Pension Eligibility: ಪಿಂಚಣಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಇನ್ಮುಂದೆ 50 ವರ್ಷಕ್ಕೆ ಸಿಗಲಿದೆ ಪಿಂಚಣಿ ಹಣ.

ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಬೇಗ ಸಿಗಲಿದೆ ಪಿಂಚಣಿ ಹಣ

Pension Eligibility Age Reduce: ಭವಿಷ್ಯದ ಭದ್ರತೆಗಾಗಿ ಜನರು ಹೆಚ್ಚಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೆ. ಕೇಂದ್ರ ಸರಕಾರ ಜನರಿಗಾಗಿ ವಿವಿಧ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.

ನಿವೃತ್ತಿ ಹೊಂದಿದ ಬಳಿಕ ಪಿಂಚಿಯಲ್ಲಿನ ಹೂಡಿಕೆದಾರರು ಪಿಂಚಣಿ ಮೊತ್ತದಿಂದ ನೆಮ್ಮದಿಯ ಜೀವನವನ್ನು ನಡೆಸುವತಾಗುತ್ತದೆ. ಸದ್ಯ ಸರ್ಕಾರ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪಿಂಚಣಿದಾರರಿಗೆ ಅನುಕೂಲವಾಗಲು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

Pension Eligibility Age Reduce
Image Credit: News 18

ಪಿಂಚಣಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ಸಾಮಾನ್ಯವಾಗಿ ಎಲ್ಲ ಪಿಂಚಣಿಯ ಯೋಜನೆಗಳ ಲಾಭವನ್ನು ಹೂಡಿಕೆದಾದರೂ 60 ವರ್ಷದ ಬಳಿಕ ಪಡೆಯುತ್ತಾರೆ. ವ್ಯಕ್ತಿಯ ನಿವೃತ್ತಿಯ ವಯಸ್ಸು 60 ವರ್ಷ ಆಗಿರುವುದರಿಂದ ಯಾವುದೇ ರೀತಿಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರು ಕೂಡ ನಿಮಗೆ 60 ವರ್ಷ ಆದ ಬಳಿಕ ಮಾತ್ರ ನಿಮಗೆ ಪಿಂಚಣಿಯ ಹಣ ಲಭ್ಯವಾಗುತ್ತದೆ. ಸದ್ಯ ಈ ರಾಜ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ.

ಜಾರ್ಖಂಡ್ ನಲ್ಲಿ ಪಿಂಚಣಿ ಪಡೆಯುವ ವಯಸ್ಸನ್ನು ಕಡಿತಗೊಳಿಸಲಾಗಿದೆ. ಸದ್ಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ 60 ವರ್ಷದ ಬಳಿಕ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಜಾರ್ಖಂಡ್ ಸರ್ಕಾರ ಈ ಪಿಂಚಣಿ ಪಡೆಯುವ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿದೆ. ಇನ್ನುಮುಂದೆ ಜಾರ್ಖಂಡ್ ನಲ್ಲಿ ಜನರು ಪಿಂಚಣಿಯನ್ನು 50 ವರ್ಷ ತುಂಬಿದ ಬಳಿಕ ಪಡೆದುಕೊಳ್ಳಬಹುದು.

Pension Rules Change
Image Credit: Times Now

ಇನ್ಮುಂದೆ 50 ವರ್ಷಕ್ಕೆ ಸಿಗಲಿದೆ ಪಿಂಚಣಿ ಹಣ
ಹೆಚ್ಚಿನ ಜನರು ಅತಿ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದುತ್ತಾರೆ. ಅದರಲ್ಲೂ 50 ವರ್ಷ ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದಿರುವ ಉದಾಹರಣೆಗಳಿವೆ. 50 ವರ್ಷದಲ್ಲಿಯೇ ಮರಣ ಹೊಂದಿದರೆ ಅಂತವರು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರು ಪಿಂಚಣಿಯ ಲಾಭವನ್ನು ಪಡೆಯಲು ಸಾದ್ಯವಾಗುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್ ಸರ್ಕಾರ ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಿದೆ.

Join Nadunudi News WhatsApp Group

ಇನ್ನುಮುಂದೆ ಜಾರ್ಖಂಡ್ ನಲ್ಲಿ ಪಿಂಚಣಿಯ ಲಾಭ ಪಡೆಯಲು 60 ವರ್ಷದ ತನಕ ಕಾಯುವ ಅಗತ್ಯವಿಲ್ಲ. ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಆದಿವಾಸಿಗಳು ಮತ್ತು ದಲಿತರಿಗೆ 50 ವರ್ಷದಲ್ಲಿಯೇ ಪಿಂಚಣಿಯ ಲಾಭವನ್ನು ಪಡೆಯುವ ಅವಕಾಶವನ್ನು ಜಾರ್ಖಂಡ್ ಸರ್ಕಾರದ ನೀಡಿದೆ. ಸರ್ಕಾರ ಯೋಜನೆಗಳ ಲಾಭ ಎಲ್ಲರಿಗು ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

Join Nadunudi News WhatsApp Group