ನಮ್ಮ ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಸ್ಥಾನಮವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬ, ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಹುಣ್ಣಿಮೆ ಮತ್ತು ಅಮಾವಾಸ್ಯೆ ಬಹಳ ಕೆಟ್ಟ ದಿನಗಳು ಆದರೆ ಇನ್ನು ಕೆಲವು ಅಮಾವಾಸ್ಯೆ ಹುಣ್ಣಿಮೆ ಬಹಳ ಒಳ್ಳೆಯ ದಿನಗಳು ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ನಾಳೆ ಹೋಳಿ ಹುಣ್ಣಿಮೆ, ನಾಳೆ ಜನರು ಬಣ್ಣವನ್ನ ಹಾಕುವುದರ ಮೂಲಕ ಹೋಳಿ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಜನರು ಒಬ್ಬರಿಗೆ ಒಬ್ಬರು ಬಣ್ಣವನ್ನ ಹಾಕುವುದರ ಮೂಲಕ ಹೋಳಿ ಹಬ್ಬವನ್ನ ಆಚರಣೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ದಿನ ಬಹಳ ಶಕ್ತಿಶಾಲಿಯಾದ ದಿನವಾಗಿದ್ದು ಯಾರು ಕೂಡ ಈ ತಪ್ಪುಗಳನ್ನ ಮಾಡಬಾಬಾರದು ಮತ್ತು ಮಾಡಿದರೆ ನಿಮಗೆ ಕಷ್ಟಗಳು ತಪ್ಪಿದ್ದಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೋಳಿ ಹಬ್ಬದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಹೋಳಿ ಹಬ್ಬವನ್ನ ಭಗವಂತ ಶ್ರೀಕೃಷ್ಣ ಹೆಚ್ಚಾಗಿ ಆಚರಣೆ ಮಾಡಿದ ಕಾರಣ ಈ ಹಬ್ಬವನ್ನ ಕೃಷ್ಣನ ಹಬ್ಬವೆಂದು ಕರೆಯಲಾಗುತ್ತದೆ.
ಶಾಸ್ತ್ರದಲ್ಲಿ ಹೋಳಿ ಹುಣ್ಣಿಮೆಯ ಬಗ್ಗೆ ಬಹಳ ಬರೆಯಲಾಗಿದೆ ಎಂದು ಹೇಳಬಹುದು. ಇನ್ನು ಹೋಳಿ ಹಬ್ಬದ ದಿನ ಮನೆಯ ಮುಂದೆ ಬೆಂಕಿಯನ್ನ ಹಚ್ಚಿ ಮನೆಯಲ್ಲಿ ಇರುವ ಎಲ್ಲಾ ಬೇಡದ ವಸ್ತುಗಳನ್ನ ಹಾಕಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ದೂರವಾಗಲಿ ಎಂದು ಜನರು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳುತ್ತಾರೆ. ಸ್ನೇಹಿತರೆ ಶಾಸ್ತ್ರ ಹೇಳುವ ಪ್ರಕಾರ ಯಾವ ತಾಯಿಗೆ ಒಂದೇ ಮಗ ಇರುತ್ತಾನೋ ಆಕೆ ಹೊಳಿಯನ್ನ ಉರಿಸಬಾರದು. ಹೌದು ಒಂದೇ ಮಗ ಇರುವ ತಾಯಿ ನಾಳೆಯ ದಿನ ಯಾವುದೇ ಕಾರಣಕ್ಕೂ ಹೋಳಿ ಉರಿಸಬಾರದು ಮತ್ತು ನೀವು ಕಡ್ಡಾಯವಾಗಿ ಉಪವಾಸವನ್ನ ಮಾಡಬೇಕು ಮತ್ತು ಹೀಗೆ ಮಾಡುವುದರಿಂದ ನಿಮ್ಮ ಮಗನಿಗೆ ಬಹಳ ಒಳ್ಳೆಯದಾಗುತ್ತದೆ.
ಇನ್ನು ಮಹಿಳೆಯರು ಹೋಳಿಯ ದಿನ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ತಲೆಯನ್ನ ಸೆರಗಿನಿಂದ ಅಥವಾ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಹೋಳಿ ದಿನ ಕೆಟ್ಟ ಶಕ್ತಿಗಳ ಪ್ರಯೋಗ ಹೆಚ್ಚು ನಡೆಯುತ್ತದೆ ಮತ್ತು ಮಹಿಳೆಯರು ಕೂದಲನ್ನ ತೆರೆದುಕೊಂಡು ತಿರುಗಾಡುವುದರಿಂದ ನಕಾರಾತ್ಮಕ ಶಕ್ತಿ ಬೇಗನೆ ನಿಮ್ಮನ್ನ ಆಕರ್ಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಹೋಳಿ ದಿನ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನ ಕೊಡಬಾರದು ಮತ್ತು ನೀವು ಸಾಲವನ್ನ ಕೊಟ್ಟರೆ ಧನಹಾನಿ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಇನ್ನು ನಾಳೆಯ ದಿನ ಯಾವುದೇ ಕಾರಣಕ್ಕೂ ಹಿರಿಯರಿಗೆ ಎದುರು ಮಾತನಾಡಬಾರದು. ಇನ್ನು ಹೋಳಿ ದಿನ ನೀವು ಯಾವುದೇ ಕಾರಣಕ್ಕೂ ಕೇಶ ತೆಗೆಯುವ ಕೆಲಸ ಅಥವಾ ಕೈ ಕಾಲಿನ ಉಗುರುಗಳನ್ನ ತೆಗೆಯುವ ಕೆಲಸವನ್ನ ಮಾಡಬಾರದು ಮತ್ತು ಹೀಗೆ ಮಾಡುವುದು ಅಶುಭ ಎಂದು ಹೇಳಲಾಗಿದೆ. ಸ್ನೇಹಿತರೆ ನೀವು ಹೋಳಿ ಹಬ್ಬವನ್ನ ಯಾವ ರೀತಿ ಆಚರಣೆ ಮಾಡುತ್ತೀರಿ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.