RBI Close Banks: ಐದು ಬ್ಯಾಂಕುಗಳನ್ನ ಬಂದ್ ಮಾಡಿದ RBI, ಹಣ ಇಟ್ಟವರು ತಪ್ಪದೆ ತಿಳಿದುಕೊಳ್ಳಿ.
RBI Close 5 Cooperative Banks In India: ಆರ್ ಬಿಐ (RBI) ಈಗಾಗಲೇ ಬ್ಯಾಂಕ್ ಸಂಬಂದಿತ ಅನೇಕ ನಿಯಮಗಳಲ್ಲಿ ಬದಲಾವಣೆ ತಂದಿದೆ ಹಾಗೂ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ.
ಕರ್ನಾಟಕದಲ್ಲಿನ ಐದು ಬ್ಯಾಂಕ್ ಗಳಲ್ಲಿ ಇನ್ನು 6 ತಿಂಗಳ ಕಾಲ ಯಾವುದೇ ಸಾಲವನ್ನು ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.
![These five banks in Karnataka have been shut down by the RBI.](https://nadunudi.in/wp-content/uploads/2023/02/bank-close-in-karnataka.png)
ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ
ಬ್ಯಾಂಕ್ ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್ ಬಿಐ ಹೊಸ ಆದೇಶವನ್ನು ಹೊರಡಿಸಿದೆ. ಆರ್ ಬಿಐ ಆದೇಶ ಪ್ರತಿಯಲ್ಲಿ ನೀಡಿರುವ ಮಾಹಿತಿಯಂತೆ ಈ ನಿರ್ಬಂಧಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ.
ಆರ್ ಬಿಐ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಆರ್ ಬಿಐ ನ ಪೂರ್ವಾನುಮತಿ ಇಲ್ಲದೆ, ಸಾಲಗಳನ್ನು ನೀಡಲು, ಯಾವುದೇ ಹೂಡಿಕೆ ಮಾಡಲು ಮತ್ತು ಯಾವುದೇ ಜವಾಬ್ದಾರಿಯನ್ನು ಹೊಂದಲು ಮತ್ತು ಅದರ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಸಾಧ್ಯವಿಲ್ಲ.
![RBI will close five banks in Karnataka as per new norms](https://nadunudi.in/wp-content/uploads/2023/02/rbi-rules-for-bansk.png)
ಕರ್ನಾಟಕದ ಐದು ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ
ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿಂಷಾ ಸಹಕಾರ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ವಿಧಿಸಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿರುವ HCBL ಸಹಕಾರ ಬ್ಯಾಂಕ್, ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್, ಆಂಧ್ರ ಪ್ರದೇಶದ ಅನಂತಪುರದ ಜಿಲ್ಲೆಯ ಉರವಕೊಂಡ ಕೋ ಆಪರೇಟಿವ್ ಟೌನ್ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಅಕ್ಲುಜ್ ನಲ್ಲಿರುವ ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಗಳ ಮೇಲೆ ಆರ್ ಬಿಐ ನಿರ್ಬಂಧ ವಿಧಿಸಿದೆ.
![RBI closes five cooperative banks](https://nadunudi.in/wp-content/uploads/2023/02/RBI-close-5-banks.png)
ಆದರೆ ಈ ಎಲ್ಲ ಸಹಕಾರಿ ಬ್ಯಾಂಕ್ ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನಿಂದ ತಮ್ಮ ತಮ್ಮ ಠೇವಣಿ ವಿಮೆ ಕ್ಲೈಮ್ ಮೊತ್ತದಲ್ಲಿ 5 ಲಕ್ಷ ರೂಪಾಯಿ ವರೆಗಿನ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಆರ್ ಬಿಐ ತಿಳಿಸಿದೆ.