ಕನ್ನಡ ಚಿತ್ರರಂಗದಲ್ಲಿ ಸಿಂಡ್ರಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಎಂದರೆ ಸಿನಿಪ್ರೇಕ್ಷಕರಿಗೆ ಬಹಳ ಅಚ್ಚುಮೆಚ್ಚು ಅಂತಾನೇ ಹೇಳಬಹುದು. ಹೌದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಈ ನಟಿ ತನ್ನ ಅಮೋಘ ಅಭಿನಯ ಹಾಗೂ ಸೌಂದರ್ಯದಿಂದ ಅದೆಷ್ಟೋ ಪಡ್ಡೆ ಹುಡುಗರ ಮನ ಗೆದ್ದಿದ್ದರು ಅಂತಾನೇ ಹೇಳಬಹುದು. ಸದ್ಯ ಬಹುಕಾಲ ಪ್ರೀತಿಸಿದ ಯಶ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ರಾಧಿಕಾ ಪಂಡಿತ್ ರವರು ಚಿತ್ರರಂಗದಿಂದ ದೂರ ಉಳಿದು ತಮ್ಮ ಇಬ್ಬರು ಮುದ್ದು ಮಕ್ಕಳ ಜೊತೆ ಅಧ್ಬುತವಾದ ಸಮಯ ಕಳೆಯುತ್ತಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಯಾವುದೇ ವಿಚಾರವಿದ್ದರೂ ಕೂಡ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಅವರಿಗೆ ಸಂತೋಷ ನೀಡುತ್ತಿರುತ್ತಾರೆ. ಹೌದು ಸದಾ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಅದ್ಭುತವಾದ ಕ್ಷಣವನ್ನು ಹಂಚಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ರವರು ಇದೀಗ ತಮ್ಮ ಗ್ಲಾಮರ್ ವಿಷಯದಲ್ಲೂ ಕೂಡ ಬಹಳ ಬದಲಾಗಿದ್ದಾರೆ.
ನಟಿಯಾಗಿ ಗುರುತಿಸಿ ಕೊಂಡಿದ್ದ ನಟಿ ರಾಧಿಕಾ ಪಂಡಿತ್ ಚಿತ್ರರಂಗದಿಂದ ದೂರ ಉಳಿದರು ಇವರ ಬೇಡಿಕೆ ಇನ್ನು ಕಡಿಮೆಯಾಗಿಲ್ಲ. ರಾಧಿಕಾ ಪಂಡಿತ್ ಮದುವೆಯ ನಂತರ ಸಂಸಾರದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ. ಇನ್ನು ಇತ್ತೀಚಿಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ ಅವಾಗವಾಗ ಒಂದು ಪೋಸ್ಟ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸಿನೆಮಾ ರಂಗದಿಂದ ದೂರ ಉಳಿದ ನಟಿ ರಾಧಿಕಾ ಪಂಡಿತ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ನಟಿ ರಾಧಿಕಾ ಪಂಡಿತ್ ಪಾರ್ಟಿ ಅಥವಾ ಸಮಾರಂಭಗಳಿಗೆ ಅವರು ತುಂಬಾ ದುಬಾರಿ ಬಟ್ಟೆ ತೊಟ್ಟು ಕೊಳ್ಳುವುದಿಲ್ಲ. ದಿನ ನಿತ್ಯ ತುಂಬಾ ಸಿಂಪಲ್ಆಗಿ ತೋಡುವ ಡ್ರೆಸ್ ಗಳು ಕೂಡ ದುಬಾರಿ ಬೆಳೆಯಾಗಿದೆ. ‘ಹಳದಿ ಬಣ್ಣದ’ ಫ್ಲೋರಲ್ ಮ್ಯಾಕ್ಸಿ ಡ್ರೆಸ್ ತೊಟ್ಟು ರಾಧಿಕಾ ಪಂಡಿತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಇನ್ನು ರಾಧಿಕಾ ಪಂಡಿತ್ ‘6800’ ರೂ ಡ್ರೆಸ್ ನ್ನು ಡಿಸೈನ್ ಮಾಡಿದ್ದು ” ರಿತು ಕುಮಾರ್ ” ಲೇಬಲ್ ಡ್ರೆಸ್.
ಇನ್ನು ನಟಿ “ಅಮೂಲ್ಯ ಜಗದೀಶ್” ಸೀಮಂತ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಸುಂದರವಾಗಿ ಕಾಣಿಸಿಕೊಂಡಿದ್ದು ಆ ಡ್ರೆಸ್ ನ ಬೆಲೆ ‘9999’ ರೂಪಾಯಿ ತುಂಬಾ ಸಿಂಪಲ್ಲಾಗಿ ಕಾಣುವ ರಾಧಿಕಾ ಪಂಡಿತ್ ಧರಿಸಿದ ಈ ಬಟ್ಟೆ ಬೆಲೆ ಇಷ್ಟು ದುಬಾರಿಯಗಲು ಕಾರಣ ವಿದೆ ಇದು ಬಾಲಿವುಡ್ ನ ಫೇಮಸ್ ಫ್ಯಾಷನ್ ಡಿಸೈನ್ ರ್ ‘ಮಸಾಬಾ ಗುಪ್ತ’ ಡಿಸೈನ್ ಮಾಡಿದ್ದಾರೆ.
ಪಂಡಿತ್ ಅವರು ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಕೂಡ ತುಂಬಾ ಹೈಲೇಟ್ ಆಗಿದ್ದರು. ನಟಿ ರಾಧಿಕಾ ಪಂಡಿತ್ ಅವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ. ಬರೋಬ್ಬರಿ 31 ಸಾವಿರ ರೂಪಾಯಿ ಬೆಲೆಯ ದುಬಾರಿ ಡ್ರೆಸ್ ತೊಟ್ಟು ಎಲ್ಲಾರ ಎಲ್ಲಾರ ಗಮನ ಸೆಳೆದಿದ್ದಾರೆ .
ರಾಧಿಕಾ ಪಂಡಿತ್ ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಕ್ಲ್ಲೊನಿ ಕಾನ್ವೆಂಟ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ., ನಂತರ ಇವರು ಮೌಂಟ್ ಕಾರ್ಮೆಲ್ ಕಾಲೇಜ್ (ಬೆಂಗಳೂರು) ನಲ್ಲಿ ವಾಣಿಜ್ಯ (ಬಿ ಕಾಂ) ಮುಗಿಸಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಕೋರ್ಸ್ ಮುಗಿಸಿದ ನಂತರ ಶಿಕ್ಷಕಿ ಆಗಬೇಕೆಂದು ಅಪೇಕ್ಷಿಸಿದ್ದರು.
2007 ರಲ್ಲಿ, ಬಿ ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಅಶೋಕ್ ಕಶ್ಯಪ್ ನಿರ್ದೇಶನದ ಕನ್ನಡ ಭಾಷೆಯ “ನಂದ ಗೋಕುಲ” ಎಂಬ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದರು. ಅದೇ ವರ್ಷ ಮತ್ತೊಂದು ಧಾರಾವಾಹಿ ಸುಮಂಗಲಿನಲ್ಲಿ ಕಾಣಿಸಿಕೊಂಡರು.ಹೀಗೆ ಟಿವಿ ಕಿರುತೆರೆಗಳಲ್ಲಿ ನಟಿಸಿದ ರಾಧಿಕಾ ” ಮೊಗ್ಗಿನ ಮನಸ್ಸು” ಚಿತ್ರದ ಮೂಲಕ ಪ್ರಪ್ರಥಮವಾಗಿ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. ಈ ಚಿತ್ರಕ್ಕೆ ಇವರಿಗೆ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿ ನೀಡಲಾಯಿತು.