RBI Update: ಕರ್ನಾಟಕದ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ಕ್ಯಾನ್ಸಲ್ ಮಾಡಿದ RBI, ಹಣ ಹಾಕಲು ತಗೆಯಲು ಸಾಧ್ಯವಿಲ್ಲ.
ಕರ್ನಾಟಕದ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ಕ್ಯಾನ್ಸಲ್ ಮಾಡಿದ RBI.
RBI Cancel Karnataka Sahakari Bank License: ಬ್ಯಾಂಕುಗಳ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತರುವುದರ ಮೂಲಕ ಬ್ಯಾಂಕುಗಳಿಗೆ ಎಚ್ಚರಿಕೆಯನ್ನ ನೀಡಿದೆ ಎಂದು ಹೇಳಬಹುದು.
ಹೌದು ದೇಶದಲ್ಲಿ ಎಲ್ಲಾ ಬ್ಯಾಂಕುಗಳು RBI ಅಡಿಯಲ್ಲಿ ಬರುತ್ತದೆ ಮತ್ತು RBI ನಿಯಮಗಳನ್ನ ದೇಶದ ಎಲ್ಲಾ ಬ್ಯಾಂಕುಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸದ್ಯ RBI ತನ್ನ ನಿಯಮಗಳನ್ನ ಪಾಲಿಸದ ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡುತ್ತಿದೆ. ಕಳೆದ ಎರಡು ವರ್ಷದಲ್ಲಿ ಸಾಕಷ್ಟು ಬ್ಯಾಂಕುಗಳ ಲೈನ್ಸೇನ್ಸ್ ಅನ್ನು RBI ರದ್ದು ಮಾಡಿದ್ದು ಇದು ಜನರ ಸಂಕಷ್ಟಕ್ಕೆ ಕಾರಣವಾಗಿದೆ.
![RBI Cancel Karnataka Sahakari Bank License](https://nadunudi.in/wp-content/uploads/2023/09/Karnataka-Sahakari-Bank.png)
ಎರಡು ವರ್ಷದಲ್ಲಿ ಸಾಕಷ್ಟು ಬ್ಯಾಂಕುಗಳ ಲೈಸೆನ್ಸ್ ರದ್ದು
ಹೌದು ಕಳೆದ ಎರಡು ವರ್ಷದಲ್ಲಿ RBI ತನ್ನ ಅಧೀನದಲ್ಲಿ ಬರುವ ಸಾಕಷ್ಟು ಸಹಕಾರಿ ಬ್ಯಾಂಕ್ ಮತ್ತು ಪ್ರೈವೇಟ್ ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ. ಕಳೆದ ಎರಡು ತಿಂಗಳಲ್ಲಿ ನಾಲ್ಕಕ್ಕೂ ಅಧಿಕ ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI ಈಗ ಕರ್ನಾಟಕದ ಇನ್ನೊಂದು ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ್ದು ಹಣ ಇಟ್ಟ ಜನರು ಕಂಗಾಲಾಗಿದ್ದಾರೆ ಎಂದು ಹೇಳಬಹುದು.
ಕರ್ನಾಟಕ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಹೌದು ಕಳೆದ ಎರಡು ತಿಂಗಳ ಕರ್ನಾಟಕ ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI ಈಗ ಇನ್ನೊಂದು ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದೆ. ಸಾರ್ವಜನರಿಕರ ಹಿತಾಸಕ್ತಿಯ ಉದ್ದೇಶದಿಂದ ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಬ್ಯಾಂಕ್ ಅನ್ನು ಈಗ RBI ರದ್ದು ಮಾಡಿದೆ.
![rbi close bank license in karnataka](https://nadunudi.in/wp-content/uploads/2023/09/Karnataka-Sahakari-Bank-License.png)
ಈ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡುವ ಮೂಲಕ ಈ ಬ್ಯಾಂಕಿನ ವ್ಯವಹಾರ ಮೇಲೆ RBI ಮಿತಿಯನ್ನ ಹೇರಿದೆ ಎಂದು ಹೇಳಬಹುದು. ಹಣ ಇಟ್ಟ ಜನರು ಕಂಗಾಲಾಗಿದ್ದು ತಮ್ಮ ಹಣವನ್ನ ತಗೆಯಲಾಗದೆ ಕಷ್ಟಪಡುತ್ತಿದ್ದಾರೆ. ಈ ಸಹಕಾರಿ ಬ್ಯಾಂಕ್ RBI ನಿಯಮವನ್ನ ಪಾಲಿಸದ ಕಾರಣ RBI ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದೆ ಎಂದು ಹೇಳಬಹುದು.
ಲೈಸೆನ್ಸ್ ರದ್ದು ಮಾಡಲು ಕಾರಣ ತಿಳಿಸಿದ RBI
ಸದ್ಯ ಕರ್ನಾಟಕ ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕಿನ ಲೈಸೆನ್ಸ್ ಅನ್ನು RBI ಈಗ ರದ್ದು ಮಾಡಿದ್ದು ರದ್ದು ಮಾಡಲು ಕಾರಣ ತಿಳಿಸಿದೆ. ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನ ಈ ಬ್ಯಾಂಕ್ ಹೊಂದಿಲ್ಲದ ಕಾರಣ RBI ಈ ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದೆ ಎಂದು ಹೇಳಬಹುದು. ಸದ್ಯ ಈ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಜನರು ತಮ್ಮ ಪೂರ್ಣವಾದ ಠೇವಣಿಯನ್ನ ಪಡೆಯಲು ಸಾಧ್ಯವಿಲ್ಲ ಎಂದು ಹೇಳಬಹುದು.