ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯಾಗಳನ್ನ ಜಾರಿಗೆ ತರಲಾಗುತ್ತಿದ್ದು ಇದರ ಸದುಪಯೋಗವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದ ಜನರ ಅನುಕೂಲದ ದೃಷ್ಟಿಯಿಂದ ದೇಶದಲ್ಲಿ ಅನೇಕ ಯೋಜನೆಯನ್ನ ಜಾರಿಗೆ ತರಲಾಗಿದ್ದು ಕೆಲವು ಜನರು ಈ ಯೋಜನೆಯ ಲಾಭವನ್ನ ಪಡೆದುಕೊಂಡರೆ ಇನ್ನು ಕೆಲವರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿಯಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಹೌದು ಕೂಲಿ ಕಾರ್ಮಿಕರು ದಿನದ ಲೆಕ್ಕದಲ್ಲಿ ಕೂಲಿಯನ್ನ ಪಡೆದುಕೊಂಡು ತಮ್ಮ ಹೊಟ್ಟೆಯನ್ನ ತುಂಬಿಸಿಕೊಳ್ಳುತ್ತಾರೆ ಎಂದು ಹೇಳಬಹುದು.
ಇನ್ನು ಕೂಲಿ ಕಾರ್ಮಿಕರಿಗೆ ದಿನಕ್ಕೆ ಇಂತಿಷ್ಟು ಕೂಲಿಯನ್ನ ನಿಗದಿ ಮಾಡಲಾಗಿದ್ದು ಅವರು ಬೆಳಿಗ್ಗೆಯಿಂದ ಸಂಜೆಯ ತನಕ ಬಿಲಿಸಿನಲ್ಲಿ ಕಷ್ಟಪಟ್ಟು ದುಡಿದು ದಿನಗೂಲಿಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಇಂತಹ ಕಾರ್ಮಿಕರ ಅನುಕೂಲದ ದೃಷ್ಟಿಯಿಂದ ಈಗಾಗಲೇ ಅನೇಕ ಯೋಜನೆಯನ್ನ ಜಾರಿಗೆ ತರಲಾಗಿದ್ದು ಈಗ ಮತ್ತೆ ಕೇಂದ್ರ ಸರ್ಕಾರ ದೇಶದಲ್ಲಿ ಇರುವ ಎಲ್ಲಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿಯನ್ನ ನೀಡಿದೆ ಎಂದು ಹೇಳಬಹುದು. ಹಾಗಾದರೆ ಕೇಂದ್ರ ಸರ್ಕಾರ ನೀಡಿದ ಆ ಸಿಹಿಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ದೇಶದಲ್ಲಿ ಕೆಲಸವ ಮಾಡುವ ಎಲ್ಲಾ ಕೂಲಿ ಕಮಿಕರಿಗೆ ತಲುಪಿಸಿ.
ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ದೇಶದ ಕೂಲಿ ಕಾರ್ಮಿಕರಿಗೆ ಮತ್ತೊಂದು ದೊಡ್ಡ ಸಿಹಿ ಸುದ್ದಿಯನ್ನ ನೀಡಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ದಿನಗೂಲಿಯನ್ನು 14 ರೂಪಾಯಿ ಹೆಚ್ಚಿಸಲಾಗಿದೆ. ಸದ್ಯ ದೇಶದಲ್ಲಿ ನೆರೇಗಾ ಕೆಲಸಕ್ಕೆ 275 ರೂಪಾಯಿ ಕೂಲಿಯನ್ನ ನೀಡಲಾಗುತ್ತಿದೆ ಮತ್ತು ಇದು ಮುಂದಿನ ತಿಂಗಳಲ್ಲಿ 289 ರೂಪಾಯಿ ಆಗಲಿದೆ. ಇನ್ನು ಕೇಂದ್ರ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ನೂತನ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಇನ್ನು ದೇಶದ ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರತಿಯೊಬದು ಬಡ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆ ಇಲ್ಲದಂತೆ ಉದ್ಯೋಗವನ್ನ ನೀಡಿ ಅವರಿಗೆ ವೇತನ ಕೊಟ್ಟು ಬಡವರ ಆರ್ಥಿಕ ಸಾಮಾರ್ಥ್ಯ ಹೆಚ್ಚಿಸುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹಿಂದೆ 275 ರೂಪಾಯಿಯನ್ನ ದಿನದ ಕೂಲಿ ರೂಪದಲ್ಲಿ ನೀಡಲಾಗುತ್ತಿತ್ತು, ಆದರೆ ಮುಂದಿನ ತಿಂಗಳಿಂದ ಹೆಚ್ಚುವರಿಯಾಗಿ 14 ರೂಪಾಯಿಯನ್ನ ಸೇರಿಸಿ 289 ರೂಪಾಯಿಯನ್ನ ದಿನಗೂಲಿಯಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ. ಸ್ನೇಹಿತರೆ ಕೇಂದ್ರ ಸರ್ಕಾರದ ಈ ಆದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.