ಒಮ್ಮೆ ಯೋಚಿಸಿ ನೋಡಿ, ಕೆಲವೊಮ್ಮೆ ಪತಿಯೂ ಅತಿಯಾಗಿ ಪ್ರೀತಿಸಿದರೆ ಪತ್ನಿಯೂ ಮೋಸ ಮಾಡಿ ಬಿಡುತ್ತಾಳೆ. ಪತ್ನಿ ಅತಿಯಾಗಿ ಪ್ರೀತಿಸುತ್ತಿದ್ದರೆ ಪತಿ ಮೋಸ ಮಾಡುತ್ತಾನೆ.ಅದೇ ಪತಿ ಪತ್ನಿ ಇಬ್ಬರು ಸುಖ ಹಾಗೂ ನೆಮ್ಮದಿಯ ಜೀವನವನ್ನು ಮಾಡುತ್ತಾ ಒಬ್ಬರಿನೊಬ್ಬರು ಮುಗಿಲೆತ್ತರದಷ್ಟು ಪ್ರೀತಿಸುತ್ತಿದ್ದರೆ ದೇವರೆ ಮೋಸ ಮಾಡಿ ಬಿಡುತ್ತಾನೆ. ಈ ಮಾತು ನೂರಕ್ಕೆ ನೂರು ಸತ್ಯ ಅಲ್ಲವೇ. ಇನ್ನು ಪ್ರಾಣ ಕಳೆದುಕೊಂಳ್ಳುವ ವಯ್ಯಸ್ಸಾಗಿರುವುದಿಲ್ಲ.
ಯಾವುದೇ ರೋಗ ಕಾಯಿಲೆ ಇರುವುದಿಲ್ಲ, ಆದರೂ ಕೂಡ ದೇವರು ಜೊತೆಯಲ್ಲಿರುವ ಜೀವವನ್ನು ಕೆರೆಸಿಕೊಂಡು ಬಿಡುತ್ತಾನೆ.ಕಳೆದ ವರುಷ ಒಂದು ಕುಟುಂಬ ಊಹಿಸಲಾರದ ರೀತಿಯಲ್ಲಿ ನೋವನ್ನು ಅನುಭವಿಸಿತ್ತು ಎಂದರೆ ಅದು ಸರ್ಜಾ ಕುಟುಂಬ. ಹೌದು ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆ ಈಗಲೂ ಕೂಡ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.ಹೌದು ಕನ್ನಡ ಚಿತ್ರರಂಗದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಚಿರಂಜೀವಿ ಸರ್ಜಾ ಉದಯೋನ್ಮುಖ ನಟನಾಗಿ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಚಿತ್ರರಂಗದಲ್ಲಿ ಯಾವುದೇ ನೆಗೆಟಿವ್ ವಿಚಾರಗಳನ್ನು ಮೈಮೇಲೆ ಎಳೆದುಕೊಳ್ಳದೆ ತಾವಾಯ್ತು ತಮ್ಮ ಸಿನಿಮಾ ಆಯ್ತು ಎಂದು ಬದುಕುತ್ತಿದ್ದ ಚಿರು, ಯಾರಿಗೂ ನೋವು ಮಾಡುತ್ತಿದ್ದವರಲ್ಲ. ತಾವಾಯಿತು ತಮ್ಮ ಸಿನಿಮಾವಾಯ್ತು ಎಂದು ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಡೆಡಿಕೇಶನ್ ಇಟ್ಟಿದ್ದಂತಹ ಚಿರು, ತಮ್ಮ ನಗುಮೊಗದಿಂದಲೇ ಎಲ್ಲರನ್ನ ಗೆಲ್ಲುತ್ತಿದ್ದರು.
ಸದ್ಯ ಇದೀಗ ಮೇಘನ ರವರ ಬಾಳಿಗೆ ಬೆಳಕಾಗಿ ಬಂದಿರುವುದು ಅವರಿಬ್ಬರ ಪ್ರೀತಿಯ ಸಂಕೇತ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ. ಹೌದು ಸದ್ಯ ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರುವ ಮೇಘನರಾಜ್ ಬಿಗ್ ಸ್ಕ್ರೀನ್ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಮೇ 2 2018 ರಂದು ಕ್ರೈಸ್ತ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಂಬಂಧಿಸಿದ ರೀತಿ ಮದುವೆ ಮಾಡಿಕೊಂಡ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಈ ಲೇಖನಿಯಲ್ಲಿದ್ದು ತಪ್ಪದೆ ವೀಕ್ಷಿಸಿ.