Dhanush: ವೈರಲ್ ಆಗುತ್ತಿದೆ ರಜನೀಕಾಂತ್ ಮಗಳಿಗೆ ಡಿವೋರ್ಸ್ ಕೊಟ್ಟ ಧನುಷ್ ಮಾಡಿರುವ ಕೆಲಸ

ರಜನೀಕಾಂತ್ (Rajanikanth) ಮಗಳು ಸೌಂದರ್ಯಗೆ  ( Soundarya) ಡಿವೋರ್ಸ್ ಕೊಡುವ ಮೂಲಕ ನಟ ಧನುಷ್ (Dhanush) ಕೆಲ ತಿಂಗಳ ಹಿಂದೆ ಸುದ್ದಿಯಾಗಿದ್ದರು.

ಟಾಲಿವುಡ್ ನ ಖ್ಯಾತ ನಟ ಧನುಷ್ ಹಾಗೂ ಐಶ್ವರ್ಯ ರವರಿಂದ ಬೇಸರದ ಸಂಗತಿಯೊಂದನ್ನು ಬಹಿರಂಗವಾಗಿದ್ದು ಬರೋಬ್ಬರಿ 18 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಐಶ್ವರ್ಯ ಹಾಗೂ ಧನುಷ್ ಸಧ್ಯ ಇದೀಗ ದೂರಾಗಲು ನಿರ್ಧರಿಸಿದ್ದಾರೆ.

ತಾವು ಬೇರೆ ಬೇರೆಯಾಗುತ್ತಿರುವ ವಿಷಯವನ್ನು ಸಮಾಜಿಕ ಜಾಲತಾಣದ ಮೂಲಕವೇ ಐಶ್ವರ್ಯ ಮತ್ತು ಧನುಷ್ ತಿಳಿಸಿದ್ದು ಈ ವಿಚಾರ ಅಭಿಮಾನಿಗಳಿಗೆ ಮಾತ್ರವಲ್ಲದೇ ಸ್ವತಃ ಐಶ್ವರ್ಯ ರವರ ತಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕೂಡ ಬಹಳ ನೋವುಂಟು ಮಾಡಿತ್ತು.

ಮಗಳ ಸಂಸಾರದಲ್ಲಿ ಮೂಡಿರುವ ಬಿರುಕನ್ನು ಸರಿಪಡಿಸಲು ರಜನಿಕಾಂತ್ ರವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹೌದು ಮಗಳ ಸಂಸಾರದ ವಿಚಾರವನ್ನು ರಜನಿ ಸರ್ ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಐಶ್ವರ್ಯ ಮತ್ತು ಧನುಷ್ ಅವರ ಮನಸ್ತಾಪ ಕೇವಲ ತಾತ್ಕಾಲಿಕ ಎಂಬುದು ಅವರ ನಂಬಿಕೆ.

ಸಂಸಾರವನ್ನು ಸರಿಪಡಿಸಿಕೊಳ್ಳುವಂತೆ ಮಗಳಿಗೆ ರಜನಿಕಾಂತ್ ಬುದ್ಧಿಮಾತು ಹೇಳಿದ್ದು ಮನಸ್ತಾಪವನ್ನು ಮರೆತು ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ರಾಜಿ ಮಾಡಿಕೊಳ್ಳುವಂತೆ ದಂಪತಿಗೆ ಎರಡೂ ಕುಟುಂಬಗಳು ಒತ್ತಡ ಹೇರುತ್ತಿವೆ ಎಂದೂ ಕೂಡ ವರದಿಯಾಗಿತ್ತು.

Join Nadunudi News WhatsApp Group

ಐಶ್ವರ್ಯ ಮತ್ತು ಧನುಷ್ ಮಧ್ಯೆ ಮನಸ್ತಾಪ ಮೂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ದಂಪತಿಗಳ ಮಧ್ಯೆ ಕಿತ್ತಾಟ ಜಗಳ ನಡೆದಿದ್ದು ಪ್ರತಿ ಬಾರಿಯೂ ಕೂಡ ಭಿನ್ನಾಭಿಪ್ರಾಯ ಭುಗಿಲೆದ್ದಾಗ ಐಶ್ವರ್ಯ ಮತ್ತು ಧನುಷ್ ಜೊತೆಗೆ ಮಾತನಾಡಿ ಇಬ್ಬರೂ ಒಟ್ಟಿಗೆ ಇರುವಂತೆ ಮನವೊಲಿಸುವಲ್ಲಿ ರಜನಿಕಾಂತ್ ರವರು ಯಶಸ್ವಿಯಾಗುತ್ತಿದ್ದರು.

ಹೌದು ಈ ಬಾರಿಯೂ ಐಶ್ವರ್ಯ ಹಾಗೂ ಧನುಷ್ ಮಧ್ಯೆ ಮೂಡಿರುವ ಮನಸ್ತಾಪದ ಬೆಂಕಿಯನ್ನು ಶಮನ ಮಾಡುವಲ್ಲಿ ರಜನಿಕಾಂತ್ ಯಶಸ್ವಿಯಾಗುತ್ತಾರಾ ಕಾದು ನೋಡಬೇಕಿದೆ.

ಇನ್ನು ರಜನಿಕಾಂತ್ ಹಾಗೂ ಲತಾ ದಂಪತಿಗೆ ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಮಕ್ಕಳಿದ್ದು ಹಿರಿಯ ಪುತ್ರಿ ಐಶ್ವರ್ಯ ನಟ ಧನುಷ್‌ರನ್ನ ಮದುವೆಯಾಗಿದ್ದರೆ. ಕಿರಿಯ ಪುತ್ರಿ ಸೌಂದರ್ಯ ಅವರ ವಿವಾಹ ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ಎಂಬುವರ ಜೊತೆ ನೆರವೇರಿದ್ದು ಆದರೆ ಸೌಂದರ್ಯ ಹಾಗೂ ಅಶ್ವಿನ್ ರಾಮ್ ರಾಮ್ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ.

2017ರಲ್ಲಿ ಅಶ್ವಿನ್ ರಾಮ್‌ಕುಮಾರ್ ಹಾಗೂ ಸೌಂದರ್ಯ ವಿಚ್ವೇದನ ಪಡೆದಿದ್ದು ಕಿರಿಯ ಪುತ್ರಿ ವಿಚ್ಛೇದನ ಪಡೆದಾಗ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಮಗಳ ಸಂಸಾರ ಮುರಿದುಬಿತ್ತು ಎಂದು ರಜನಿಕಾಂತ್ ತೀವ್ರವಾಗಿ ಮನನೊಂದಿದ್ದರು. ಇದೀಗ ಐಶ್ವರ್ಯ ಬಾಳಲ್ಲೂ ಕೂಡ ಹೀಗಾಗಿರುವುದು ರಜನಿಗೆ ನಿದ್ದೆಯೇ ಬರದಂತಾಗಿದೆ.

ಇನ್ನು ಧನುಷ್ ಮತ್ತು ಐಶ್ವರ್ಯಾ ನಡುವೆ ಬಿನ್ನಾಭಿಪ್ರಾಯವಿದ್ಧರು ಇದುವರೆಗೆ ಯಾವುದೇ ವಿವಾದಗಳಿಲ್ಲ. ಹೌದು ಮೇಲಾಗಿ ಧನುಷ್ ಸದಾ ವಿವಾದಗಳಿಂದ ದೂರ ಉಳಿದಿದ್ದು ಧನುಷ್ ತನ್ನ ಕೆಲಸವನ್ನು ತಾನೇ ಮಾಡಿಕೊಂಡರೆ ಐಶ್ವರ್ಯಾ ಸಹ ತಂದೆ ರಜನಿಕಾಂತ್ ಅವರಂತೆ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯುತ್ತಿದ್ದಾರೆ.

 

ಸದ್ಯ ಇದೀಗ ಧನುಷ್ ಹಾಗೂ ಐಶ್ವರ್ಯ ಬಗ್ಗೆ ಹೊರ ಬಂದಿರುವ ವರದಿ ಅವರ ಹಾಗೂ ರಜನಿಕಾಂತ್ ಅಭಿಮಾನಿಗಳಿಗೆ ಸಮಾಧಾನ ಕೊಟ್ಟಿದ್ದು ಸದ್ಯಕ್ಕೆ ಅವರು ತಮ್ಮ ವಿಚ್ಛೇದನದ ನಿರ್ಧಾರವನ್ನು ತಡೆಹಿಡಿಯಲು ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ. ತಮ್ಮ ನಡುವಿನ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಿರುವ ದಂಪತಿ ವಿಚ್ಛೇದನವನ್ನು ತಡೆಹಿಡಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ಧನುಷ್ ಹಾಗೂ ಐಶ್ವರ್ಯಾ ಅವರ ಕುಟುಂಬ ಸದಸ್ಯರು ರಜನಿಕಾಂತ್ ಅವರ ಮನೆಯಲ್ಲಿ ಭೇಟಿಯಾಗಿದ್ದು ಈ ವೇಳೆ ದಂಪತಿ ತಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಹೌದು ತಮ್ಮ ದಾಂಪತ್ಯ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಧನುಷ್ 2004 ರಲ್ಲಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದು ಅವರು 18 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದರು. ಇದಾದ ಬಳಿಕ ಜನವರಿ 2022 ರಲ್ಲಿ ದಂಪತಿ ವಿಚ್ಛೇದನ ಪಡೆಯುವುದಾಗಿ ಘೋಷಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದರು.

Join Nadunudi News WhatsApp Group