Yuva Nidhi: ಇಂತಹವರ ಖಾತೆಗೆ ಯುವ ನಿಧಿ ಯೋಜನೆಯ ಹಣ ಜಮಾ, ಇಂತವರಿಗೆ ಸಿಗಲ್ಲ ಯುವ ನಿಧಿ ಹಣ

ಯುವ ನಿಧಿ ಯೋಜನೆಯ ಹಣ ಇಂತವರ ಖಾತೆಗೆ ಮಾತ್ರ ಜಮಾ ಆಗಲಿದೆ

Yuva Nidhi Amount Credit: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ ಯುವ ನಿಧಿ (Yuva Nidhi) ನಿನ್ನೆ ಅನುಷ್ಠಾನಗೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ಭತ್ಯೆಯಡಿ ಮಾಸಿಕ ಸಹಾಯಧನ ಪಡೆಯಲು ರಾಜ್ಯದ ಅರ್ಹ ನಿರುದ್ಯೋಗಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಹರ ಖಾತೆಗೆ ನಿನ್ನೆ ಹಣ ಜಮಾ ಆಗಿದೆ.

ಸಿಎಂ ಸಿದ್ದರಾಮಯ್ಯ ಅವರು ಜನವರಿ 12 ರಂದು ಯೋಜನೆಗೆ ಚಾಲನೆ ನೀಡಿದ್ದಾರೆ. 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ನಿನ್ನೆ ಅನುಷ್ಠಾನಗೊಂಡ ಯುವ ನಿಧಿ ಯೋಜನೆಯ ಹಣ ಇಂತವರ ಖಾತೆಗೆ ಮಾತ್ರ ಜಮಾ ಆಗಲಿದೆ.

Yuva Nidhi Amount Credit
Image Credit: The Hindu

ಇಂತಹವರ ಖಾತೆಗೆ ಯುವ ನಿಧಿ ಯೋಜನೆಯ ಹಣ ಜಮಾ
•ಕರ್ನಾಟಕ ರಾಜ್ಯದ ನಿರುದ್ಯೋಗಿಗಳಿಗೆ ಮಾತ್ರ ಯುವ ನಿಧಿ ಲಾಭ ದೊರೆಯಲಿದೆ.

•2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ.

•ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ.

Join Nadunudi News WhatsApp Group

•ಎರಡು ವರ್ಷದೊಳಗೆ ಅಭ್ಯರ್ಥಿಗೆ ಉದ್ಯೋಗ ದೊರೆತರೆ ಮಾಸಿಕ ಹಣ ಸ್ಥಸ್ಥಗಿತವಾಗಲಿದೆ.

•ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸಬೇಕು.

•ನಕಲಿ ಮಾಹಿತಿ ನೀಡಿ ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದರೆ ಅಂತವರಿಗೆ ಸರ್ಕಾರ ಬಾರಿ ದಂಡ ವಿಧಿಸಲಿದೆ.

Yuva Nidhi launched in Shivamogga
Image Credit: The Hindu

ಇಂತವರಿಗೆ ಸಿಗಲ್ಲ ಯುವ ನಿಧಿ ಹಣ
•ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

•ಅಪ್ರೆಂಟಿಸ್ ವೇತನದ ಫಲಾನುಭವಿ.

•ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

•ಸ್ವಯಂ ಉದ್ಯೋಗದಲ್ಲಿರುವ ಯುವಕರು.

•ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Join Nadunudi News WhatsApp Group