Pavithra Gowda: ಖಾಕಿ ಮುಂದೆ ತಪ್ಪೊಪ್ಪಿಕೊಂಡ ಪವಿತ್ರ ಗೌಡ, ಮೊದಲೇ ದೂರು ಕೊಡುತ್ತಿದ್ದೆ ಅಂದ ದರ್ಶನ್ ಗೆಳತಿ.

ಖಾಕಿ ಮುಂದೆ ತನ್ನ ತಪ್ಪನ್ನ ಒಪ್ಪಿಕೊಂಡ ಪವಿತ್ರ ಗೌಡ

Pavitra Gowda New Update: ಸ್ಟಾರ್ ನಟ ದರ್ಶನ್ ಇದೀಗ ಕೊಲೆ ಕೇಸ್ ವಿಚಾರವಾಗಿ ಪೊಲೀಸ್ ಬಂಧನದಲ್ಲಿದ್ದಾರೆ. ದರ್ಶನ್ ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ರೇಣುಕಾ ಸ್ವಾಮಿ ಎನ್ನುವವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಸಾಕಷ್ಟಿದೆ ಎಂದು ಆರೋಪ ದಾಖಲಾಗಿದ್ದು, ಸದ್ಯ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಮಂದಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಗೆಳತಿ ಪವಿತ್ರ ಗೌಡ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ವಿಚಾರಣೆಯ ವೇಳೆ ಪವಿತ್ರ ಗೌಡ ರೇಣುಕಾ ಸ್ವಾಮಿ ಕೊಲೆ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಪವಿತ್ರ ಗೌಡ ತನಿಖೆ ವೇಳೆ ಏನು ಹೇಳಿದ್ದಾರೆ ಎನ್ನುವ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

Kannada Actress Pavitra Gowda
Image Credit: Neranews

ಖಾಕಿ ಮುಂದೆ ಉಲ್ಟಾ ಹೊಡೆದ ಪವಿತ್ರ ಗೌಡ
ಪೊಲೀಸ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಹತ್ಯೆ ಪ್ರಕರಣಕ್ಕೂ ಮುನ್ನ ನಡೆದ ಘಟನೆಯ ಬಗ್ಗೆ ಆಘಾತಕಾರಿ ಮಾಹಿತಿ ಹಂಚಿಕೊಂಡರು. ರೇಣುಕಾಸ್ವಾಮಿ ನನಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದನ್ನು ಕಂಡು ನಾನು ಪವನ್ ಗೆ (ಪವಿತ್ರಾ ಅವರ ಮನೆಗೆಲಸಗಾರ) ತೋರಿಸಿದೆ. ಅವನು ಯಾರು ಅವನ ಮೂಲ ಏನೆಂದು ಕಂಡುಹಿಡಿಯಿರಿ. ಆದರೆ, ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್ ಅವರ ಕಿವಿಗೆ ಬೀಳಬಾರದು. ಬಿದ್ದರೆ ಅನಾಹುತ ಆಗಬಹುದು ಎಂದು ಹೇಳಿದ್ದೆ’ ಎಂದರು.

ಮೊದಲೇ ದೂರು ಕೊಡುತ್ತಿದ್ದೆ ಅಂದ ದರ್ಶನ್ ಗೆಳತಿ
ಈ ವಿಷಯ ದರ್ಶನ್ ಗೆ ಗೊತ್ತಾಗಬಾರದು ಅಂತ ಬಯಸಿದ್ದೆ. ಆದರೆ ಅವರು ಕೊಲೆ ಮಾಡುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ. ಕೊಲೆ ಮಾಡ್ತಾರೆ ಎಂದು ತಿಳಿದಿದ್ದರೆ ನಾನೆ ಕಂಪ್ಲೇಂಟ್ ಕೊಟ್ಟು ಸರಿ ಮಾಡಿಕೊಳ್ಳುತ್ತಿದ್ದೆ ಎಂದು ಪವಿತ್ರ ಗೌಡ ವಿಚಾರಣೆಯ ವೇಳೆ ಹೇಳಿಕೆ ನೀಡಿದ್ದಾರೆ. ಖಾಕಿ ಮುಂದೆ ಪವಿತ್ರ ಗೌಡ ಉಲ್ಟಾ ಹೊಡೆದಿದ್ದಾರೆ. ಪವಿತ್ರ ಗೌಡ ವಿಚಾರಣೆ ವೇಳೆ ನೀಡಿದ ಹೇಳಿಕೆ ಕೊಲೆ ಕೇಸ್ ನಲ್ಲಿ ಬಿಗ್ ಟ್ವಿಸ್ಟ್ ನೀಡಿದೆ ಎನ್ನಬಹುದು. ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

pavithra gowda darshan
Image Credit: News 18

Join Nadunudi News WhatsApp Group