Yuva Nidhi Conditions: ಯುವ ನಿಧಿ ಯೋಜನೆಗೆ ಷರತ್ತು ವಿಧಿಸಿದ ಸರ್ಕಾರ, ಇಂತಹ ಜನರಿಗೆ ಮಾತ್ರ ಸಿಗಲಿದೆ ಹಣ

ಯುವ ನಿಧಿ ಯೋಜನೆಗೆ ಷರತ್ತು ವಿಧಿಸಿದ ರಾಜ್ಯ ಸರ್ಕಾರ

Yuva Nidhi Latest Update: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ YUVA NIDHI ಅನುಷ್ಠಾನ ಮಾತ್ರ ಭಾಕಿ ಇದೆ. ಸದ್ಯ ರಾಜ್ಯ ಸರಕಾರ ಉಚಿತ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಯುವ ನಿಧಿ ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ.

ಯುವ ನಿಧಿ ಯೋಜನೆ ನೋಂದಣಿ ಯಾವಾಗ..? ಯುವ ನಿಧಿ ಯೋಜನೆಗೆ ಅರ್ಹರು ಯಾರು..? ಯಾರಿಗೆ ನಿರುದ್ಯೋಗ ಭತ್ಯೆ ಲಭ್ಯವಾಗುವುದಿಲ್ಲ..? ಯುವ ನಿಧಿ ಯಾವಾಗ ಅರ್ಹರ ಕೈ ಸೇರಲಿದೆ..? ಅನ್ನುವ ಪ್ರಶ್ನೆಗೆ ರಾಜ್ಯ ಸರ್ಕಾರದಿಂದ ಮಾಹಿತಿ ಲಭಿಸಿದೆ. ಈ ದಿನಾಂಕದಿಂದ ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಿರುವವರು ಯೋಜನೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Yuva Nidhi Registration
Image Credit: Original Source

ಯುವ ನಿಧಿ ನೋಂದಣಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್
ಸದ್ಯ ಈ ಯುವ ನಿಧಿ ಯೋಜನೆಯ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. December 26 ರಿಂದ ಯುವ ನಿಧಿ ಯೋಜನೆ ನೋಂದಣಿ ಆರಂಭವಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ. ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆಯನ್ನು ಜನವರಿ 2024 ರಲ್ಲಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನೀವು ಯುವ ನಿಧಿ ಯೋಜನೆಗೆ ನೋಂದಣಿ ಮಾಡುವ ಮುನ್ನ ಈ ಯೋಜನೆಯ ಅರ್ಹತೆ ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Yuva Nidhi Latest Update
Image Credit: Kankaionline

ಯುವ ನಿಧಿ ಯೋಜನೆಗೆ ಷರತ್ತುಗಳು ಅನ್ವಯ
•ಇನ್ನು 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ.

Join Nadunudi News WhatsApp Group

•ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

•ಅಪ್ರೆಂಟಿಸ್ ವೇತನದ ಫಲಾನುಭವಿ.

•ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

•ಸ್ವಯಂ ಉದ್ಯೋಗದಲ್ಲಿರುವ ಯುವಕರು.

•ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Join Nadunudi News WhatsApp Group