ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಡಜನರ ಅನುಕೂಲದ ದೃಷ್ಟಿಯಿಂದ ಮತ್ತು ಅವರ ಕುಟುಂಬ ಪೋಷಣೆಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಜನರು ಅದರ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗ್ಯಾಸ್ ಸಂಪರ್ಕರವನ್ನ ಹೊಂದಿದ್ದಾರೆ ಎಂದು ಹೇಳಬಹುದು.
ದೇಶದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದನಂತರ ದೇಶದ ಪ್ರತಿಯೊಂದು ಕುಟುಂಬದವರೂ ಕೂಡ ಗ್ಯಾಸ್ ಸಂಪರ್ಕವನ್ನ ತಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಸಮೀಕ್ಷೆಯ ಪ್ರಕಾರ ಇನ್ನು ಹಲವು ಕುಟುಂಬಗಳು ಗ್ಯಾಸ್ ಸಿಲಿಂಡರ್ ಸಮಪ್ರಕವನ್ನ ಇನ್ನು ಕೂಡ ಪಡೆದುಕೊಂಡಿಲ್ಲ ಅನ್ನುವುದು ಇತ್ತೀಚಿನ ದಿನಗಳಲ್ಲಿ ತಿಳಿದು ಬಂದಿದೆ. ಇನ್ನು ಈಗ ಪ್ರತಿ ತಿಂಗಳು ಗ್ಯಾಸ್ಗ್ ತುಂಬಿಸಿಕೊಳ್ಳುವ, HP ಗ್ಯಾಸ್, ಭರತ್ ಗ್ಯಾಸ್ ಮತ್ತು ಇಂಡಿಯನ್ ಗ್ಯಾಸ್ ಹೀಗೆ ಎಲ್ಲಾ ಗ್ಯಾಸ್ ಕಂಪನಿಗಳ ಗ್ರಾಹಕರಿಗೆ ಮತ್ತು ಇಲ್ಲಿಯ ತನಕ ಉಚಿತ ಗ್ಯಾಸ್ ಪಡೆಯದೇ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸಿಹಿ ಸುದ್ದಿಯನ್ನ ನೀಡಲಾಗಿದೆ ಎಂದು ಹೇಳಬಹುದು.
ಹಾಗಾದರೆ ಏನದು ಸಿಹಿ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಮತ್ತೆ ದೇಶದಲ್ಲಿ ಸುಮಾರು ಒಂದು ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನ ನೀಡಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ ಬಡವರ ಬಳಿ ಒಂದು ಗುರುತಿನ ಚೀಟಿಯನ್ನ ಪಡೆಯುವ ಮೂಲಕ ಬಡವರಿಗೆ ಉಚಿತವಾಗಿ ಗ್ಯಾಸ್ ನೀಡಲಾಗುತ್ತಿದೆ. ಇನ್ನು ಈಗಾಗಲೇ ಕೇಂದ್ರ ಸರ್ಕಾರದಿಂದ ಸುಮಾರು ಎಂಟು ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕವನ್ನ ನೀಡಲಾಗಿದೆ.
ಇಲ್ಲಿಯ ತನಕ ಉಚಿತ ಗ್ಯಾಸ್ ಸಂಪರ್ಕ ಪಡೆಯದೇ ಇರುವವರು ಮತ್ತು ಹೊಸ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರು ಮತ್ತು ಇತ್ತೀಚಿಗೆ ಹೊಸದಾಗಿ ಮದುವೆಯಾಗಿ ಪ್ರತ್ಯೇಕವಾಗಿ ಕಾರ್ಡ್ ಮಾಡಿಸಿಕೊಂಡವರು ಮತ್ತು ಎಲ್ಲಾ ಬಡವರು ಹೊಸ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮ್ಮ ಮನೆಯ ಸಮೀಪ ಇರುವ ಯಾವುದೇ ಗ್ಯಾಸ್ ಆಫೀಸ್ ಗೆ ಭೇಟಿನೀಡಿ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಇನ್ನು ಜನರು ಅರ್ಜಿಯನ್ನ ಏಜೆನ್ಸಿಯಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಬಿಪಿಎಲ್ ರೇಷನ್ ಕಾರ್ಡ್, ಒಂದು ಭಾವಚಿತ್ರ, ಬ್ಯಾಂಕಿನ ಪಾಸ್ ಬುಕ್ ಮತ್ತು ಅದರ ಜೊತೆಗೆ ಆಧಾರ್ ಕಾರ್ಡ್ ಪ್ರತಿ ನೀಡಿ ಹೊಸ ಗ್ಯಾಸ್ ಸಂಪರ್ಕವನ್ನ ಪಡೆದುಕೊಳ್ಳಬಹುದಾಗಿದೆ.