ಕನ್ನಡ ಚಿತ್ರರಂಗದ ಕುಲರತ್ನ ಅಭಿಮಾನಿಗಳ ಕೋಹಿನೂರ್ ವಜ್ರ ಕರುನಾಡ ಜನತೆಯ ಮನೆಮನೆಯ ಮಗ ಮಾಸ್ಟರ್ ಲೋಹಿತ್ ಅಲಿಯಾಸ್ ಪುನೀತ್ ರಾಜ್ ಕುಮಾರ್ ರವರು ಕಳೆದ ಶುಕ್ರವಾರ ಇಹಲೋಕ ತ್ಯಜಿಸಿದ್ದು ಇಡೀ ಕರ್ನಾಟಕ ರಾಜ್ಯ ಕಗ್ಗತ್ತಲ್ಲಿಂದ ತುಂಬಿದ್ದು ಎಲ್ಲೆಡೆ ಸೂತಕದ ವಾತಾವರಣ ನಿರ್ಮಾಣವಾಗಿದೆ. ಹೌದು ಇಂತಹದ್ದೊಂದು ಘಟನೆ ನಮ್ಮ ಅವರಿಸಲಿದೆ ಹಾಗೂ ಕರುನಾಡಿಗೆ ಬರುತ್ತದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ ಹಾಗೂ ಊಹಿಸಿರಲಿಲ್ಲ.
ಹೌದು ದೊಡ್ಮನೆ ಕುಡಿಯ ಅಗಲಿಕೆಗೆ ಇಡೀ ಕರುನಾಡೇ ಆಘಾತಕ್ಕೆ ಒಳಗಾಗಿದ್ದು ಸರಳತೆಯಲ್ಲಿ ಸರಳವಾಗಿದ್ದ ನಟ ಪುನೀತ್ ರಾಜ್ ಕುಮಾರ್ ರವರ ಅಗಲಿಕೆ ನಿಜಕ್ಕೂ ಎಂತಹವರ ಮನ ಕೂಡ ಕಲಕುವಂತಾಗಿದೆ. ಹೌದು ಹೃದಯಾಘಾತಕ್ಕೆ ಒಳಗಾಗಿ ದಿನಾಂಕ 29 ರಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಹಲೋಕ ತ್ಯಜಿಸಿದ್ದು ಅವರ ಪುತ್ರಿ ನ್ಯೂಯಾರ್ಕ್ ನಿಂದ ಆಗಮಿಸಬೇಕಾಗಿದ್ದರಿಂದ ಕೊನೆಯ ವಿಧಿಯನ್ನು ಎರಡು ದಿನ ತಡ ಮಾಡಲಾಗಿತ್ತು.
ಇನ್ನು ಶನಿವಾರ ರಾತ್ರಿ ನ್ಯೂಯಾರ್ಕ್ ನಿಂದ ದೆಹಲಿಗೆ ದೆಹಲಿಯಿಂದ ಬೆಂಗಳೂರು ಆನಂತರ ಕಂಠೀರವ ಕ್ರೀಢಾಂಗಣಕ್ಕೆ ನಟ ಪುನೀತ್ ರಾಜ್ ಕುಮಾರ್ ರವರ ಹಿರಿಯ ಹಾಗೂ ಪ್ರೀತಿಯ ಪುತ್ರಿ ಧೃತಿ ಆಗಮಿಸಿದ್ದು ಅಂತಿಮ ದರ್ಶನ ಪಡೆದು ಅಪ್ಪನಿಗೆ ಕೊನೆಯ ವಿದಾಯ ಹೇಳಿ ಹಣೆಗೆ ಮುತ್ತಿಟ್ಟರು. ಸದ್ಯ ಇದೀಗ ಕರ್ನಾಟಕ ರತ್ನ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಡೀ ಕರ್ನಾಟಕವೇ ದುಃಖದಲ್ಲಿ ಮುಳುಗಿ ಹೋಗಿದೆ
ಇನ್ನು ಅಪ್ಪು ಅಗಲಿ 6ತಿಂಗಳುಗಳ ಒಳಗೆ ಹೋದರು ಕೂಡ ಅವರ ಸಮಾಧಿಯ ಬಳಿ ದಿನದಿಂದ ದಿನಕ್ಕೆ ಸಾವಿರಾರು ಜನ ಅಷ್ಟೇ ಯಾಕೆ ಲಕ್ಷಾಂತರ ಜನ ಆಗಮಿಸಿ ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಹೌದು ಅದರಲ್ಲಿಯೂ ಕೂಡ ಹೆಚ್ಚಾಗಿ ಮಹಿಳೆಯರು ವೃದ್ಧರು ಮತ್ತು ಮಕ್ಕಳು ಗಳು ಸಮಾಧಿಯ ಬಳಿ ಬರುತ್ತಿದ್ದು ಅಪ್ಪು ಸಮಾಧಿಯನ್ನು ನೋಡಿ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಹೌದು ಇದನ್ನು ನೋಡಿದರೆ ಗೊತ್ತಾಗುತ್ತದೆ ಪುನೀತ್ ರಾಜ್ ಕುಮಾರ್ ಸಂಪಾದನೆ ಮಾಡಿದ್ದು ಏನನ್ನ ಎಂದು.
ಇನ್ನು ಅಪ್ಪು ಕುಟುಂಬದ ಅಶ್ವಿನಿಯಾಗಲಿ ಮಕ್ಕಳಾಗಲಿ ಯಾರು ಕೂಡ ಮಾಧ್ಯಮದ ಜೊತೆ ಮಾತಾಡಿದ್ದು ಬಹಳ ವಿರಳ. ಹೀಗಿರುವಾಗ ಅಪ್ಪು ಮಗಳು ವಂದಿತ ಇತ್ತೀಚಿಗೆ sslc ಪರೀಕ್ಷೆಯಲ್ಲಿ ಉತ್ತಮವಾದ ಅಂಕದೊಂದಿಗೆ ಪಾಸ್ ಆದ ಬಳಿಕ ಮಾದ್ಯಮದವರು ಕೇಳಿದ ಅದೊಂದು ಪ್ರಶ್ನೆಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ.
ಮುಂದೇನಾಗುತ್ತೀಯ ಎಂದು ಕೇಳಿದ್ದಕ್ಕೆ ಯಾವುದೇ ರೀತಿಯದಂತಹ ದೊಡ್ಡ ಕೆಲಸಗಳಿಗೆ ಹೋಗದೆ ತಮ್ಮ ತಂದೆ ಮಾಡುತ್ತಿದಂತ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಅಪ್ಪು ಅವರ ಟ್ರಸ್ಟ್ ಅನ್ನು ಮುಂದುವರಿಸುತ್ತೇನೆ ಈ ಟ್ರಸ್ಟ್ ನಾ ಮುಖಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತೇನೆ ಹಾಗೂ ಹಿರಿಯರಿಗೆ ಆಸರೆ ಆಗುತ್ತೇನೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟರ ಮಕ್ಕಳು ದೊಡ್ಡವರದ ಮೇಲೆ ಹೀರೊ ಅಥವಾ ಹೀರೋಯಿನ್ ಅಥವಾ ದೊಡ್ಡ ಬಿಸ್ನೆಸ್ ಮ್ಯಾನ್ ಆಗಬೇಕು ಅಂತ ಬಯಸುತ್ತಾರೆ. ಆದರೆ ಅಪ್ಪು ಮಗಳು ವಂದಿತಾ ಮಾತ್ರ ಸಮಾಜಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ ನಿಜಕ್ಕೂ ಆಶ್ಚರ್ಯವೇ. ತನ್ನ ತಂದೆಯಂತೆ ಮಗಳು ದಾನ ಧರ್ಮ ಮಾಡುವಂತ ಈ ನಿರ್ಧಾರ ತೆಗೆದುಕೊಂಡಿರುವುದು ಕನ್ನಡಿಗರು ಮೆಚ್ಚಬೇಕು.