಲೇ ಅರಿಷಡ್ವರ್ಗಗಳನ್ನು ಜಯಿಸಬೇಕು ಎಂದು ಸನ್ಮಾರ್ಗ ಭೋದಿಸಿದ್ದಾರೆ. ಇನ್ನು ಕೊಡಿ ಮಠದ ಶ್ರೀಗಳು ಈ ಹಿಂದೆ ನುಡಿದಂತಹ ಅನೇಕ ಭವಿಷ್ಯವಾಣಿ ನಿಜವಾಗಿದ್ದರಿಂದ ಸದ್ಯ ಈಗ ಹೇಳಿರುವ ಭವಿಷ್ಯವಾಣಿಯನ್ನು ಕೇಳಿ ಜನರು ಆತಂಕ ಪಡುವಂತಾಗಿದೆ.

Kodi Mutt Sri Prediction 2024
Image Credit: Karnataka Times

Join Nadunudi News WhatsApp Group

Join Nadunudi News WhatsApp Group