Vishnuvardhan Memorial: ವಿಷ್ಣು ದಾದಾಗೆ ಅವಮಾನ ಮಾಡಿದ ಬಾಲಣ್ಣ ಕುಟುಂಬ, ನೋವನ್ನ ಹಂಚಿಕೊಂಡ ನಟ ಅನಿರುದ್ಧ.
Vishnuvardhan Memorial: ನಟ ವಿಷ್ಣುವರ್ಧನ್ (Vishnuvardhan)ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟ ವಿಷ್ಣುವರ್ಧನ್ ಅವರು ಇಂದು ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದರೆ ಎಂದು ಹೇಳಬಹುದು.
ನಟ ವಿಷ್ಣುವರ್ಧನ್ ಅವರು ನಮ್ಮನ್ನ ಅಗಲಿ ಹಲವು ವರ್ಷಗಳು ಕಳೆದರು ಕೂಡ ಅವರು ಸಾಕಷ್ಟು ಜನರಿಗೆ ಆಶಾಕಿರಣರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ನಡೆಯಲಿದ್ದು ಸದ್ಯ ಅದರ ತಯಾರಿಯನ್ನ ಮಾಡಲಾಗುತ್ತಿದೆ.
ಇನ್ನೇನು ಕೆಲವೇ ಡೈಗಳಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ
ಇನ್ನೇನು ಕೆಲವೇ ದಿನಗಳಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಕೂಡ ಭಾಗಿಯಾಗಲಿದ್ದಾರೆ. ಇದರ ನಡುವೆ ನಟ ವಿಷ್ಣುವರ್ಧನ್ ಅವರ ಬಗ್ಗೆ ಅವರ ಅಳಿಯನಾದ ಅನಿರುದ್ಧ (Aniruddha Jatkar) ಅವರು ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.
ನಟ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಬಾಲಣ್ಣ ಕುಟುಂಬ
ನಟ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಲಿದ್ದು ಇದರ ಬಗ್ಗೆ ಮಾಹಿತಿಯನ್ನ ಅವರ ಅಳಿಯನಾದ ಅನಿರುದ್ದ್ ಅವರು ಹಂಚಿಕೊಂಡಿದ್ದಾರೆ.
“ಅಭಿಮಾನ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಮತ್ತು ಇತ್ಯಾದಿಗಳನ್ನ ಮಾಡಿಕೊಂಡು ಬರಲಿ ನಮಗೆ ಏನು ಅಭ್ಯಂತರ ಇಲ್ಲ ಮತ್ತು ಇರೋದು ಇಲ್ಲ ಮತ್ತು ಇದ್ದಿದ್ದರೆ ಇಷ್ಟು ದಿನ ಅಭಿಮಾನಿಗಳಿಗೆ ಪೂಜೆ ಮಾಡುವ ಅವಕಾಶಗಳೇ ಇರುತ್ತಿರಲಿಲ್ಲ.
ನಾವು ಯಾವತ್ತೂ ಕೂಡ ಸಮಾಧಿಯನ್ನ ತೆರವು ಮಾಡುವುದಕ್ಕೆ ಬಯಸಲಿಲ್ಲ. ಆದರೆ ಬಾಲಣ್ಣವರ ಕುಟುಂಬದವರ ಆಪೇಕ್ಷೆ ಏನು, ಹತ್ತು ಗುಂಟೆ ಆವತ್ತು ಯಾಕೆ ಕೊಡಲಿಲ್ಲ ಆರು ವರ್ಷಗಳಿಂದ ಕೇಳಿ ಕೇಳಿ ಎಷ್ಟೇ ಪ್ರಯತ್ನ ಮಾಡಿದರು ಅವರು ಆ ಸಮಯದಲ್ಲಿ ಮನಸ್ಸು ಮಾಡಲಿಲ್ಲ.
ಅವರು ಅಪ್ಪವರನ್ನ ಅಮ್ಮವರನ್ನ ಅವಮಾನ ಮಾಡಿದ್ದಾರೆ. ಕೊನೆಗೆ ಸರ್ಕಾರವೇ ಬೇರೆ ಕಡೆ ಮಾಡಿ ಎಂದು ಹೇಳಿದ ಮೇಲೆ ನಾವು ಈ ನಿರ್ಧಾರವನ್ನ ತಗೆದುಕೊಳ್ಳಲಾಯಿತು.
View this post on Instagram
ನಾವು ತುಂಬಾ ನೊಂದುಕೊಂಡಿದ್ದೇವೆ, ಸಾಕಷ್ಟು ಸಂಘರ್ಷಗಳನ್ನ ನಡೆಸಿದ್ದೇವೆ ಮತ್ತು ಹೋರಾಟವನ್ನ ಮಾಡಿದ್ದೇವೆ, ದಯವಿಟ್ಟು ನಮ್ಮ ಶ್ರಮ, ಕಾಳಜಿ ಮತ್ತು ಪ್ರೀತಿಯ ಬಗ್ಗೆ ಪ್ರಶ್ನೆಯನ್ನ ಎತ್ತಬೇಡಿ” ಎಂದು ನಟ ಅನಿರುದ್ಧ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಸಮಾಧಿ ಮಾಡುವ ಸಮಯದಲ್ಲಿ ತಾವು ಪಟ್ಟ ಕಷ್ಟ ಮತ್ತು ಅವಮಾನಗಳ ಬಗ್ಗೆ ಹೇಳಿಕೊಂಡಿದ್ದಾರೆ ನಟ ಅನಿರುದ್ಧ ಜತ್ಕರ್ ಅವರು. ಇದೆ ತಿಂಗಳು ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ನಡೆಯಲಿದೆ ಎಂದು ನಟ ಅನಿರುದ್ಧ ಅವರು ತಿಳಿಸಿದ್ದಾರೆ.