Aniruddha Jatkar New Serial: ಮತ್ತೆ ಧಾರಾವಾಹಿಗೆ ಎಂಟ್ರಿ ಕೊಟ್ಟ ನಟ ಅನಿರುದ್ಧ, ಅಭಿಮಾನಿಗಳಿಗೆ ಸಿಹಿಸುದ್ದಿ.

Aniruddha Jatkar New Serial: ಕನ್ನಡದಲ್ಲಿನ ಧಾರಾವಾಹಿಗಳನ್ನು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗಂತೂ ಹೊಸ ಹೊಸ ಧಾರಾವಾಹಿಗಳು ಬರುತ್ತಿದ್ದು, ಧಾರಾವಾಹಿ ಪ್ರಿಯರಿಗೆ ಇನ್ನಷ್ಟು ಮನೋರಂಜನೆಯನ್ನು ನೀಡುತ್ತಿದೆ. ಅದರ ಜೊತೆಗೆ ತೆಲುಗು, ಹಿಂದಿ ಭಾಷೆಯ ಧಾರಾವಾಹಿಗಳನ್ನು ಸಹ ಕನ್ನಡದಲ್ಲಿ ಡಬ್ ಮಾಡುತ್ತಿದ್ದಾರೆ.

ಜಿ ಕನ್ನಡ ಚಾನೆಲ್ (Zee Kannada) ನಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ (Jote  Joteyali Serial) ಅನ್ನು ಎಲ್ಲರೂ ಹೆಚ್ಚು ಇಷ್ಟ ಪಡುತ್ತಿದ್ದಾರೆ. ವಯಸ್ಸಿನ ಅಂತರದ ನಡುವೆ ಹುಟ್ಟಿರುವ ಪ್ರೀತಿಯ ಕುರಿತಾದ ಕಥೆಯಿಂದ ಈ ಸೀರಿಯಲ್  ಅದ್ಭುತವಾಗಿ ಪ್ರದರ್ಶನಗೊಳ್ಳುತ್ತಿದೆ.

Anirudh is coming back to television to act in a serial directed by S Narayan.
Image Credit: timesofindia.indiatimes

ಅನಿರುದ್ದ್ (Actor Anirudh Jatkar) ಇದರಲ್ಲಿ ನಾಯಕನಾಗಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಅನಿರುದ್ದ್ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿಸುದನ್ನು ಬಿಟ್ಟಿದ್ದರು. ಇದೀಗ ಅನಿರುದ್ದ್ ಅವರ ಪಾತ್ರಕ್ಕೆ ಬದಲಾಗಿ ಹರೀಶ್ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ.

ಕಿರುತೆರೆಗೆ ಮತ್ತೆ ಮರಳುತ್ತಿರುವ ಅನಿರುದ್ದ್
ಅನಿರುದ್ದ್ ಅವರು ಮತ್ತೆ ಕಿರುತೆರೆಗೆ ಬರಲಿದ್ದಾರೆ. ಆದರೆ ಅವರು ಮತ್ತೆ ಜೊತೆ ಜೊತೆಯಲಿ ಸೀರಿಯಲ್ ತಂಡದ ಜೊತೆ ಸೇರಿಕೊಳ್ಳುತ್ತಿಲ್ಲ. ಉದಯ ವಾಹಿನಿಯಲ್ಲಿ (Udaya Tv) ಹೊಸ ಧಾರಾವಾಹಿಯೊಂದರಲ್ಲಿ ಅನಿರುದ್ದ್ ನಟಿಸಲು ತಯಾರಾಗಿದ್ದಾರೆ. ಈ ಧಾರಾವಾಹಿಗೆ ಸೂರ್ಯವಂಶ (Sooryavamsha)  ಎಂದು ಹೆಸರಿಡಲಾಗಿದೆ.

Actor Anirudh Jatkar will be acting again in S Narayan's serial
Image Credit: timesofindia.indiatimes

ಸೂರ್ಯವಂಶ ಹೆಸರು ಕೇಳಿದರೆ ನೆನಪಾಗುವುದು ವಿಷ್ಣುವರ್ಧನ್ (Vishnuvardhan) ಅವರು. ಇದೀಗ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ವಿಷ್ಣುವರ್ಧನ್ ಅವರ ಚಿತ್ರದ ಶೀರ್ಷಿಕೆ ಇಟ್ಟಿರುವುದು ವಿಶೇಷವಾಗಿದೆ.

Join Nadunudi News WhatsApp Group

ಎಸ್ ನಾರಾಯಣ್ (S. Narayan ) ನಿರ್ದೇಶನದಲ್ಲಿನ ಧಾರಾವಾಹಿಯಲ್ಲಿ ನಟಿಸಲಿರುವ ಅನಿರುದ್ದ್
ಉದಯ ವಾಹಿನಿಯಲ್ಲಿ (Udaya Tv) ಧಾರಾವಾಹಿ ಮಾಡುತ್ತಿರುವ ಬಗ್ಗೆ ನಟ ಅನಿರುದ್ದ್ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

Actor Anirudh Jatkar is set to act in the new serial
Image Credit: tv9kannada

ನಮ್ಮ ನಿಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಸೂರ್ಯವಂಶ ಸೀರಿಯಲ್ ನಲ್ಲಿ ನಟಿಸಲಿದ್ದೇನೆ. ಇದು ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಯ ಫಲ ತಮ್ಮ ಪ್ರೀತಿ ಪ್ರೋತ್ಸಹ ನನ್ನ ಮೇಲೆ ಸದಾ ಇರುತ್ತದೆ ಎನ್ನುವ ಭರವಸೆ ನನಗೆ ಇದೆ ಎಂದು ಪೋಸ್ಟ್ ಮಾಡಿದ್ದರು.

 

View this post on Instagram

 

A post shared by Aniruddha Jatkar (@aniruddhajatkar)

ಅನಿರುದ್ದ್ ಅವರು ಕಿರುತೆರೆಯಿಂದ ಹೊರಬಂದ ಕಾರಣ ಅವರನ್ನು ಬ್ಯಾನ್ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಆದರೆ ಹಾಗೆ ಆಗಲಿಲ್ಲ. ಇದೀಗ ತಮ್ಮ ಅಭಿಮಾನಿಗಳನ್ನು ಮತ್ತೆ ರಂಜಿಸಲು ಉದಯ ವಾಹಿನಿಯಲ್ಲಿ ಬರುತ್ತಿದ್ದಾರೆ.

Join Nadunudi News WhatsApp Group