ನಗುವಿನ ಒಡೆಯ, ರಾಜಕುಮಾರ, ಹೃದಯವಂತ ವ್ಯಕ್ತಿ, ಕರುಣಾಮಯಿ ಎಲ್ಲರ ಪ್ರೀತಿಯ ಅಪ್ಪು ಇಲ್ಲವಾಗಿ ದಿನಗಳು ಉರುಳುತ್ತಲೇ ಇದೆ. ಆದರೆ ಅವರ ನೆನಪು ಮಾತ್ರ ಶಾಶ್ವತ.
ಪುನೀತ್ ರಾಜ್ಕುಮಾರ್ ಮುಗ್ಧ ಮನಸ್ಸಿನ ಹೃದಯ ವಂತ ವ್ಯಕ್ತಿ. ಇಂತಹ ವ್ಯಕ್ತಿಯೂ ಯಾವುದೇ ಸೂಚನೆ ನೀಡದೇ ಹೊರಟೆ ಬಿಟ್ಟರು.ಅಂದಹಾಗೆ, ಅವರಿಗೆ ಚಿತ್ರರಂಗದವರು ‘ಪುನೀತ ನಮನ’ ಕಾರ್ಯಕ್ರಮದ ಮೂಲಕ ನವೆಂಬರ್ 16 ರಂದು ಶ್ರದ್ಧಾಂಜಲಿ ಅರ್ಪಿಸಿದ್ದರು.
ಇನ್ನು,ಸಿನಿಮಾ ಕ್ಷೇತ್ರ ಮತ್ತು ಸಾಮಾಜಿಕ ಕೆಲಸಗಳಲ್ಲಿ ಪುನೀತ್ ಮಾಡಿದ ಸಾಧನೆಯನ್ನು ಎಲ್ಲರೂ ಕೊಂಡಾಡಿದ್ದು, ಅಪ್ಪುವಿನ ಬಗ್ಗೆ ಮಾತನಾಡಿ ಕಂಬನಿ ಸುರಿಸಿದ್ದರು.ಅಷ್ಟೇ ಅಲ್ಲದೇ,ಅಪ್ಪು ಅವರನ್ನು ನೆನಪಿಸಿಕೊಳ್ಳುವ ಸಲುವಾಗಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸದ್ಯ ಅಪ್ಪುವಿನ ಒಂದು ದೊಡ್ಡ ಗುಣದ ಬಗ್ಗೆ ಈಗ ಡಿಬಾಸ್ ಅಭಿಮಾನಿಗಳಿಗೂ ಕೂಡ ಗೊತ್ತಗುವಂತೆ ಆಗಿದೆ. ಹೌದು ಫ್ರೆಂಡ್ಸ್ ಪುನೀತ್ ಕುಮಾರ್ ಅವರಲ್ಲಿ ಕಾಣಿಸುವಂತಹ ಮಹತ್ವದ ಗುಣವೆಂದರೆ ಅದು ತಾವು ಬೆಳೆಯುವುದರ ಜೊತೆಗೆ ತಮ್ಮೊಟ್ಟಿಗೆ ಇರುವವರನ್ನು ಬೆಳೆಸಬೇಕು ಎಂಬುದು. ಹೌದು ಪುನೀತ್ ರಾಜ್ಕುಮರ್ ಅವರಲ್ಲಿದ್ದ ಅದೊಂದು ಸ್ನೇಹ ಬಾಂಧವ್ಯವನ್ನು ಯಾವುದೇ ವೇದಿಕೆಯ ಮೇಲೆ ಎಷ್ಟು ಜನರ ಮಧ್ಯೆ ಇದ್ದರೂ ಕೂಡ ಕಾಣಬಹುದಾಗಿತ್ತು.
ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬರು ಮಾಧ್ಯಮದ ಮುಂದೆ ಬಂದು ಅಚ್ಚರಿ ಮೂಡಿಸುವಂತಹ ವಿಚಾರವೊಂದನ್ನು ಹೊರಹಾಕಿದ್ದಾರೆ. ಹೌದು ಪ್ರವೀಣ ನಾಯಕ್ ಎಂಬ ಅಪ್ಪು ಅಭಿಮಾನಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ಹಿಂದೆ ರೂಪತಾರ ಪತ್ರಿಕೆಯಲ್ಲಿ ನಾನು ಕೆಲಸ ಮಾಡುತ್ತಿದ್ದೆ ಆಗ ಪತ್ರಿಕೆಯ ಫ್ರೆಂಟ್ ಪೇಜ್ಗಾಗಿ ಪುನೀತ್ ರಾಜಕುಮಾರ್ ಅವರ ಫೋಟೋ ಬೇಕು ಎಂದು ನಾನು ಅವರ ಬಳಿ ಕೇಳಿದಾಗ ಆ ದೇವತಾ ಮನುಷ್ಯ ನನಗೆ ಆ ರೀತಿಯಾದಂತಹ ಪಬ್ಲಿಸಿಟಿಗೆ ಎಲ್ಲಾ ಇಷ್ಟವಿಲ್ಲ.
ನಾನು ಜನರ ಮಧ್ಯೆ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದೇನೆ ಈಗ ಬೆಳೆಯುತ್ತಿರುವಂತಹ ನನ್ನ ಸ್ನೇಹಿತರಿಗೆ ಸಹಾಯ ಮಾಡುವ ಸಮಯವಿದು. ಆದ್ದರಿಂದ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿದೆ ನೀವು ನಿಮ್ಮ ಪತ್ರಿಕೆಯಲ್ಲಿ ಅವರ ಫೋಟೋ ಹಾಕುವುದರಿಂದ ಸಿನಿಮಾದ ಪ್ರಮೋಷನ್ ಮಾಡಿದಂತಾಗುತ್ತದೆ.