Kodi Mutt Swamiji: ಮತ್ತೆ ನಿಜವಾಗುತ್ತ ಕೊಡಿ ಶ್ರೀಗಳು ನುಡಿದ ಭವಿಷ್ಯ, ಆತಂಕದಲ್ಲಿ ಭೂಮಿ ಮತ್ತು ಜನರು.
ಕೋಡಿ ಮಠ ಶ್ರೀಗಳು ಹೇಳಿದ ಭವಿಷ್ಯ ನಿಜವಾಗುವ ಸಾಧ್ಯತೆ ಇದೆ ಎನ್ನುವ ಆತಂಕದಲ್ಲಿ ಜನರು.
Kodi Mutt Swamiji Predict: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀಗಳು ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇದೀಗ ನಿಜವಾಗಿದೆ. ರಾಜಕೀಯ, ವಿದ್ಯಮಾನ, ಮಳೆ ಮೊದಲಾದ ವಿಚಾರಗಳ ಬಗ್ಗೆ ಕೋಡಿಮಠ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯವಾಣಿ ನುಡಿಯುತ್ತಾರೆ. ಇವರ ಭವಿಷ್ಯಗಳು ನಿಖರವಾಗಿರುತ್ತದೆ ಎಂಬ ನಂಬಿಕೆ ಸಾಕಷ್ಟು ಜನರಿಗೆ ಇದೆ.
ಕೋಡಿಮಠದ ಶ್ರೀಗಳ ಭವಿಷ್ಯ
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರಗಳು ಹೆಚ್ಚಲಿವೆ. ಆದರೆ ಒಂದೇ ಪಕ್ಷ ಅದಿಕಾರವನ್ನು ಹಿಡಿಯಲಿದೆ ಎಂದು ಹೇಳಿದ್ದರು.
ಅದರಂತೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮದ್ಯೆ ಇತ್ತೀಚಿಗಷ್ಟೇ ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಆಘಾತಕರ ಭವಿಷ್ಯ ನುಡಿದಿದ್ದರು. ಇದೀಗ ಇವರ ಈ ಭವಿಷ್ಯ ಸಹ ನಿಜವಾಗಿದೆ.
![Dr Sivananda Mahaswamiji of Kodi Mutt has made another shocking prediction.](https://nadunudi.in/wp-content/uploads/2023/06/Kodi-Mutt-Swamiji.png)
ಜೂನ್ 8 ರಂದು ಕೋಲಾರ ತಾಲೂಕಿನ ಸಾಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಕೋಡಿಮಠದ ಶ್ರೀ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ.
ಇನ್ನು ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚಾನಕ್ಕಾಗಿ ಗುಡುಗು ಮಿಂಚು ಬರಲಿದೆ. ಎರಡು ಮೂರೂ ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಹೇಳಿದ್ದಾರೆ. ಶ್ರೀಗಳ ಭವಿಷ್ಯದಂತೆ ರಾಜಸ್ಥಾನದಲ್ಲಿ ಚಂಡಮಾರುತ ಎದುರಾಗಿದೆ.
![Dr Sivananda Mahaswamiji of Kodi Mutt has made another shocking prediction.](https://nadunudi.in/wp-content/uploads/2023/06/Severe-rain-in-Rajasthan.png)
ರಾಜಸ್ಥಾನದಲ್ಲಿ ಭೀಕರ ಚಂಡಮಾರುತ
ಬಿಪರ್ಜಾಯ್ ಚಂಡಮಾರುತ ಈಗಾಗಲೇ ಗುಜರಾತ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು, ರಾಜಸ್ಥಾನದತ್ತ ಮುನ್ನುಗ್ಗುತ್ತಿದೆ. ಗುರುವಾರ ತಡರಾತ್ರಿ ಗುಜರಾತ್ ನ ಜಾಕೌ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಚಂಡಮಾರುತ ಭಾರಿ ಮಳೆ ಬಿರುಗಾಳಿಗೆ ಕಾರಣವಾಗಿದೆ ಈಗಾಗಲೇ ಗುಜರಾತ್ನ ಕಛ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ಭೋರ್ಗರೆಯುತ್ತಿದೆ.
ಈಗಾಗಲೇ ರಾಜಸ್ಥಾನದ ಬಾರ್ಮೆರ್, ಜಾಲೋರ್, ಜೈಸಲ್ಮೇರ್, ಸಿರೋಹಿ, ಜೋಧ್ಪುರ, ಪಾಲಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಬಲ ಚಂಡಮಾರುತವಾಗಿ ಗುಜರಾತ್ಗೆ ಅಪ್ಪಳಿಸಿದ್ದ ಬಿಪರ್ ಜಾಯ್ ಇಂದು ಸಂಜೆ ವೇಳೆಗೆ ರಾಜಸ್ಥಾನವನ್ನು ಪ್ರವೇಶಿಸಲಿದೆ.
![Dr Sivananda Mahaswamiji of Kodi Mutt has made another shocking prediction.](https://nadunudi.in/wp-content/uploads/2023/06/kodi-mutta-swamiji-latest-news.png)
ನಿಜವಾಗಲಿದೆ ಕೊಡಿ ಮಠದ ಶ್ರೀಗಳ ಭವಿಷ್ಯ
ಮುಂಗಾರು ಆರಂಭದಲ್ಲೇ ಭಾರತಕ್ಕೆ ಚಂಡಮಾರುತದ ಅಪಾಯ ಎದುರಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ದುರ್ಬಲವಾಗಿದ್ದು, ಮಳೆ ತಡವಾಗುತ್ತಿದೆ. ಒಂದು ಕಡೆ ಪ್ರವಾಹದ ಭೀತಿ ಎದುರಾಗಿದ್ದರೆ, ಇನ್ನೊಂದು ಕಡೆ ಬರದ ಛಾಯೆ ಆವರಿಸಿದೆ, ಇದೆಲ್ಲವನ್ನೂ ನೋಡಿದಾಗ ಕೆಲವು ದಿನಗಳ ಹಿಂದೆ ಕೋಡಿ ಮಠ ಶ್ರೀಗಳು ಹೇಳಿದ್ದ ಭವಿಷ್ಯ ನಿಜವಾಗುವ ಸಾಧ್ಯತೆ ಇದೆ ಎನಿಸುತ್ತಿದೆ.