ಮನುಷ್ಯನ ಜೀವನ ಯಾವ ರೀತಿಯಲ್ಲಿ ಬದಲಾಗತ್ತದೆ ಅನ್ನುವುದನ್ನ ಯಾರಿಂದಲೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಹೌದು ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಮಾನವನ ಜೀವನವನ್ನೇ ಬದಲಾವಣೆ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಕಳೆದ ಕೆಲವು ತಿಂಗಳುಗಳಿಂದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದ ಈ ಯುವಕನನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿದ್ದರೆ ಎಂದು ಹೇಳಬಹುದು. ಹೌದು ಈ ಯುವಕನನ್ನ ನೋಡಿದ ಕೆಲವು ಹುಡುಗರು ದೇವರೇ ನಿನಗೆ ಕಣ್ಣು ಇಲ್ವಾ, ಕರುಣೆ ಇಲ್ವಾ, ಈ ಹುಡುಗನಿಗೆ ಇಷ್ಟು ಚಂದದ ಹುಡುಗಿನ, ನಾವೇನು ಕಡಿಮೆ ಮಾಡಿದ್ವಿ ಮತ್ತು ಹಾಗೆ ಹೀಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಮಾಡಿದ್ದರು ಎಂದು ಹೇಳಬಹುದು.
ಇನ್ನು ಈತನ ಬಗ್ಗೆ ಟ್ರೊಲ್ ಮಾಡಿದರೆ ವಿನಃ ಈತ ಯಾರು, ಈತನ ಹಿನ್ನಲೆ ಏನು ಅನ್ನುವುದನ್ನ ತಿಳಿದುಕೊಳ್ಳಲು ಯಾರು ಕೂಡ ಪ್ರಯತ್ನ ಮಾಡಲಿಲ್ಲ ಎಂದು ಹೇಳಬಹುದು. ಹಾಗಾದರೆ ಈ ಹುಡುಗ ಯಾರು, ಈತ ಇಷ್ಟು ಫೇಮಸ್ ಆಗಿರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯುವಕನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಯುವಕನ ಹೆಸರು ಅರುಣ್ ಕುಮಾರ್, ಸ್ನೇಹಿತರೆ ಅರುಣ್ ಕುಮಾರ್ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ, ಬದಲಾಗಿ ಅಟ್ಲಿ ಎಂದು ಕರೆದರೆ ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಈ ಯುವಕ ಸಿಕ್ಕಾಪಟ್ಟೆ ಫೇಮಸ್ ಆಗಿರುವುದು ಅಟ್ಲಿ ಅನ್ನುವ ಹೆಸರಿನಿಂದ ಆಗಿದೆ.
1986 ಮದುರೈ ನಲ್ಲಿ ಈ ಯುವಕ ಹಟ್ಟುತ್ತಾನೆ ಮತ್ತು ಈ ಯುವಕ Bsc ಓದಿದ್ದಾನೆ. ಚಿತ್ರರಂಗದಲ್ಲಿ ಹೆಚ್ಚಿನ ಒಲವು ಇದ್ದಕಾರಣ ಭಾರತ ಚಿತ್ರರಂಗ ಕಂಡ ಯಶಸ್ವಿ ನಿರ್ದೇಶಕರಾದ ಶಂಕರ್ ಅವರ ಬಳಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಅಟ್ಲಿ. ಕೆಲವು ಚಿತ್ರಗಳಿಗೆ ಸಹನಿರ್ದೇಶಕನಾಗಿ ಕೆಲಸವನ್ನ ಮಾಡಿದ ಅರುಣ್ ಕುಮಾರ್ ಅವರಿಗೆ ಒಂದು ಒಳ್ಳೆಯ ಅವಕಾಶ ಕೂಡ ಬರುತ್ತದೆ. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಆಲೋಚನೆ ಮಾಡಿದ ಈ ಅಟ್ಲಿ 2013 ರಲ್ಲಿ ರಾಜರಾಣಿ ಅನ್ನುವ ಸಿನಿಮಾವನ್ನ ನಿರ್ದೇಶನ ಮಾಡುತ್ತಾನೆ, ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಮತ್ತು ಬೇರೆ ಭಾಷೆಗಳಿಗೆ ಡಬ್ ಆಗುವುದರ ಜೊತೆಗೆ ಕೆಲವು ಭಾಷೆಗಳಲ್ಲಿ ರಿಮೇಕ್ ಕೂಡ ಆಗುತ್ತದೆ.
ಇನ್ನು ಇದಾದ ನಂತರ 2016 ವಿಜಯ್ ಅವರನ್ನ ಹಾಕಿಕೊಂಡು ತೇರಿ ಅನ್ನುವ ಚಿತ್ರವನ್ನ ನಿರ್ದೇಶನ ಮಾಡುತ್ತಾರೆ ಮತ್ತು ಆ ಚಿತ್ರ ಸೂಪರ್ ಹಿಟ್ ಆಗುತ್ತದೆ. ಈತ ಮಾಡಿದ ಬಹುತೇಕ ಎಲ್ಲಾ ಚಿತ್ರ ಸೂಪರ್ ಹಿಟ್ ಆಗುತ್ತದೆ ಮತ್ತು ತಮಿಳು ನಾಡಿದ ಸ್ಟಾರ್ಟ್ ನಟರು ಇವರ ನಿರ್ದೇಶನದಲ್ಲಿ ಕೆಲಸವನ್ನ ಮಾಡಲು ಇಷ್ಟಪಡುತ್ತಾರೆ. ಇನ್ನು ಈತನ ದೊಡ್ಡ ಆಸೆ ಏನು ಅಂದರೆ ಅದೂ ರಜನೀಕಾಂತ್ ಅವರನ್ನ ಹಾಕಿಕೊಂಡು ಚಿತ್ರವನ್ನ ಮಾಡಬೇಕು ಅನ್ನುವುದು ಆಗಿದೆ, ಇನ್ನು ಒಂದು ಚಿತ್ರವನ್ನ ನಿರ್ದೇಶನ ಮಾಡಲು ಈತ ಪಡೆಯುವ ಸಂಭಾವನೆ 1.5 ಕೋಟಿ ರೂಪಾಯಿ ಆಗಿದೆ. ಇನ್ನು ಈ ಅಟ್ಲಿ ಕೃಷ್ಣಪ್ರಿಯ ಅನ್ನುವ ನಟಿಯನ್ನ ಪ್ರೀತಿಮಾಡಿ ಮದುವೆಯನ್ನ ಆಗಿದ್ದಾರೆ, ಸ್ನೇಹಿತರೆ ಇವರ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.