ಈ ಕಲಿಯುಗದಲ್ಲಿ ಜನರು ನರರಾಕ್ಷಸರು ಅನ್ನುವುದು ಇನ್ನೊಮ್ಮೆ ಸಾಭೀತು ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈಗಿನ ಕಾಲದ ಜನರ ಮನಸ್ಥಿತಿಯನ್ನ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದು. ಜನರು ತಮ್ಮ ಮಂದಬುದ್ಧಿಯಿಂದ ಮಾಡುವ ಕೆಲಸಗಳಿಗೆ ಪಾಪ ಈಗಿನ ಕಾಲದ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಹೇಳಬಹುದು. ಮಕ್ಕಳ ಪಾಲಿಗೆ ತಾಯಿ ದೇವರಾಗಿರುತ್ತಾಳೆ ಮತ್ತು ಆಕೆ ತಮ್ಮ ಮಕ್ಕಳಿಗಾಗಿ ಯಾವ ಕೆಲಸವನ್ನ ಮಾಡಲು ಕೂಡ ಹಿಂದೆಮುಂದೆ ನೀಡುವುಲ್ಲ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಈ ಘಟನೆಯಲ್ಲಿ ಎಲ್ಲ ಉಲ್ಟಾ ಆಗಿದ್ದು ಈ ಘಟನೆಯನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತದೆ ಎಂದು ಹೇಳಬಹುದು.
ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸಬೇಕಾದ ತಾಯಿಯೊಬ್ಬಳು ಮೌಢ್ಯಕ್ಕೆ ಮರುಳಾಗಿ ಹತ್ತೆ ಮಗುವನ್ನೇ ಬಲಿ ನೀಡಿರುವ ಭಯಾನಕ ಘಟನೆ ತೆಲಂಗಾಣದ ಸೂರ್ಯಪೇಟೆಯ ಮೆಕಲಪಟಿ ತಾಂಡಾದಲ್ಲಿ ಗುರುವಾರ ಸಂಜೆ ನಡೆದಿದೆ. ಇನ್ನು ಹೆಂಡತಿ ಮಾಡಿರುವ ಈ ಕೆಲಸವನ್ನ ನೋಡಿ ಪತಿ ಆಘಾತಕ್ಕೆ ಒಳಲಾಗಿದ್ದು ಇದು ಅಲ್ಲಿನ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ ಎಂದು ಹೇಳಬಹುದು. ಇನ್ನು ಈ ಮಹಿಳೆ ಈ ಕೃತ್ಯ ಮಾಡುವ ಮುನ್ನ ಯು ಟ್ಯೂಬ್ ನಲ್ಲಿ ನೋಡಿದ್ದು ಏನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಈ ಮಹಾತಾಯಿ ಈ ಕೃತ್ಯ ಎಸಗುವ ಮುನ್ನ ಯು ಟ್ಯೂಬ್ ನಲ್ಲಿ ನೋಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈಕೆ ಮಾಡಿದ ಈ ಕೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಪತ್ನಿಯ ಮೌಢ್ಯತೆ ಕಂಡು ಪತಿ ಆಘಾತಕ್ಕೆ ಒಳಗಾಗಿದ್ದಾನೆ. ಇತ್ತ ಮಗುವೂ ಇಲ್ಲ ಅತ್ತ ಪತ್ನಿ ಜೈಲು ಪಾಲಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೆಕಲಪಟಿ ಮೂಲದ ಕೃಷ್ಣ ಅನ್ನುವ ವ್ಯಕ್ತಿ ಭಾರತಿ ಅಲಿಯಾಸ್ ಲಾಸ್ಯ ಎಂಬಾಕೆಯನ್ನು ಮದುವೆ ಆಗಿದ್ದಾನೆ. ಕೃಷ್ಣ ವೃತ್ತಿಯಲ್ಲಿ ರೈತನಾಗಿದ್ದಾನೆ ಮತ್ತು ದಮಪ್ತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರಿಗೆ ಒಂದು ಹೆಣ್ಣು ಮಗು ಕೂಡ ಹುಟ್ಟಿತು.
ಇನ್ನು ವಿಷಯಕ್ಕೆ ಬರುವುದಾದರೆ, ಪತ್ನಿ ಭಾರತಿಗೆ ಮೌಡ್ಯತೆಯಲ್ಲಿ ಬಹಳ ನಂನಿಕೆ ಇತ್ತು ಮತ್ತು ಮದುವೆಯಾದ 8 ತಿಂಗಳ ಬಳಿಕ ಪೂಜಾರಿ ಒಬ್ಬ ಭಾರತಿಗೆ ಪೂಜೆ ಮಾಡುವಂತೆ ಹೇಳಿದ್ದ, ಮೌಢ್ಯಗಳಲ್ಲಿ ಭಾರಿ ನಂಬಿಕೆ ಹೊಂದಿದ್ದ ಭಾರತಿ ನನಗೆ ಭಯ ಇದೆ ಮತ್ತು ಈ ಭಯದಿಂದ ಹೊರಬರಲು ಏನು ಮಾಡಬೇಕೆಂದು ಕೇಳಿದಾಗ ಪೂಜಾರಿ ಪೂಜೆ ಮಾಡಲು ಹೇಳಿದ್ದ. ಇನ್ನು ಆ ಪೂಜಾರಿ ನಿನಗೆ ನಾಗದೋಷವಿದೆ ಮತ್ತು ಪೂಜೆಯನ್ನ ಮಾಡಿ ಎಲ್ಲವನ್ನ ಸರಿ ಮಾಡಿಕೊ ಎಂದು ಆತ ಹೇಳಿದ್ದ. ಇನ್ನು ನಿನಗೆ ಹುಟ್ಟುವ ಮಗು ಹೆಣ್ಣಾಗಲಿ ಅಥವಾ ಅಥವಾ ಗಂಡಾಗಲಿ ಅದನ್ನ ಸಹ ತ್ಯಾಗ ಮಾಡಬೇಕು ಎಂದು ಆ ಪೂಜಾರಿ ಭಾರತಿ ಹೇಳಿದ್ದ.
ಇದನ್ನೇ ಬಲವಾಗಿ ನಂಬಿದ ಭಾರತಿ ಅಂದಿನಿಂದ ವಾರಕ್ಕೆ ಎರಡು ಅಥವಾ ಮೂರು ದಿನ ನಾಗಪೂಜೆ ಮಾಡಲು ಆರಂಭಿಸಿದಳು ಮತ್ತು ಇದರ ನಡುವೆಯೇ ಆಕೆ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದಳು. ಇನ್ನು ನಿನ್ನೆ ಪತಿ ಕೃಷ್ಣ ಕೆಲಸದ ನಿಮಿತ್ತ ಸೂರ್ಯಪೇಟೆಗೆ ತೆರಳಿದ್ದಾನೆ, ಆದರೆ ಪತ್ನಿ ವರ್ತನೆ ಬಗ್ಗೆ ಮೊದಲೇ ಅನುಮಾನ ಹೊಂದಿದ್ದ ಕೃಷ್ಣ ತನ್ನ ಅತ್ತೆ ಮನೆಯವರಿಗೆ ಭಾರತಿಯನ್ನು ನೋಡಿಕೊಳ್ಳಲು ಹೇಳಿ ಹೋಗಿರುತ್ತಾನೆ. ಇನ್ನು ಇತ್ತ ಸಮಯಕ್ಕಾಗಿ ಕಾದು ಕುಳಿತ್ತಿದ್ದ ಭಾರತಿ ಚಾಕುವಿನಿಂದ ಇರಿದು ಮಗುವಿನ ಜೀವ ತೆಗೆದಿದ್ದಾಳೆ. ಇತ್ತ ಮನೆಗೆ ಮಗಳನ್ನು ನೋಡಿಕೊಳ್ಳಲು ಬಂದ ಭಾರತಿಯ ತಾಯಿ ಮಗುವಿನ ಸ್ಥಿತಿ ಕಂಡು ಬೆಚ್ಚಿ ಬೀಳುತ್ತಾರೆ. ಇನ್ನು ಭಾರತಿ ದೇವರ ಫೋಟೋ ಮುಂದೆ ಇಂತಹ ನಿಜ ಕೆಲಸವನ್ನ ಮಾಡಿರುತ್ತಾಳೆ ಮತ್ತು ಅದೇ ಸಮಯದಲ್ಲಿ ನಾಗ ಪೂಜೆ ಹೇಗೆ ಮಾಡಬೇಕು ಅನ್ನುವುದನ್ನ ಯು ಟ್ಯೂಬ್ ನಲ್ಲಿ ನೋಡಿದ್ದಾಳೆ. ಈಕೆ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ ಎಂದು ಹೇಳಬಹುದು.