ದೇಶದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಹೌದು ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರಲ್ಲಿ ಇನ್ನಷ್ಟು ಭಯ ಉಂಟಾಗುವಂತೆ ಮಾಡಿದೆ ಎಂದು ಹೇಳಬಹುದು. ಇನ್ನು ರಾಜ್ಯದಲ್ಲಿ ಕರೋನ ಎರಡನೆಯ ಅಲೆ ಶುರುವಾಗಿದ್ದು ಜನರು ಬಹಳ ಎಚ್ಚರಿಕೆಯಿಂದ ಜೀವನವನ್ನ ಮಾಡಬೇಕಾಗಿದೆ ಎಂದು ಹೇಳಬಹುದು, ಇನ್ನು ಸರ್ಕಾರ ಕೆಲವು ಮಾರ್ಗಸೂಚಿಯನ್ನ ರೂಪಿಸಿದ್ದು ಜನರು ಅದಕ್ಕೆ ತಲೆಬಾಗಬೇಕಾಗಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಕರೋನ ಸೋಂಕು ತಗುಲಿರುವವರನ್ನ ಸಾಮಾನ್ಯವಾಗಿ ಕ್ವಾರಂಟೈನ್ ಮಾಡುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು.
ಹೌದು ಕರೋನ ಸೋಂಕು ಇನ್ನೊಬ್ಬರಿಗೆ ತಗುಲಬಾರದು ಅನ್ನುವ ಉದ್ದೇಶದಿಂದ ಅವರನ್ನ ಕ್ವಾರಂಟೈನ್ ಮಾಡುತ್ತಾರೆ, ಆದರೆ ಇಲ್ಲೊಬ್ಬ ಹುಡುಗಿಗೆ ಊರಿನ ಜನರು ಮಾಡಿರುವ ಕೆಲಸವನ್ನ ನೋಡಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಮತ್ತು ಈ ಘಟನೆಯನ್ನ ಕೇಳಿದರೆ ನಿಮಗೂ ಕೂಡ ಬೇಸರ ಆಗುತ್ತದೆ ಎಂದು ಹೇಳಬಹುದು. ಹಾಗಾದರೆ ಕರೋನ ತಗುಲಿದ ಈ ಹುಡುಗಿಗೆ ಊರಿನ ಜನರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೆಡೊಯುತ್ತೀವಿ ಪೂರ್ತಿಯಾಗಿ ಓದಿ ಮತ್ತು ಊರಿನ ಜನರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.
ಹೌದು ಒಬ್ಬ ವ್ಯಕ್ತಿಗೆ ಕರೋನ ಬಂದಿದೆ ಅಂದಮಾತ್ರಕ್ಕೆ ಆತನನ್ನ ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು ಮತ್ತು ಆತನನ್ನ ಒಬ್ಬ ಸಾಮಾನ್ಯವಾಗಿ ರೋಗಿಯನ್ನಾಗಿ ನೋಡಬೇಕು ಈನ್ದು ಎಷ್ಟೇ ಅರಿವನ್ನ ಮೂಡಿಸಿದರು ಕೆಲವು ನಾಚಿಕೆಗೇಡಿನ ಸಂಗತಿಗಳು ಪ್ರತಿದಿನ ನಡೆಯುತ್ತಿದೆ ಎಂದು ಹೇಳಬಹುದು. ಹೌದು ಕರೋನ ಸೋಂಕು ಬಂದಿರುವ ಈ ಪಿಯು ವಿಧ್ಯಾರ್ಥಿಯನ್ನ ಊರಿನ ಜನರಿಕೊಂಡು 13 ದಿನಗಳ ಕಾಲ ಬಲವಂತವಾಗಿ ಊರಿನಿಂದ ಹೊರಗೆ ಹಾಕಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
13 ದಿನಗಳ ಕಾಲ ಬಲವಂತವಾಗಿ ಊರಿನಿಂದ ಹೊರಹಾಕಿದ್ದು, ಟೆಂಟ್ನಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿರುವ ಘಟನೆ ತೆಲಂಗಾಣದ ಆದಿಲ್ಬಾದ್ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಹುಡುಗಿ ತಮ್ಮ ಕುಟುಂಬದ ಜಮೀನಿನಲ್ಲಿ ಟೆಂಟ್ ಮುಂದೆ ನಿಂತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಇನ್ನು ಮಗಳ ರಕ್ಷಣೆ ಮಾಡುವ ಸಲುವಾಗಿ ತಂದೆ ಕೂಡ ಮಗಳ ಜೊತೆ ಇದ್ದು ಮಗಳನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಈ ಘಟನೆಗೆ ದೇಶದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಅವರನ್ನ ಇಂತಹ ಕ್ವಾರಂಟೈನ್ ನಿಂದ ಮುಕ್ತ ಮಾಡಿ ಮನೆಯಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಜನರ ಒತ್ತಾಯ ಮಾಡುತ್ತಿದ್ದಾರೆ.
ಕೋವಿಡ್ ರೋಗಿಗಳನ್ನು ಬಹಿಷ್ಕರಿಸುವುದು ಅಮಾನವೀಯ. ಕರೊನಾ ವಿರುದ್ಧ ಹೋರಾಡುವಾಗ ಒಬ್ಬರಿಗೊಬ್ಬರು ಸಹಕಾರ ನೀಡಿ, ಮುಂದೆ ಸಾಗಬೇಕು. ಕರೊನಾ ಬಂದಿದ್ದಕ್ಕೆ ಹುಡುಗಿಯನ್ನು ಹೊರಹಾಕಿದ ಘಟನೆ ದುರಾದೃಷ್ಟಕರ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ತೆಲಂಗಾಣ ಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆಂದು ಕಿಸನ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ. ಸ್ನೇಹಿತರೆ ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.