Virat Kohli: ಈ ಕಾರಣಕ್ಕೆ ವಿರಾಟ್ ಕೊಹ್ಲಿಯನ್ನು RCB ಯಿಂದ ಕಳುಹಿಸಿಬಿಡಿ ಅಂದ ಫ್ಯಾನ್ಸ್, ಅಷ್ಟಕ್ಕೂ ಆಗಿದ್ದೇನು.
ವಿರಾಟ್ ಕೊಹ್ಲಿಯನ್ನು RCB ತಂಡದಿಂದ ಹೊರಗಿಡಿ ಅಂದ ಫ್ಯಾನ್ಸ್
Virat Kohli Latest Update: IPL 2024 ರಲ್ಲಿ ಏಪ್ರಿಲ್ 14 ಸೋಮವಾರ ಸನ್ ರೈಸರ್ಸ್ ಹಾಗೂ RCB ತಂಡದ ನಡುವೆ ಹಣಾಹಣಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಸನ್ ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 3 ವಿಕೆಟ್ ಗೆ 287 ರನ್ ಹೊಡೆದು RCB ತಂಡಕ್ಕೆ ಗುರಿ ನೀಡಿತ್ತು. ಆದರೆ RCB ತಂಡ 7 ವಿಕೆಟ್ ಗೆ 262 ರನ್ ಅಷ್ಟೇ ಗಳಿಸಿತ್ತು. ಈ ಮ್ಯಾಚ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ದೊಡ್ಡ ಸ್ಪೋಟಕ ಆಟವೆಂದೇ ಹೇಳಬಹುದು.
ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ 20 ಓವರ್ ಗಳಲ್ಲಿ 287 ರನ್ ಗಳಿಸಿತು. ಈ ಮೂಲಕ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಯಿತು. ಇನ್ನು ಈ ಪಂದ್ಯದ ಬಳಿಕ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. RCB ತಂಡ ಸತತ ಸೋಲು ಅಭಿಮಾನಿಗಳ ನಿದ್ದೆ ಕೆಡಿಸುತ್ತಿದೆ. ವಿರಾಟ್ ಕೊಹ್ಲಿಯನ್ನು RCB ಯಿಂದ ಕಳುಹಿಸಿಬಿಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ತಿಳಿಯೋಣ.
ಈ ಕಾರಣಕ್ಕೆ ವಿರಾಟ್ ಕೊಹ್ಲಿಯನ್ನು RCB ಯಿಂದ ಕಳುಹಿಸಿಬಿಡಿ ಅಂದ ಫ್ಯಾನ್ಸ್
ಈವರೆಗೆ ನಡೆದ 16 ಆವೃತ್ತಿಯಲ್ಲಿ ಒಮ್ಮೆಯೂ RCB ಕಪ್ ಗೆದ್ದಿಲ್ಲ. ಪ್ರತಿ ವರ್ಷ ಕೂಡ RCB ಅಭಿಮಾನಿಗಳು ಈ ಬಾರಿ ಆದರೂ ಕಪ್ ಗೆಲ್ಲುತ್ತದೆ, “ಈ ಸಲ ಕಪ್ ನಮ್ದೇ” ಎನ್ನುವ ಹುಮ್ಮಸ್ಸಿನಲ್ಲಿ ಎಲ್ಲ ಪಂದ್ಯವನ್ನು ಬಹಳ ಕುತೂಹಲದಿಂದ ನೋಡುತ್ತಿದ್ದರೆ. ಆದರೆ ಈ ಬರಿ RCB ತಂಡ IPL ಆರಂಭದಲ್ಲಿಯೇ ಅಭಿಮಾನಿಗಳಿಗೆ ಬೇಸರ ನೀಡಿದೆ. ಇನ್ನು ಈವರೆಗೆ ನಡೆದ 7 ಪಂದ್ಯದಲ್ಲಿ ಕೇವಲ 1 ಪಂದ್ಯ ಗೆದ್ದು, ಇನ್ನುಳಿದ 5 ಪಂದ್ಯದಲ್ಲಿ ಸೋಲು ಕಂಡಿದೆ.
ಇನ್ನು ಏಪ್ರಿಲ್ 17 ರಂದು ನಡೆಯ RCB v /s SRH ನಡುವಿನ 30 ನೇ ಪಂದ್ಯದಲ್ಲಿ ಕೂಡ RCB ಸೋತಿದೆ. ಈ ಸೋಲಿನ ಬಳಿಕ ವಿರಾಟ್ ಅಭಿಮಾನಿಗಳು ಅವರನ್ನು ತಂಡದಿಂದ ಕಳುಹಿಸಿ ಎನ್ನುತ್ತಿದ್ದಾರೆ. ಇನ್ನು RCB ತಂಡಕ್ಕೆ ಕೋಟ್ಯಂತರ ಅಭಿಮಾನಿಗಳು ಇರಲು ಏಕೈಕ ಕಾರಣ ಎಂದರೆ ಕಿಂಗ್ ಕೊಹ್ಲಿ. ಕೊಹ್ಲಿಗಾಗಿ ಮಾತ್ರ ಜನರು RCB ಪರ ಇದ್ದಾರೆ ಎನ್ನಬಹುದು. ಆದರೆ ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಉಳಿದವರು ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನೆಯ ಪಂದ್ಯದಲ್ಲಿ SRH ಬ್ಯಾಟ್ಸ್ ಮನ್ ಗಳು RCB ಬೌಲರ್ ಗಳ ಬೆವರಿಳಿಸಿದರು. ಮೈದಾನದಲ್ಲಿ ಬಹಳ ಹೊತ್ತು ನಿಂತಿದ್ದ ವಿರಾಟ್ ಬೇಸರಗೊಂಡರು. ವಿರಾಟ್ ಕೊಹ್ಲಿ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ. ನೆಲದ ಮೇಲಿದ್ದ ಹುಲ್ಲನ್ನು ಕಾಲಿನಿಂದ ಒದ್ದರು, ಹಾಗೆಯೆ ಜೋರಾಗಿ ಕಿರುಚಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಅಭಿಮಾನಿಗಳು ಆರ್ಸಿಬಿ ಆಡಳಿತಕ್ಕೆ ಮನವಿ ಮಾಡಿದ್ದಾರೆ. ದಯವಿಟ್ಟು ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಿ. ಈ ರೀತಿಯ ಹಿಂಸೆ ಕೊಟ್ರೆ ಯಾರ್ ಸರ್ ಬದುಕುತ್ತಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.