Pavitra Gowda Divorce: ಪವಿತ್ರ ಗೌಡ ತನ್ನ ಗಂಡನಿಗೆ ವಿಚ್ಛೇಧನ ಕೊಡಲು ಕಾರಣ ಏನು ಗೊತ್ತಾ…? ಅಸಲಿ ಕಾರಣ ಇಲ್ಲಿದೆ
ವಿಚ್ಛೇದನದ ಬಗ್ಗೆ ಸಂಜಯ್ ಹೇಳಿದ್ದೇನು ನೋಡಿ...!
Pavitra Gowda Divorce Story: ಸದ್ಯ ರಾಜ್ಯದೆಲ್ಲೆಡೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ರೇಣುಕಾಸ್ವಾಮಿ ಕೊಲೆಯಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟನ ಪಾತ್ರ ಇರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ನಟ ದರ್ಶನ್ ಸೇರಿದಂತೆ 13 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು ದರ್ಶನ್ ಪವಿತ್ರ ಗೌಡ ಸಲುವಾಗಿ ಜೈಲು ಪಾಲಾದ ಬಳಿಕ ನಟಿ ಪವಿತ್ರ ಗೌಡ ಅವರ ಬಗ್ಗೆ ಚರ್ಚೆ ಶುರುವಾಗಿದೆ. ದರ್ಶನ್ ಜೊತೆ ಸಂಬಂಧದಲ್ಲಿರುವ ಮೊದಲು ಪವಿತ್ರ ಗೌಡ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಪವಿತ್ರ ಗೌಡ ಹಾಗೂ ಸಂಜಯ್ ವಿಚ್ಛೇದನದ ಹಿಂದಿನ ಅಸಲಿ ಕಥೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
![Pavitra Gowda Divorce Story](https://nadunudi.in/wp-content/uploads/2024/06/Pavitra-Gowda-Divorce-Story.png)
ಪವಿತ್ರ ಗೌಡ ಹಾಗೂ ಸಂಜಯ್ ವಿಚ್ಛೇದನದ ಹಿಂದಿನ ಅಸಲಿ ಕಥೆ ಏನು…?
ಇನ್ನು 2007 ರಲ್ಲಿ ಪವಿತ್ರ ಗೌಡ ಉತ್ತರ ಪ್ರದೇಶದ ಸಂಜಯ್ ಸಿಂಗ್ ಅವರನ್ನು ವಿವಾಹವಾದರು. ಪವಿತ್ರಾ ಗೌಡ ಸಂಜಯ್ ಸಿಂಗ್ ನನ್ನು ಪ್ರೀತಿಸಿ ಮದುವೆಯಾದರು. 2009 ರಲ್ಲಿ ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ ಅವರಿಗೆ ಮಗಳು ಹುಟ್ಟಿದ್ದಳು. 2013 ರಲ್ಲಿ ಅವರು ವಿಚ್ಛೇದನ ಪಡೆದರು. ಹಾಗಾದರೆ ಇವರಿಬ್ಬರ ವಿಚ್ಛೇದನಕ್ಕೆ ಕಾರಣವೇನು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋಗೆ ಪವಿತ್ರ ಎಂಟ್ರಿ ಕೊಟ್ಟಿದ್ದರು. ಕೋಳಿ ರಮ್ಯಾ ಪವಿತ್ರಾ ಗೌಡಗೆ ಸ್ನೇಹಿತರಾದರು. ತದನಂತರ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಎಲ್ಲ ಬಿಟ್ಟು ಮನೆಯಲ್ಲಿ ಇರು, ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಗ ನೀನು ಇದನ್ನೆಲ್ಲಾ ಬಿಟ್ಟು ಮನೆಯಲ್ಲಿ ಇರು, ನಾನು ನೋಡಿಕೊಳ್ಳುತ್ತೇನೆ ಎಂದಳು. ಅದು ಹೇಗೆ ಸಾಧ್ಯ…? ಎಂದು ಹೇಳುವ ಮೂಲಕ ನಮ್ಮ ಮುಂದಿನ ಬದುಕನ್ನು ನಿರ್ಧರಿಸಿದ್ದೇವೆ ಎಂದು ಸಂಜಯ್ ಹೇಳಿದರು.
![Pavitra Gowda Husband Sanjay Singh](https://nadunudi.in/wp-content/uploads/2024/06/Pavitra-Gowda-Husband-Sanjay-Singh-1.png)
ವಿಚ್ಛೇದನದ ಬಗ್ಗೆ ಸಂಜಯ್ ಹೇಳಿದ್ದೇನು ನೋಡಿ…!
ನಾವು ಆಗಸ್ಟ್ 2013 ರಲ್ಲಿ ವಿಚ್ಛೇದನ ಪಡೆದಿದ್ದೇವೆ ಮತ್ತು 2012 ರಿಂದಲೇ ಬೇರ್ಪಟ್ಟಿದ್ದೇವೆ. ಈಗ ಬೇರೆಯಾಗುತ್ತೇವೆ ಎಂದಾಗ ಕುಟುಂಬದವರು ಹೇಗೆ ಎಂದು ಕೇಳಿದರು. ನಮ್ಮೊಂದಿಗೆ ಮಾತುಕತೆಗೂ ಯತ್ನಿಸಿದರು. ಆದರೆ, ನಾವ್ಯಾರೂ ಇದಕ್ಕೆ ಒಪ್ಪಲಿಲ್ಲ,’’ ಎಂದು ಹೇಳಿದರು. ಒಬ್ಬನೇ ಕೋರ್ಟ್ನಲ್ಲಿ ಅಳುತ್ತಾ ನಿಂತಿದ್ದೆ. ಒಳ್ಳೆ ಅಂಕ ಗಳಿಸಿದ ವಿದ್ಯಾರ್ಥಿನಿಯಾದರೂ 10ನೇ ತರಗತಿಯಲ್ಲಿ ಫೇಲ್ ಆಗುವುದು ಹೇಗೆ ಅನಿಸುತ್ತದೆ’’ ಎಂದು ಉದಾಹರಣೆ ನೀಡುವ ಮೂಲಕ ಪವಿತ್ರಾ ಗೌಡ ಪತಿ ಅಸಮಾಧಾನ ಹೊರಹಾಕಿದರು. ವಿಚ್ಛೇದನದ ನಂತರ ಪವಿತ್ರಾ ಗೌಡ ಮಾತನಾಡಿಲ್ಲ. ನಾನು ಅವಳಿಗೆ ತೊಂದರೆ ಕೊಡಲು ಬಯಸಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಸುಮ್ಮನಾದೆ.
ಕಳೆದ 11 ವರ್ಷಗಳಲ್ಲಿ ನಾನು ನನ್ನ ಮಗಳನ್ನು ಕೇವಲ 2-3 ಬಾರಿ ಭೇಟಿಯಾಗಿದ್ದೇನೆ. ಹಾಗೆಯೇ ದರ್ಶನ್ ಅವರ ಸಿನಿಮಾದ ಶೂಟಿಂಗ್ ಸ್ಪಾಟ್ ಗೆ ಒಮ್ಮೆ ಆಟೋಗ್ರಾಫ್ ತೆಗೆದುಕೊಳ್ಳಲು ಹೋಗಿದ್ದೆ. ಆದರೆ ಅದು ಆಗಲಿಲ್ಲ. ನಮ್ಮ ವಿಚ್ಛೇದನದ 3-4 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಸಂಬಂಧವಿದೆ ಎಂದು ನನಗೆ ಗೊತ್ತಾಯಿತು. ಆದರೆ, ಆ ಸಮಯದಲ್ಲಿ ನನ್ನ ಮನಸ್ಸು ಸರಿಯಿಲ್ಲದ ಕಾರಣ ನಾನು ತಲೆಕೆಡಿಸಿಕೊಳ್ಳಲಿಲ್ಲ. ಪವಿತ್ರಾ ಗೌಡ ನೆನಪಾಗದ ದಿನವೇ ಇಲ್ಲ. ಅವಳು ನನ್ನ ಮೊದಲ ಮತ್ತು ಕೊನೆಯವಳು. ನಾನಿನ್ನೂ ಸಿಂಗಲ್. ಆದರೆ ಪವಿತ್ರಾಗೆ ಕಷ್ಟ ಬಂದರೆ ಸದಾ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
![Pavitra Gowda Divorce](https://nadunudi.in/wp-content/uploads/2024/06/Pavitra-Gowda-Divorce.png)