ಪ್ರೇರಣಾ ಸೀಮಂತ ಕಾರ್ಯಕ್ಕೆ ಬಾರದ ಮೇಘನಾ ರಾಜ್, ಕಾರಣ ಬಹಿರಂಗ

ಸದ್ಯ ಸರ್ಜಾ ಕುಟುಂಬ ಮತ್ತೊಬ್ಬ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದು ಇತ್ತೀಚೆಗಷ್ಟೆ ಪತ್ನಿ ಪ್ರೇರಣಾರವರ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿ ಧ್ರುವ ಸರ್ಜಾ ರವರು ಶೀಘ್ರದಲ್ಲೇ ತಂದೆಯಾಗುತ್ತಿರುವ ಸಿಹಿಸುದ್ದಿ ನೀಡಿದ್ದರು. ಸೆಪ್ಟೆಂಬರ್ 7 ರಂದು ಖಾಸಗಿ ಹೋಟೆಲ್‌ನಲ್ಲಿ ಪ್ರೇರಣಾ ಸೀಮಂತ ಕಾರ್ಯ ನಡೆದಿದ್ದು ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದ ಆಪ್ತರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಎ. ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದು ಆದರೂ ಬಿಡುವು ಮಾಡಿಕೊಂಡು ಮಡದಿಗೆ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಹೌದು ಪ್ರೇರಣಾ ಆಸೆಯಂತೆ ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದು ಚಿರಂಜೀವಿ ಸರ್ಜಾ ಅಗಲಿದ ನಂತರ ಮೇಘನಾ ರಾಜ್ ಪುತ್ರ ರಾಯನ್‌ ಸರ್ಜಾಗೆ ಜನ್ಮ ನೀಡಿದ್ದರು. ಇನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಕೊನೆಯುಸಿರೆಳೆದಿದ್ದು ಈಗ ಮತ್ತೊಬ್ಬ ಅತಿಥಿ ಸರ್ಜಾ ಕುಟುಂಬಕ್ಕೆ ಬರುತ್ತಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ತಂದಿದೆ.

8 ತಿಂಗಳು ಪೂರೈಸಿ ಪ್ರೇರಣಾಗೆ 9 ತಿಂಗಳಾಗಿದ್ದು ಇದೇ ಸಮಯದಲ್ಲಿ ಸೀಮಂತಾ ಕಾರ್ಯ ನೆರವೇರಿಸಲಾಗಿದ್ದು ಇದೇ ತಿಂಗಳು ಧ್ರುವ ಸರ್ಜಾ ಮಗ ಅಥವಾ ಮಗಳ ನಿರೀಕ್ಷೆಯಲ್ಲಿ ಇದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದ ಜೊತೆಗೆ ಪ್ರೇರಣಾ ಕುಟುಂಬವೂ ಭಾಗಿಯಾಗಿದ್ದು ಬಹಳ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಚಿತ್ರರಂಗದ ಗಣ್ಯಾತಿ ಗಣ್ಯರು ಶುಭ ಕಾರ್ಯಕ್ಕೆ ಬಂದು ಪ್ರೇರಣಾಗೆ ಆಶೀರ್ವದಿಸಿದ್ದಾರೆ. ಆದರೆ ಮೇಘನಾ ರಾಜ್ ರವರು ಸೀಮಂತ ಶಾಸ್ತ್ರಕ್ಕೆ ಹಾಜರಿ ಇಲ್ಲದ ಕಾರಣ ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೌದು ಮೇಘನಾ ಬರದೇ ಇರಲು ಕಾರಣವೇನು? ಸರ್ಜಾ ಕುಟುಂಬದ ಜೊತೆ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಕೂಡ ಎದ್ದಿದೆ.

ಆದರೆ ಅಸಲಿ ಕಾರಣವೇ ಬೇರೆ ಎದ್ದು ಕಳೆದ ವಾರ ಒಂದು ಕಾರ್ಯಕ್ರಮದ ನಿಮಿತ್ತ ಮೇಘನಾ ವಿದೇಶಕ್ಕೆ ಹೋಗಿದ್ದಾರೆ. ಅವರು ಇನ್ನು ಕೂಡ ಹಿಂತಿರುಗದೆ ಇರುವ ಕಾರಣ ಸೀಂಮತ ಕಾರ್ಯಕ್ರಮಕ್ಕೆ ಆಗಮಿಸಿಲ್ಲವಷ್ಟೆ. ಆದರೆ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಇನ್ನು ಜೂನಿಯರ್ ಚಿರು ಮಾತ್ರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಧ್ರುವ ಎತ್ತಿ ಆಡಿಸುವ ಫೋಟೋ ವೈರಲ್ ಆಗಿದೆ.

Join Nadunudi News WhatsApp Group

ಇನ್ನು 4 ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಧ್ರುವ ಸರ್ಜಾ ಮಾರ್ಟಿನ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದೆ ಚಿತ್ರತಂಡ.ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 30ಕ್ಕೆ ಮಾರ್ಟಿನ್ ಸಿನಿಮಾ ರಿಲೀಸ್ ಅಗಬೇಕಿತ್ತು. ಬಹಳ ಅದ್ಧೂರಿ ಸಿನಿಮಾ ಆಗಿರುವುದರಿಂದ ಚಿತ್ರೀಕರಣ ತಡವಾಗ್ತಿದೆ. ಹಾಗಾಗಿ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್ ಮಾಡಿತ್ತು ಚಿತ್ರತಂಡ.

Join Nadunudi News WhatsApp Group