ಸಾಮಾನ್ಯವಾಗಿ ಹುಚ್ಚ ವೆಂಕಟ್ ರವರ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ. ಹೌದು ಆರ ಬಗ್ಗೆ ನಿಮ್ಮಗೆ ಚೆನ್ನಾಗಿ ಗೊತ್ತಿರುತ್ತದೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ನಿರ್ಮಾಪಕನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದು ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ ಹುಚ್ಚ ವೆಂಕಟ್ ರವರು. ಇನ್ನು ಬಿಗ್ ಬಾಸ್ ಮನೆಗೆ ಸಹ ಸ್ಪರ್ಧಿಯಾಗಿ ಬಂದು ವಿವಾದಕ್ಕೆ ಕಾರಣವಾಗಿದ್ದರು ಅವರು ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು.
ಸದ್ಯ ಹುಚ್ಚ ವೆಂಕಟ್ ಅವರು ಇದೀಗ ಪ್ರೆಸ್ ಮೀಟ್ ಮಾಡಿ ತಾವು ಚಿತ್ರರಂಗಕ್ಕೆ ವಾಪಸ್ ಬರುವ ಬಗ್ಗೆ ಮಾತನಾಡಿದ್ದಾರೆ. ಹೌದು ಹಲವು ಕಷ್ಟಗಳನ್ನು ನೋಡಿರುವ ಹುಚ್ಚ ವೆಂಕಟ್ ಅವರ ಬ್ಯಾಂಕ್ ಬ್ಯಾಲೆನ್ಸ್ ಈಗ ಎಷ್ಟಿದೆ ಗೊತ್ತಾ? ಒಂದು ಸಂದರ್ಶನದಲ್ಲಿ ಇದರ ಬಗ್ಗೆ ಹೇಳಿದ್ದೇನು ಎಂದು ತಿಳಿಯಲು ಮುಂದೇ ಓದಿ.
ನಟ ಹುಚ್ಚ ವೆಂಕಟ್ ರವರು ಒಳ್ಳೆಯ ಕುಟುಂಬದಲ್ಲಿ ಹುಟ್ಟಿ ಬೆಳೆದವರಾಗಿದ್ದು ಸಿನಿಮಾ ಪ್ರಪಂಚದ ಮೇಲೆ ಇವರಿಗೆ ಸೆಳೆತ ಬಹಳವಿರುತ್ತದೆ. ವೆಂಕಟ್ ಅವರು ಮೊದಲು ಫೇಮಸ್ ಆಗಿದ್ದು ಯೂಟ್ಯೂಬ್ ವಿಡಿಯೋಗಳ ಮೂಲಕ. ಹೌದು ಕನ್ನಡದ ಬಗ್ಗೆ ಕನ್ನಡಕ್ಕೆ ಕರ್ನಾಟಕಕ್ಕೆ ಗೌರವ ಕೊಡುವ ಬಗ್ಗೆ ಮಾತನಾಡಿ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಅವರು ಇದರಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.
ಅಲ್ಲದೇ ಇವರು ಮಾತನಾಡುವ ಶೈಲಿಯನ್ನು ಜನರು ತುಂಬಾ ಎಂಜಾಯ್ ಮಾಡುತ್ತಿದ್ದು ಈಗಲೂ ಕೂಡ ವೆಂಕಟ್ ಅವರು ಮಾತನಾಡುವ ಶೈಲಿಯನ್ನು ಜನ ತುಂಬಾ ಇಷ್ಟಪಡುತ್ತಾರೆ. ಹೌದು ಚಿತ್ರರಂಗಕ್ಕೂ ಕಾಲಿಟ್ಟು ಕೆಲವು ಸಿನಿಮಾಗಳಲ್ಲಿ ನಟಿಸಿದರು ತಾವೇ ನಿರ್ದೇಶನ ಮಾಡಿ ನಿರ್ಮಾಣವನ್ನು ಸಹ ಮಾಡುತ್ತಿದ್ದರು ವೆಂಕಟ್ ರವರು. ನಂತರದ ದಿನಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅತಿಥಿಯಾಗಿ ಸಹ ನಟಿಸಿದರು.
ಸದ್ಯ ಹುಚ್ಚ ವೆಂಕಟ್ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ, ನನ್ನ ಅಕೌಂಟ್ ನಲ್ಲಿ ಸುಮಾರು 4 ಕೋಟಿ ಹಣ ಅಷ್ಟೇ ಉಳಿದಿದೆ, ಆ ಅಷ್ಟೂ ಹಣವನ್ನು ನನ್ನ ಹೊಸ ಸಿನಿಮಾ ತಿಕ್ಲ ಹುಚ್ಚ ವೆಂಕಟ್ ಸಿನಿಮಾಗೆ ಹಾಕ್ತಾ ಇದ್ದೀನಿ, ಕನ್ನಡಿಗರು ದಯವಿಟ್ಟು ನನ್ನನ್ನು ಗೆಲ್ಲಿಸಿ” ಎಂದು ಹುಚ್ಚ ವೆಂಕಟ್ ಅವರು ಮಾಧ್ಯಮಗಳ ಜೊತೆ ಮಾತಾಡಿ ಭಾವುಕರಾಗಿದ್ದಾರೆ. ಸಿನಿಮಾಗಳಿಲ್ಲದೆ ಆರ್ಥಿಕ ಸಮಸ್ಯ ಇಂದ ಕಷ್ಟಪಡುತ್ತಿದ್ದ ವೆಂಕಟ್ ಅವರಿಗೆ ಸಹಾಯ ಸಿಕ್ಕಿದ್ದು ಯೂಟ್ಯೂಬ್ ಚಾನೆಲ್ ಗಳ ಮೂಲಕ.
ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕರಾಗಿದ್ದಾರೆ. ಇವರು ಜನಿಸಿದ್ದು ಸೆಪ್ಟೆಂಬರ್ 19, ನಂದು ಬೆಂಗಳೂರಿನಲ್ಲಿ. ಇವರ ತಂದೆ ಎಮ್.ಲಕ್ಷ್ಮಣ್ ತಾಯಿ ಗೌರಮ್ಮ. ಇವರು ಡಿಪ್ಲಮೋ ಇನ್ ಸಿವಿಲ್ ಇಂಜಿನಿಯರ್ ಕೋರ್ಸ್ ನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ಇವರು ಕನ್ನಡ ಬಿಗ್ ಬಾಸ್ ಶೋ ಮುಖಾಂತರ ಎಲ್ಲರಿಗೂ ಚಿರಪರಿಚಿತರಾದರು.